ದೀನ ನಾನೆಂದೆನ್ನ

ದೀನ ನಾನೆಂದೆನ್ನ
ಕಡೆಗಣಿಸದಿರು ತಂದೆ|
ನಾ ದೀನನೆಂದರೆ ಎನ್ನತಂದೆ
ನೀ ದೀನನೆಂದೆನಿಸಿದಂತೆ|
ಬೇಡ ನನಗೆ ನನ್ನಿಂದ
ನೀ ದೀನನೆಂದೆನಿಸಿಕೊಳ್ಳುವುದು||

ಮೂರು ಲೋಕದ ಒಡೆಯ
ನೀನಾಗಿ, ಅವುಗಳಿಗೆಲ್ಲಾ
ದೊರೆಯು ನೀನಾದರೆ|
ದೊರೆ ಮಗನಲ್ಲವೇ ನಾನು?
ನನ್ನ ದೀನನಾಗಲು
ಬಿಡುವೆಯಾ ನೀನು||

ಬೇಡೆನಗೆ ನಿನ್ನ ಆ ಸ್ವರ್ಗ,
ಅಂದಚೆಂದದ ಅರಮನೆ|
ಆ ನಿನ್ನ ಮೋಹಕ ರಂಬೆ ಉರ್ವಶಿ
ಮೇನಕೆಯರ ಸಹವಾಸ|
ಗಂಧರ್ವಗಾನ, ದೇವಲೋಕ
ನಿನ್ನ ಸಿರಿಯತನವಂತೂ
ಬೇಡವೇ ಬೇಡ|
ನಿನ್ನ ಈ ಭುವಿಯಲಿ
ನಿತ್ಯ ನಿನ್ನ ಸೇವೆಯ
ಭಾಗ್ಯವನಿತ್ತರದುವೇ ಸಾಕು|
ಇಲ್ಲಿ ನರನಾಗಿ ಬಂದುದಕೆ
ಜನ್ಮ ಸಾರ್ಥಕ ಮಾಡಿಕೊಳ್ಳುವುದಕೆ
ಸಾಕು ಇನ್ನೇನು ಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತು ರೂ/ಗೆ ಹತ್ತು ಏಟು
Next post ನಶ್ವರದ ಬಾಳು

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…