ಸಮರ

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ
ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ
ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು
ಗರಿಬಿಚ್ಚಿದಾಸೆಗಳ ನವಿಲ ಕಣ್ಣು.

ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು
ಮೌನದಲಿ ಹರಿಯುತಿದೆ ಮುರಳಿ ನಾದ
ಹೊನಲಾಗಿ ಹೊಮ್ಮುವ ಅಲೆಯಲೆಯ ಕಚ್ಚಿ
ಹಾದರದ ಹಲ್ಲೆಗೆ ಸಮರ ಸನ್ನಾಹ

ವಾಸ್ತವದ ಉಸಿರಲ್ಲಿ ಊದಿಕೊಂಡಂಥ ಕನಸು-
ಬಿಟ್ಟಂಥ ಬೇರುಗಳ ನೆಲೆಯ ಹುಡುಕಿ
ವಿಷಗೊಡಲಿಯೇಟಿನಲಿ ತುಂಡುತುಂಡಾಗಿಸುವ
ಕಲ್ಲು ಬದುಕಿನ ಬೀದಿ ಕೊನೆಯದೆಲ್ಲಿ?

ಕೊಲೆಯಾಗಿ ಬಿದ್ದಿರುವ ಕನಸಿನಾ ಚೂರುಗಳು
ಸಾವೊಪ್ಪದೆ ಸೆಣಸುತಿವೆ, ಜೀವವೆಲ್ಲಿ?
ಕಣ್ಣ ಬೆಳಕಿಗೆ ಇಲ್ಲಿ ಕತ್ತಲೆಯ ಕಿಡಿ ಹತ್ತಿ
ಬೂದಿಯಾಗಿದೆ ನೋಟ, ಭಾವವೆಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders
Next post ತಮಿಳ್ ಸೆಲ್ವಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys