Home / ಕವನ / ಕವಿತೆ / ಶಿಸ್ತು

ಶಿಸ್ತು

ಶಿಸ್ತಿರಬೇಕು
ನಡೆಯಲ್ಲಿ ನುಡಿಯಲ್ಲಿ
ಆಟ-ಪಾಠಗಳಲ್ಲಿ
ಕಾಯದಲ್ಲಿ, ಕಾಯಕದಲ್ಲಿ.

ಮಾನ ಹೋದೀತು-ಶಿಸ್ತಿಲ್ಲದಿರೆ
ಉಡುಗೆ-ತೊಡುಗೆಗಳಲ್ಲಿ
ವ್ಯಾಪಾರ-ವ್ಯವಹಾರಗಳಲ್ಲಿ
ಹಣಕಾಸು ವಿಷಯಗಳಲ್ಲಿ

ತಲೆ ಹೋದೀತು-ಶಿಸ್ತಿಲ್ಲದಿರೆ
ಕಾಯ್ದೆ-ಕಾನೂನಿನಲ್ಲಿ
ರೀತಿ-ನೀತಿಯಲ್ಲಿ
ರತಿಯಲ್ಲಿ ಮತಿಯಲ್ಲಿ.

ಜೀವ ಹೋದೀತು-ಶಿಸ್ತಿಲ್ಲದಿರೆ
ಸ್ನಾನ-ಪಾನಗಳಲ್ಲಿ
ಊಟ-ಉಪಚಾರಗಳಲ್ಲಿ
ಪಥ್ಯದಲ್ಲಿ ಔಷಧದಲ್ಲಿ:

ದೇಶವೇ ಹೋದೀತು-ಶಿಸ್ತಿಲ್ಲದಿರೆ
ಸೈನ್ಯದಲ್ಲಿ, ರಾಜಕೀಯದಲ್ಲಿ
ಆಚಾರ-ವಿಚಾರಗಳಲ್ಲಿ
ಸಂಸ್ಕೃತಿ ಸಂಸ್ಕಾರಗಳಲ್ಲಿ

ಶಿಸ್ತಿರಬೇಕು
ಹುಟ್ಟಿನಲ್ಲಿ ಬಾಲ್ಯದಲ್ಲಿ
ಬಾಳಲ್ಲಿ ಬದುಕಲ್ಲಿ
ನೋವಿನಲಿ ನಲಿವಿನಲಿ
ಆದಿಯಲಿ ಅಂತ್ಯದಲ್ಲಿ
ಬಾಳ ಹೆಜ್ಜೆ ಹೆಜ್ಜೆಯಲಿ.
*****
೦೯-೦೬-೧೯೯೨

Tagged:

Leave a Reply

Your email address will not be published. Required fields are marked *

ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಿರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟ...

ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರಾಜರಿಗೆ ಹೆಚ್ಚು ಅಧಿಕಾರವಿಲ್ಲದೆ ದೇ...

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ! ನಿನ್ನ ನೋಡೆ ಹೇಳ್ತಿದ ಅದ. ಬಾಯ್ಮು...

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವರಾಜೇ ಅರಸಿನವರ ಪುತ್ರ ೨೮ ವರ್ಷ ವಯಸ...