ಹೊಸ ವರ್ಷ

ಕಳೆಯಿತು ಕಳೆಯಿತು
ಮಗದೊಂದು ವರ್ಷ
ಬರುತಿದೆ ನಮಗಾಗಿ
ಹೊಸದೊಂದು ವರ್ಷ
ತರಲಿದಯೇ ನಮ್ಮೆಲ್ಲರ
ಬಾಳಿಗೆ ಸದಾ ಹರ್ಷ?
ಸಂತೋಷದಿಂದ ಬಾಳೋಣ
ನಾವೆಲ್ಲ ನೂರಾರು ವರುಷ!

ಗತ ವರ್ಷದ ನೋವು ನಲಿವುಗಳ
ಮೆಲುಕು ಹಾಕುತ
ನಲಿವಿನ ಆ ಸರೆಯಲಿ ಹಳೆಯ
ನೋವುಗಳ ಮರೆಯುತ
ಭರವಸೆಯ ಬೆಳಕನ್ನು ಹೊತ್ತು
ದಿಟ್ಟ ಹೆಜ್ಜೆಯನ್ನಿಡುತ
ಸ್ನೇಹದ ಕಡಲಲ್ಲಿ ತೇಲುತ್ತಾ
ಮಾನವತೆ ತುಂಬುತ

ಕಳೆದ ಜೀವನದ ನೋವಿನಲ್ಲಿ
ತಪ್ಪನ್ನು ಹುಡುಕುತ
ಮಾಡಿದ ತಪ್ಪಿನಾ ಆತ್ಮಾವಲೋಕನ
ಮಾಡಿಕೊಳ್ಳುತ
ಮುಂದಿನ ಗುರಿಯ ಹೆಜ್ಜೆಯನ್ನು
ಜಾಣ್ಮೆಯಲ್ಲಿಡುತ
ಕಾತರದಿ ಸಂಭ್ರಮದಿ ಸ್ವಾಗತಿಸೋಣ
ನವ ಯುಗವ ನವ ಯುಗವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೫
Next post ಭ್ರಮಣ – ೯

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…