ನಶ್ವರದ ಬಾಳು

ಮಾನವ ನಿನ್ನ ಬಾಳು ನಶ್ವರವಾಗಿರಲು
ಏಕೆ ನಿನ್ನಲ್ಲಿ ಸ್ವಾರ್ಥ ಬಂತು
ನೀನು ಜನುಮ ಜನುಮಗಳಲ್ಲೂ ಹೀಗಿರಲು
ಅಂಟಿಕೊಂಡಿತು ಏಕೆ ಕರ್ಮ ತಂತು

ಮಾಯೆ ಮೋಹಗಳು ಭೂತವಾಗಿ ಕಾಡಿ
ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು
ಮತ್ತೆ ಮತ್ತೆ ನೀನು ಅರಿಯದೆ ಏಕೆ
ಬೆಂಕಿ ಜ್ವಾಲೆಗಳೇ ತಂಪೆಂದು ಅಪ್ಪಿರಲು

ಯಾವ ಕ್ಷಣವೂ ನಿನ್ನ ಸಾವು ಕಾದಿದೆ
ಆದರೂ ನೀನು ಹರಿಗೆ ಮರೆತೆ
ಇಂದ್ರಿಯ ಸುಖ ಭೋಗಗಳಲಿ ಮಿಂದು
ಮತ್ತೆ ಅನುಭವಿಸಿದೆ ಶಾಂತಿ ಕೊರತೆ

ಮಾಡುವ ಕರ್ಮಗಳು ಮಾಡಿ ದೈವ ನಂಬಿ
ನಿನ್ನ ದುಗುಡುಗಳಿಗೆ ನೀನಾದೆ ಕಾರಣ
ಹರಿಯೇ ನೆನೆಯದೆ ನಿನಗೆ ಸುಖವೆ
ಮಾಣಿಕ್ಯ ವಿಠಲನ ಬೇಕು ಪ್ರೇರಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀನ ನಾನೆಂದೆನ್ನ
Next post ಪೊದುತ್ತನಿಯನ್ಗಳ್

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys