ದೀನ ನಾನೆಂದೆನ್ನ

ದೀನ ನಾನೆಂದೆನ್ನ
ಕಡೆಗಣಿಸದಿರು ತಂದೆ|
ನಾ ದೀನನೆಂದರೆ ಎನ್ನತಂದೆ
ನೀ ದೀನನೆಂದೆನಿಸಿದಂತೆ|
ಬೇಡ ನನಗೆ ನನ್ನಿಂದ
ನೀ ದೀನನೆಂದೆನಿಸಿಕೊಳ್ಳುವುದು||

ಮೂರು ಲೋಕದ ಒಡೆಯ
ನೀನಾಗಿ, ಅವುಗಳಿಗೆಲ್ಲಾ
ದೊರೆಯು ನೀನಾದರೆ|
ದೊರೆ ಮಗನಲ್ಲವೇ ನಾನು?
ನನ್ನ ದೀನನಾಗಲು
ಬಿಡುವೆಯಾ ನೀನು||

ಬೇಡೆನಗೆ ನಿನ್ನ ಆ ಸ್ವರ್ಗ,
ಅಂದಚೆಂದದ ಅರಮನೆ|
ಆ ನಿನ್ನ ಮೋಹಕ ರಂಬೆ ಉರ್ವಶಿ
ಮೇನಕೆಯರ ಸಹವಾಸ|
ಗಂಧರ್ವಗಾನ, ದೇವಲೋಕ
ನಿನ್ನ ಸಿರಿಯತನವಂತೂ
ಬೇಡವೇ ಬೇಡ|
ನಿನ್ನ ಈ ಭುವಿಯಲಿ
ನಿತ್ಯ ನಿನ್ನ ಸೇವೆಯ
ಭಾಗ್ಯವನಿತ್ತರದುವೇ ಸಾಕು|
ಇಲ್ಲಿ ನರನಾಗಿ ಬಂದುದಕೆ
ಜನ್ಮ ಸಾರ್ಥಕ ಮಾಡಿಕೊಳ್ಳುವುದಕೆ
ಸಾಕು ಇನ್ನೇನು ಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತು ರೂ/ಗೆ ಹತ್ತು ಏಟು
Next post ನಶ್ವರದ ಬಾಳು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…