Home / ಲೇಖನ / ವಿಜ್ಞಾನ / ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತಾರೆ. ಆದರೆ ನೀರಿನಲ್ಲಿಯೂ ವೇಗವಾಗಿ ನೆಲದ ಮೇಲೂ ಓಡಬಲ್ಲ ಕಾರುಗಳನು ಇತ್ತೀಚೆಗೆ ನ್ಯೂಜಿಲೆಂಡ್ ಮೂಲದ “ಆಲನ್‌ಗಿಬ್ಸ್’, ಎಂಬ ವಿಜ್ಞಾನಿ ಕಂಡುಹಿಡಿದಿದ್ದಾರೆ. ಈತ ತನ್ನ ಶ್ರೀಮಂತಿಕೆಯ ಸ್ವಸಾಮರ್ಥ್ಯದಿಂದ ಈ ಸಾಧನೆ ಮಾಡಿದರು. ಇವರು ಕಂಡು ಹಿಡಿದ ಕಾರು ನೆಲದ ಮೇಲೆ ೧೬೦ ಕಿ.ಮೀ. ಚಲಿಸಿದರೆ ನೀರಿನ ಮೇಲೂ ಗಂಟೆಗೆ ೪೮ ಕಿ.ಮೀ. ಓಡುತ್ತದೆ. ೧೭೫ ಅಶ್ವಶಕ್ತಿಯ ೨.೫ ಲೀಟರ್ ವಿ೬ ಇಂಜನ್ ಈ ಕಾರಿನೊಳಗಿದೆ. ನೆಲದ ಮೇಲೆ ಸಾಮಾನ್ಯ ವಿಧಾನದಲ್ಲಿ ಓಡುವ ಇದಕ್ಕೆ ಜೆಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆಯಿಂದ ನೀರನ್ನು ಒಳಕ್ಕೆ ಎಳೆದುಕೊಂಡು ಸು. ಒಂದು ಟನ್ನಷ್ಟು ಒತ್ತಡದಲ್ಲಿ ಹಿಂದಕ್ಕೆ ಹೊರಹಾಕಲಾಗುತ್ತದೆ ಈ ಒತ್ತಡವು ವೇಗದ ಚಲನೆಗೆ ಅನುಕೂಲಮಾಡಿಕೊಡುತ್ತದೆ.

ಈ ಕಾರಿನ ನಿರ್ಮಾತೃ ಗಿಬ್ಸ್ ವಾಸಿಸುತ್ತಿದ್ದ ಸಮುದ್ರದ ಬದಿಯಲ್ಲಿರುವ ತನ್ನ ಬಂಗ್ಲೆಯಲ್ಲಿದ್ದಾಗ ಅಲ್ಲಿ ಬಳಸಲೆಂದೇ ಇಂಥಹ ಲಾಭಯದಾಯಕ ವಾಹನವೊಂದನ್ನು ರೂಪಿಸಿದ. ನಂತರ ಬ್ರಿಟನ್ನಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದ. ಜಾಗ್ವರ್, ರೋಲ್ಸ್‌ರಾಯ್ ನಂತಹ ಸಂಸ್ಥೆಗಳಲ್ಲಿದ್ದ ಇಂಜನೀಯರ್ ನೀಲ್ ಜೆಂಕಿನ್ಸರನ್ನು ಜೊತೆಗೂಡಿಸಿಕೊಂಡ. ಸತತ ಪರಿಶ್ರಮದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ.

‘ಅಕ್ವಡಾ’ ವನ್ನು ತಯಾರಿಸಿದ. ನಮ್ಮಲ್ಲಿರುವ ಲಕ್ಷಲಕ್ಷಗಳಿಗೆ ಸೀಮಿತಗೊಳ್ಳದ ಈ ಕಾರಿನ ಬೆಲೆ ಶ್ರೀಮಂತರಿಗೂ ಎಟುಕದಂತಾಗಿದೆ. ಅಂದ ಹಾಗೆ ಇದರ ಬೆಲೆ ೨,೩೦,೦೦೦ ಡಾಲರ್! ಅಂದರೆ ಭಾರತೀಯ ಬೆಲೆ ೧,೦೫,೮೦,೦೦೦ ಮಾತ್ರ. ಹಾಗೆ ನೋಡಿದರೆ ಈ ಕಾರಿನ ಬೆಲೆ ಕಡಿಮೆಯೆ. ಜರ್ಮನಿ ಮೂಲದ ಡೈಮ್ಲರ್ ಕ್ರೈಸ್ಲರ್ ಕಾರು ತಯಾರಿಕಾ ಕಂಪನಿಯು ಸಿದಪಡಿಸಿದ ‘ಮೇ ಬ್ಯಾಚ್,’ ಎಂಬ ಕಾರಿನ ಬೆಲೆ ೫ ಕೋಟಿಗಳಂತೆ! ಸದ್ಯಕ್ಕೆ ಈ ಭೂಮಂಡಲದ ಮೇಲಿರುವ ಐಶಾರಾಮಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...