ಹತ್ತು ರೂ/ಗೆ ಹತ್ತು ಏಟು

ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು ನೋಡಿ ಕನಿಕರದಿಂದ ಹತ್ತು ರೂಪಾಯಿ ನೋಟ್ ಕೊಟ್ಟು ಕಳಿಸಿ “ಕೋತಂಬರಿ ಇದೆ ಬೇಡ” ಎಂದೆ. ಮಗು ನಗುನಗುತ್ತಾ ತಾಯಿಗೆ ಕೊಡಲು ಹೋದ ಮಗುವಿನ ಅಳು ಕಿವಿಗೆ ಬಿತ್ತು. “ಕೋತಂಬರಿ ಮಾರದೇ ದುಡ್ಡು ಕದ್ದು ತಂದಿರುವೆಯಾ?” ಎಂದು ಹತ್ತು ಬಾರಿ ಪುಟ್ಟ ಮಗುವಿನ ಬೆನ್ನಿಗೆ ರಪ ರಪ ಥಳಿಸಿದಳು. “ಕಟ್ಟು ಕೊತಂಬರಿ ತೆಗೆದು ಕೊಂಡಿದ್ದರೆ ಮಗುವಿಗೆ ತುಸು ಭಾರ ಕಡಿಮೆಯಾಗಿ ಏಟು ಬೀಳುತಿರಲಿಲ್ಲ” ಎಂದು ಮನವು ಮಮ್ಮಲ ಮರುಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಹೇಳಿ ಮುಗಿಯಲು ಬೇಕು ಸಾವಿರದೊಂದು ರಾತ್ರಿ’
Next post ದೀನ ನಾನೆಂದೆನ್ನ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…