ಕನ್ನಡ ಕೃಷಿ

ಕೃಷಿಯ ಮಾಡೋಣ ನಾವು
ಕನ್ನಡಾಂಬೆಯ ಮಡಿಲಲಿ
ಸಿರಿ ಕನ್ನಡದ ನೆಲದಲಿ ನಾವು
ಕನ್ನಡದ ಕೃಷಿಯ ಮಾಡೋಣ.

ತುಂಗ-ಭದ್ರ ಕೃಷ್ಣೆ ಕಾವೇರಿಯ
ಜೀವ ಜಲವ ಹರಿಸಿ
ಜನಮನವ ಹದವಾಗಿಸಿ
ಜನಮನದ ಕಳೆ ತೆಗೆಯೋಣ

ಬಿತ್ತೋಣ ಬೀಜ ಬಿತ್ತೋಣ
ಕರುಣಾಳ ಜನರ ಮನದಲಿ
ಸಿರಿ ಕನ್ನಡದ ಬೀಜವ ಬಿತ್ತೋಣ
ಕನ್ನಡದ ಫಲವ ಸವಿಯೋಣ

ಜಾತಿ ಧರ್ಮದ ಭೇದವ ಅಳಿಸಿ
ಭಾಷೆ ಭಾವನೆಯ ಕೀಳು ತೆಗೆಸಿ
ಬಾಂಧವ್ಯದ ಬೆಸುಗೆ ಹಾಕಿಸಿ
ಕನ್ನಡಾಂಬೆಗೆ ಶಿರಬಾಗಿ ನಮಿಸಿ

ದೇಶದೊಳು ರಾಜ್ಯದೊಳು
ಎಲ್ಲರೂ ಬೆರಗಾಗಿ ಮೆಚ್ಚುವಂತೆ
ಹಸನಾದ ಬದುಕು ನಡೆಸೋಣ
ಬಾಂಧವ್ಯದ ಬೆಸುಗೆ ಹಾಕೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮೆ
Next post ಮೌನ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…