ಕಿರೀಟೆಗಳು

ನಮ್ಮ ಹುಡುಗಿಗೆ ಬೇಕು ವರ
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ಕುವರ.
ಇವರು ಬಿಟ್ಟು ಬೇರೆಯ ವರ
ನಮ್ಮ ಪಾಲಿಗೆ ಇಲ್ಲದವನು ನರ.

ರೂಪ-ಗುಣ ನೋಡುವುದಿಲ್ಲ
ಚರಿತ್ರೆ-ಭೂಗೋಳ ಬೇಕೇ ಇಲ್ಲ
ಕೆಲಸವಿದ್ದರೇನು, ಇಲ್ಲದಿದ್ದರೇನು?
ಇವನಿಗಿದೆಯಲ್ಲ ವಿದ್ಯೆಯ ಕಿರೀಟ
ಇವನೇ ಬೇಕೆಂಬುದು ನಮ್ಮ ಹಟ.

ಬೇರೆ ಓದು ಒಂದು ಓದೆ?
ಶ್ರಮದ ಗಳಿಕೆ ಒಂದು ಹಣವೆ?
ಅವನೂ ಒಬ್ಬ ಗಂಡಸೆ?
ವಾಸಿಸಲಿದೆಯ ಭವ್ಯ ಬಂಗಲೆ?
ಓಡಾಡಲು ಬೈಕೇ…ಕಾರೇ?

ನಮ್ಮ ಮಗಳು ಬಲು ಭಾಗ್ಯವಂತಳು
ಬಾಯಲ್ಲಿ ಬೆಳ್ಳಿಯ ಚಮಚ
ಇಟ್ಟುಕೊಂಡೇ ಹುಟ್ಟಿದವಳು.
ನಾವೂ ಕೂಡಾ ಆಗರ್ಭ ಶ್ರೀಮಂತರೇ –
ಹೋದಲ್ಲಿ ಹಣದ ಹೊಳೆ ಹರಿಯಬೇಡವೇ?

ಅದಕ್ಕೇ ಹೇಳಿದ್ದು – ನಮಗೆ ಬೇಕು
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ವರ ಅಂತ!
ಬಡವರ ಮೇಲೆ ನಮಗೂ ಇದೆ ಕರುಣೆ
ಅವರವರ ಕರ್ಮಕ್ಕೆ ನಾವೇ ಹೊಣೆ?
*****
೨೬-೧೧-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷೆಗಳ ನಂದನವನ
Next post ಆಸೆ – ಆಘಾತ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…