ಆಸೆ – ಆಘಾತ

ನಿತ್ಯ ಸಾಗುತಲಿಹುದು ಜೀವನ ಭರದಿ
ಬೇಕು ಬೇಡಗಳ ತೆಗೆದು ಹಾಕುತಲಿ
ಏರಿಳಿತಗಳ ಮೆಲ್ಲನೆ ದಾಟುತಲಿ
ನಿತ್ಯವೂ ಉರುಳುತಿಹುದು ಬಾಳ ಬಂಡಿ
ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ!

ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು
ಆದರೂ ತೀರದಾ ನಾನಾ ಬಯಕೆಗಳು
ಬದುಕು ನಡೆಸಲು ನಾನಾ ವೇಷಗಳು
ಗಂಡು ಹೆಣ್ಣೆನ್ನದೇ ದುಡಿವರು ಹಗಲಿರುಳು
ಸಾಧಿಸುವ ಛಲವೊಂದೇ ನಿನ್ನ ಉಸಿರಾಗಿರಲು

ಬೇಗನೆ ಮಾಡುವ ಭರದಲಿ ಯಂತ್ರಗಳ ತಂದೆ
ಬೇಗನೆ ಸೇರುವ ತವಕದಲಿ ವಾಹನಗಳ ತಂದೆ
ನಿನ್ನ ಸ್ವಾರ್ಥಕ್ಕಾಗಿ ನಿಸರ್ಗದ ವಿರುದ್ಧ ನೀನಡೆದೆ
ನೀ ಮಾಡುವ ಕೆಲಸಗಳೆಲ್ಲಾ ಆಯ ತಪ್ಪಿದರೆ
ಬಲಿಯಾಗುವ ಮೊದಲ ಜೀವ ನಿನ್ನದೇನೆ!

ಆಸೆಗಳ ಬೆನ್ಹತ್ತಿ ನೀ ಓಡುತಲಿರುವೆ
ಹಗಲು ರಾತ್ರಿಯನ್ನದೇ ದುಡಿಯುತಲಿರುವೆ
ಆಘಾತಗಳ ಅರಿವಿಲ್ಲದೇ ನೀ ಸಾಗುತಲಿರುವೆ
ಸಾವನ್ನೂ ಲೆಕ್ಕಿಸದೇ ಮುನ್ನಡೆಯುತಿರುವೆ
ಓಡುವ ಭರದಲಿ ಎಡವಿ ಬಿದ್ದರೆ ನೀ ಸಾಯುವೆ!

ಆಸೆಗಳ ಅದುಮಿ ಇಟ್ಟುಕೊ ಮನುಜ
ದುರಾಸೆಯೇ ದುಃಖದ ಮೂಲ ಕಣಜ
ಬದುಕು ಒಂದು ಸುಂದರ ಪ್ರಪಂಚ
ದುಡುಕಿ ಹೋದರೆ ಮತ್ತೆಂದೂ ಬಾರದು ಜೀವ
ಅರಿತು ನಡೆದರೆ ನಿನ್ನ ಬಾಳು ಸುಖಾಂತ್ಯ ನಿಜ

ಭೂಮಿಯಲ್ಲಿ ಜನಿಸಿದ ಮಾನವರು
ಕೋಟಿ, ಕೋಟಿ,
ಭೂಮಿಯಲ್ಲಿ ಬದುಕಿದ್ದರೂ ಸತ್ತಂತೆ ಬದುಕುವ
ಜನರು ಹಲವಾದರೆ,
ಭೂಮಿಯಲ್ಲಿ ಸತ್ತರೂ ಕೂಡ ಬದುಕಿದವರಂತೆ
ಅಮರರಾಗಿರುವ ಜನ ಕೆಲವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿರೀಟೆಗಳು
Next post ವ್ಯತ್ಯಾಸ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…