Home / ಲೇಖನ / ವಿಜ್ಞಾನ / ಮೈಕ್ರೋ ಸೆಲ್ಯೂಲರ್ ಫೋನ್‌ಗಳು

ಮೈಕ್ರೋ ಸೆಲ್ಯೂಲರ್ ಫೋನ್‌ಗಳು

PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್ತಾರೆ. ಈ ಮೈಕ್ರೋಸೆಲ್‌ಗಳಲ್ಲಿ ಅತಿ ಸಣ್ಣ ಮೈಕ್ರೋಬೇಸ್ ಸ್ಟೇಶನ್‌ಗಳಿರುತ್ತವೆ. ಈ ಮೈಕ್ರೋಬೇಸ್ ಸ್ಟೇಶನ್‌ಗಳು ದೂರವಾಣಿ ಕರೆಗಳನ್ನು ಗ್ರಹಿಸುವ, ರವಾನಿಸುವ, ಕೆಲಸ ಮಾಡುತ್ತವೆ. ಇದು ಕಡಿಮೆ ವೆಚ್ಚವಾಗಿದ್ದು ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲು ಸಮರ್ಥ ಹೊಂದಿದೆ.

ಹ್ಯಾಂಡ್‌ಸೆಟ್‌ನಿಂದ ಹೊರಟ ದೂರವಾಣಿ ಕರೆಯ ತರಂಗಗಳು ಸ್ವಲ್ಪ ದೂರ ಪ್ರಯಾಣಿಸಿದರೂ ಯಾವುದಾದರೂ ಬೇಸ್ ಸ್ಟೇಶನ್ ಇದನ್ನು ಗ್ರಹಿಸಿ ಸಂಪರ್ಕ ಕಲ್ಪಿಸುತ್ತದೆ. ಹ್ಯಾಂಡ್‌ಸೆಟ್ ಚಿಕ್ಕದಾಗಿದ್ದು ಕಡಿಮೆ ಬೆಲೆಯದ್ದಾಗಿರುತ್ತದೆ. ಮುಖ್ಯವಾಗಿ ಮಾಮೂಲಿ ಸೆಲ್ಯೂಲರ್ ತರಂಗಗಳು ತಲುಪದ ಸ್ಥಳಕ್ಕೂ ಮೈಕ್ರೋಸೆಲ್ಯೂಲರ್ ತರಂಗಗಳು ತಲುಪಬಲ್ಲವು. ಒಂದು ತಂತ್ರಜ್ಞಾನದ ಹ್ಯಾಂಡ್‌ಸೆಟ್ ಇದ್ದರೆ ಮನೆಯಲಿದ್ದಾಗ ಸಾಧಾರಣ ಪೋನಿನಂತೆಯೇ ಕೆಲಸ ಮಾಡುತ್ತವೆ. ನೀವು ಮನೆಯಿಂದ ಹೊರಗೆ ಓಡಾಡುವಾಗ ಈ ಹ್ಯಾಂಡ್‌ ಸೆಟ್ ಅಲ್ಲಲ್ಲಿ ಇರುವ ಮೈಕ್ರೋ ಬೇಸ್ ಸ್ಟೇಶನ್‌ಗಳ ಸಹಾಯದಿಂದ ಸಂಪರ್ಕ ಪಡೆಯುತ್ತದೆ. ಮತ್ತು ನೀವು ಚಲಿಸಿದಂತೆಲ್ಲ ಬೇರೆ ಬೇರೆ ಸ್ಟೇಷನ್‌ಗಳು ಸಂಪರ್ಕದ ಜವಾಬ್ದಾರಿಯನ್ನು ಹೊರುತ್ತವೆ. ಇದರ ಹಿಂದಿರುವ ಗುಟ್ಟು ಇಷ್ಟೆ. ನೀವು ಓಡಾಡುವಾಗ ನಿಮ್ಮ ಪೋನ್ ತನ್ನ ಇರುವಿಕೆಯ ಸ್ಥಳದ ಮಾಹಿತಿಯನ್ನು ನಿರಂತರವಾಗಿ ಕಂಪ್ಯೂಟರ್‌ಗಳಿಗೆ ತಿಳಿಸುತ್ತಿರುತ್ತದೆ. ಈ ಮಾಹಿತಿ ಹೊಂದಿರುವ ಕಂಪ್ಯೂಟರ್ ನಿಮಗಾಗಿ ಬಂದ ಕರೆಗಳನ್ನು ನೀವು ಇರುವ ಜಾಗದ ಸಮೀಪದ ಮೈಕ್ರೋಬೇಸ್ ಸ್ಟೇಶನ್ನಿನ ಮೂಲಕ ತಲುಪಿಸುತ್ತದೆ. ಒಂದು ವೇಳೆ ಗಂಟೆಗೆ ೧೬೦ ಕಿ.ಮಿ. ಮೀರಿದ ವೇಗದಲ್ಲಿ ಪಯಣಿಸುತ್ತಿದ್ದರೆ. ಬೇಸ್ ಸ್ಟೇಶನ್‌ಗಳು ಸಂಪರ್ಕ ಬದಲಾಯಿಸಲಾರವು. ಈ ತೊಂದರೆಯನ್ನು ಪರಿಹರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಪ್ರಪಂಚದ ಎಲ್ಲ ಫೋನುಗಳು ವೈರ್‌ಲೆಸ್ ಆಗುವ ಸಾಧ್ಯತೆ ಇದೆ. ಆಗ ಪ್ರಪಂಚದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಟೆಲಿಫೋನ್ ಕರೆಮಾಡಬಹುದು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್