ಕಿರೀಟೆಗಳು

ನಮ್ಮ ಹುಡುಗಿಗೆ ಬೇಕು ವರ
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ಕುವರ.
ಇವರು ಬಿಟ್ಟು ಬೇರೆಯ ವರ
ನಮ್ಮ ಪಾಲಿಗೆ ಇಲ್ಲದವನು ನರ.

ರೂಪ-ಗುಣ ನೋಡುವುದಿಲ್ಲ
ಚರಿತ್ರೆ-ಭೂಗೋಳ ಬೇಕೇ ಇಲ್ಲ
ಕೆಲಸವಿದ್ದರೇನು, ಇಲ್ಲದಿದ್ದರೇನು?
ಇವನಿಗಿದೆಯಲ್ಲ ವಿದ್ಯೆಯ ಕಿರೀಟ
ಇವನೇ ಬೇಕೆಂಬುದು ನಮ್ಮ ಹಟ.

ಬೇರೆ ಓದು ಒಂದು ಓದೆ?
ಶ್ರಮದ ಗಳಿಕೆ ಒಂದು ಹಣವೆ?
ಅವನೂ ಒಬ್ಬ ಗಂಡಸೆ?
ವಾಸಿಸಲಿದೆಯ ಭವ್ಯ ಬಂಗಲೆ?
ಓಡಾಡಲು ಬೈಕೇ…ಕಾರೇ?

ನಮ್ಮ ಮಗಳು ಬಲು ಭಾಗ್ಯವಂತಳು
ಬಾಯಲ್ಲಿ ಬೆಳ್ಳಿಯ ಚಮಚ
ಇಟ್ಟುಕೊಂಡೇ ಹುಟ್ಟಿದವಳು.
ನಾವೂ ಕೂಡಾ ಆಗರ್ಭ ಶ್ರೀಮಂತರೇ –
ಹೋದಲ್ಲಿ ಹಣದ ಹೊಳೆ ಹರಿಯಬೇಡವೇ?

ಅದಕ್ಕೇ ಹೇಳಿದ್ದು – ನಮಗೆ ಬೇಕು
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ವರ ಅಂತ!
ಬಡವರ ಮೇಲೆ ನಮಗೂ ಇದೆ ಕರುಣೆ
ಅವರವರ ಕರ್ಮಕ್ಕೆ ನಾವೇ ಹೊಣೆ?
*****
೨೬-೧೧-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷೆಗಳ ನಂದನವನ
Next post ಆಸೆ – ಆಘಾತ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…