Home / ಲೇಖನ / ವಿಜ್ಞಾನ / ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತಾರೆ. ಆದರೆ ನೀರಿನಲ್ಲಿಯೂ ವೇಗವಾಗಿ ನೆಲದ ಮೇಲೂ ಓಡಬಲ್ಲ ಕಾರುಗಳನು ಇತ್ತೀಚೆಗೆ ನ್ಯೂಜಿಲೆಂಡ್ ಮೂಲದ “ಆಲನ್‌ಗಿಬ್ಸ್’, ಎಂಬ ವಿಜ್ಞಾನಿ ಕಂಡುಹಿಡಿದಿದ್ದಾರೆ. ಈತ ತನ್ನ ಶ್ರೀಮಂತಿಕೆಯ ಸ್ವಸಾಮರ್ಥ್ಯದಿಂದ ಈ ಸಾಧನೆ ಮಾಡಿದರು. ಇವರು ಕಂಡು ಹಿಡಿದ ಕಾರು ನೆಲದ ಮೇಲೆ ೧೬೦ ಕಿ.ಮೀ. ಚಲಿಸಿದರೆ ನೀರಿನ ಮೇಲೂ ಗಂಟೆಗೆ ೪೮ ಕಿ.ಮೀ. ಓಡುತ್ತದೆ. ೧೭೫ ಅಶ್ವಶಕ್ತಿಯ ೨.೫ ಲೀಟರ್ ವಿ೬ ಇಂಜನ್ ಈ ಕಾರಿನೊಳಗಿದೆ. ನೆಲದ ಮೇಲೆ ಸಾಮಾನ್ಯ ವಿಧಾನದಲ್ಲಿ ಓಡುವ ಇದಕ್ಕೆ ಜೆಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆಯಿಂದ ನೀರನ್ನು ಒಳಕ್ಕೆ ಎಳೆದುಕೊಂಡು ಸು. ಒಂದು ಟನ್ನಷ್ಟು ಒತ್ತಡದಲ್ಲಿ ಹಿಂದಕ್ಕೆ ಹೊರಹಾಕಲಾಗುತ್ತದೆ ಈ ಒತ್ತಡವು ವೇಗದ ಚಲನೆಗೆ ಅನುಕೂಲಮಾಡಿಕೊಡುತ್ತದೆ.

ಈ ಕಾರಿನ ನಿರ್ಮಾತೃ ಗಿಬ್ಸ್ ವಾಸಿಸುತ್ತಿದ್ದ ಸಮುದ್ರದ ಬದಿಯಲ್ಲಿರುವ ತನ್ನ ಬಂಗ್ಲೆಯಲ್ಲಿದ್ದಾಗ ಅಲ್ಲಿ ಬಳಸಲೆಂದೇ ಇಂಥಹ ಲಾಭಯದಾಯಕ ವಾಹನವೊಂದನ್ನು ರೂಪಿಸಿದ. ನಂತರ ಬ್ರಿಟನ್ನಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದ. ಜಾಗ್ವರ್, ರೋಲ್ಸ್‌ರಾಯ್ ನಂತಹ ಸಂಸ್ಥೆಗಳಲ್ಲಿದ್ದ ಇಂಜನೀಯರ್ ನೀಲ್ ಜೆಂಕಿನ್ಸರನ್ನು ಜೊತೆಗೂಡಿಸಿಕೊಂಡ. ಸತತ ಪರಿಶ್ರಮದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ.

‘ಅಕ್ವಡಾ’ ವನ್ನು ತಯಾರಿಸಿದ. ನಮ್ಮಲ್ಲಿರುವ ಲಕ್ಷಲಕ್ಷಗಳಿಗೆ ಸೀಮಿತಗೊಳ್ಳದ ಈ ಕಾರಿನ ಬೆಲೆ ಶ್ರೀಮಂತರಿಗೂ ಎಟುಕದಂತಾಗಿದೆ. ಅಂದ ಹಾಗೆ ಇದರ ಬೆಲೆ ೨,೩೦,೦೦೦ ಡಾಲರ್! ಅಂದರೆ ಭಾರತೀಯ ಬೆಲೆ ೧,೦೫,೮೦,೦೦೦ ಮಾತ್ರ. ಹಾಗೆ ನೋಡಿದರೆ ಈ ಕಾರಿನ ಬೆಲೆ ಕಡಿಮೆಯೆ. ಜರ್ಮನಿ ಮೂಲದ ಡೈಮ್ಲರ್ ಕ್ರೈಸ್ಲರ್ ಕಾರು ತಯಾರಿಕಾ ಕಂಪನಿಯು ಸಿದಪಡಿಸಿದ ‘ಮೇ ಬ್ಯಾಚ್,’ ಎಂಬ ಕಾರಿನ ಬೆಲೆ ೫ ಕೋಟಿಗಳಂತೆ! ಸದ್ಯಕ್ಕೆ ಈ ಭೂಮಂಡಲದ ಮೇಲಿರುವ ಐಶಾರಾಮಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...