ಕಿರೀಟೆಗಳು

ನಮ್ಮ ಹುಡುಗಿಗೆ ಬೇಕು ವರ
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ಕುವರ.
ಇವರು ಬಿಟ್ಟು ಬೇರೆಯ ವರ
ನಮ್ಮ ಪಾಲಿಗೆ ಇಲ್ಲದವನು ನರ.

ರೂಪ-ಗುಣ ನೋಡುವುದಿಲ್ಲ
ಚರಿತ್ರೆ-ಭೂಗೋಳ ಬೇಕೇ ಇಲ್ಲ
ಕೆಲಸವಿದ್ದರೇನು, ಇಲ್ಲದಿದ್ದರೇನು?
ಇವನಿಗಿದೆಯಲ್ಲ ವಿದ್ಯೆಯ ಕಿರೀಟ
ಇವನೇ ಬೇಕೆಂಬುದು ನಮ್ಮ ಹಟ.

ಬೇರೆ ಓದು ಒಂದು ಓದೆ?
ಶ್ರಮದ ಗಳಿಕೆ ಒಂದು ಹಣವೆ?
ಅವನೂ ಒಬ್ಬ ಗಂಡಸೆ?
ವಾಸಿಸಲಿದೆಯ ಭವ್ಯ ಬಂಗಲೆ?
ಓಡಾಡಲು ಬೈಕೇ…ಕಾರೇ?

ನಮ್ಮ ಮಗಳು ಬಲು ಭಾಗ್ಯವಂತಳು
ಬಾಯಲ್ಲಿ ಬೆಳ್ಳಿಯ ಚಮಚ
ಇಟ್ಟುಕೊಂಡೇ ಹುಟ್ಟಿದವಳು.
ನಾವೂ ಕೂಡಾ ಆಗರ್ಭ ಶ್ರೀಮಂತರೇ –
ಹೋದಲ್ಲಿ ಹಣದ ಹೊಳೆ ಹರಿಯಬೇಡವೇ?

ಅದಕ್ಕೇ ಹೇಳಿದ್ದು – ನಮಗೆ ಬೇಕು
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ವರ ಅಂತ!
ಬಡವರ ಮೇಲೆ ನಮಗೂ ಇದೆ ಕರುಣೆ
ಅವರವರ ಕರ್ಮಕ್ಕೆ ನಾವೇ ಹೊಣೆ?
*****
೨೬-೧೧-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷೆಗಳ ನಂದನವನ
Next post ಆಸೆ – ಆಘಾತ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys