ಸಮರ

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ
ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ
ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು
ಗರಿಬಿಚ್ಚಿದಾಸೆಗಳ ನವಿಲ ಕಣ್ಣು.

ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು
ಮೌನದಲಿ ಹರಿಯುತಿದೆ ಮುರಳಿ ನಾದ
ಹೊನಲಾಗಿ ಹೊಮ್ಮುವ ಅಲೆಯಲೆಯ ಕಚ್ಚಿ
ಹಾದರದ ಹಲ್ಲೆಗೆ ಸಮರ ಸನ್ನಾಹ

ವಾಸ್ತವದ ಉಸಿರಲ್ಲಿ ಊದಿಕೊಂಡಂಥ ಕನಸು-
ಬಿಟ್ಟಂಥ ಬೇರುಗಳ ನೆಲೆಯ ಹುಡುಕಿ
ವಿಷಗೊಡಲಿಯೇಟಿನಲಿ ತುಂಡುತುಂಡಾಗಿಸುವ
ಕಲ್ಲು ಬದುಕಿನ ಬೀದಿ ಕೊನೆಯದೆಲ್ಲಿ?

ಕೊಲೆಯಾಗಿ ಬಿದ್ದಿರುವ ಕನಸಿನಾ ಚೂರುಗಳು
ಸಾವೊಪ್ಪದೆ ಸೆಣಸುತಿವೆ, ಜೀವವೆಲ್ಲಿ?
ಕಣ್ಣ ಬೆಳಕಿಗೆ ಇಲ್ಲಿ ಕತ್ತಲೆಯ ಕಿಡಿ ಹತ್ತಿ
ಬೂದಿಯಾಗಿದೆ ನೋಟ, ಭಾವವೆಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders
Next post ತಮಿಳ್ ಸೆಲ್ವಿ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…