ವೃದ್ಧಾಪ್ಯ – ಧೈರ್ಯ

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||

ಹೆತ್ತವರ ಮರೆತರೆಂದು
ನೀವು ಕೊರಗದಿರಿ ಹೆತ್ತವರೆ
ಹಾಕದಿರಿ ಶಾಪ ಮಕ್ಕಳಿಗೆ
ನೀವು ಹೆತ್ತು ಹೊತ್ತು ಬೆಳೆಸಿದ
ಕುಡಿಗಳಲ್ಲವೇ ಅವು ನಿಮ್ಮ ಕುಡಿಗಳಲ್ಲವೇ?

ಹೆತ್ತವರ ನೋವು ಅರಿವಾಗದು ಇಂದು
ತಿಳಿಯುವುದು ಆ ನೋವು ಮುಂದೆ
ತಮಗೂ ಮಕ್ಕಳಾಗಿ ಹೊರ ದೂಡಿದಂದು
ಚಿಂತಿಸದಿರಿ ನಿಮಗೂ ಜೀವನವಿದೆ ಮುಂದೆ
ನೋವಿನಲ್ಲೂ ನಗುವ ಕಾಣುತ್ತ ಸಾಗಿ ಎಂದೆಂದೂ

ನೀವು ನಿತ್ಯವೂ ಜೀವ ತೇಯುವುದು
ಮಕ್ಕಳ ಸುಮಧುರ ಜೀವನಕ್ಕಾಗಿ
ಆ ಮಕ್ಕಳೂ ಮುಂದೆ ಜೀವ ತೇಯುವರು
ತಮ್ಮ ಮಕ್ಕಳ ಸುಮಧುರ ಜೀವನಕ್ಕಾಗಿ
ಈ ಸತ್ಯವನ್ನು ಅರಿತಾಗ ನೀ ಮರುಗಬೇಕೇನು?

ಕೆಲವರ ಬಾಳಿನಲ್ಲಿ ಬರುವ ಈ ಕಹಿಯು
ತಿಳಿಯಿರಿ ಇದೊಂದು ಸಾಮಾನ್ಯ ಪ್ರಕ್ರಿಯೆಯು
ಸಹಜವಾಗಿ ನೋಡು ನೀನು ಇದನ್ನು
ನಮ್ಮಂತೆಯೇ ಇಹುದು ನಮ್ಮ ಮಕ್ಕಳ ಬಾಳ್ವೆಯು
ಎನ್ನುವ ಮರ್ಮ ತಿಳಿದರೆ ಸವಿ ಬಾಳು ನಿನ್ನದು

ನಿನ್ನ ಬಲವ ನೀ ನಂಬಿ ಬದುಕು
ಬಲವಿರುವ ತನಕ ಕಾಯಕವ ಬಿಡದಿರು
ಬಂದ ಆದಾಯವನ್ನ ಯಾರಿಗೂ ಹಂಚದಿರು
ಬಲವಿಲ್ಲದಾಗ ನಿನಗದು ಆಶ್ರಯದ ಸೂರು
ಅದು ಇಲ್ಲವೆಂದಾದರೆ ವೃದ್ಧಾಶ್ರಮಕ್ಕೆ ಸೇರು

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಸ್ತು
Next post “ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…