Home / ಲೇಖನ / ವಿಜ್ಞಾನ / ಮೈಕ್ರೋ ಸೆಲ್ಯೂಲರ್ ಫೋನ್‌ಗಳು

ಮೈಕ್ರೋ ಸೆಲ್ಯೂಲರ್ ಫೋನ್‌ಗಳು

PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್ತಾರೆ. ಈ ಮೈಕ್ರೋಸೆಲ್‌ಗಳಲ್ಲಿ ಅತಿ ಸಣ್ಣ ಮೈಕ್ರೋಬೇಸ್ ಸ್ಟೇಶನ್‌ಗಳಿರುತ್ತವೆ. ಈ ಮೈಕ್ರೋಬೇಸ್ ಸ್ಟೇಶನ್‌ಗಳು ದೂರವಾಣಿ ಕರೆಗಳನ್ನು ಗ್ರಹಿಸುವ, ರವಾನಿಸುವ, ಕೆಲಸ ಮಾಡುತ್ತವೆ. ಇದು ಕಡಿಮೆ ವೆಚ್ಚವಾಗಿದ್ದು ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲು ಸಮರ್ಥ ಹೊಂದಿದೆ.

ಹ್ಯಾಂಡ್‌ಸೆಟ್‌ನಿಂದ ಹೊರಟ ದೂರವಾಣಿ ಕರೆಯ ತರಂಗಗಳು ಸ್ವಲ್ಪ ದೂರ ಪ್ರಯಾಣಿಸಿದರೂ ಯಾವುದಾದರೂ ಬೇಸ್ ಸ್ಟೇಶನ್ ಇದನ್ನು ಗ್ರಹಿಸಿ ಸಂಪರ್ಕ ಕಲ್ಪಿಸುತ್ತದೆ. ಹ್ಯಾಂಡ್‌ಸೆಟ್ ಚಿಕ್ಕದಾಗಿದ್ದು ಕಡಿಮೆ ಬೆಲೆಯದ್ದಾಗಿರುತ್ತದೆ. ಮುಖ್ಯವಾಗಿ ಮಾಮೂಲಿ ಸೆಲ್ಯೂಲರ್ ತರಂಗಗಳು ತಲುಪದ ಸ್ಥಳಕ್ಕೂ ಮೈಕ್ರೋಸೆಲ್ಯೂಲರ್ ತರಂಗಗಳು ತಲುಪಬಲ್ಲವು. ಒಂದು ತಂತ್ರಜ್ಞಾನದ ಹ್ಯಾಂಡ್‌ಸೆಟ್ ಇದ್ದರೆ ಮನೆಯಲಿದ್ದಾಗ ಸಾಧಾರಣ ಪೋನಿನಂತೆಯೇ ಕೆಲಸ ಮಾಡುತ್ತವೆ. ನೀವು ಮನೆಯಿಂದ ಹೊರಗೆ ಓಡಾಡುವಾಗ ಈ ಹ್ಯಾಂಡ್‌ ಸೆಟ್ ಅಲ್ಲಲ್ಲಿ ಇರುವ ಮೈಕ್ರೋ ಬೇಸ್ ಸ್ಟೇಶನ್‌ಗಳ ಸಹಾಯದಿಂದ ಸಂಪರ್ಕ ಪಡೆಯುತ್ತದೆ. ಮತ್ತು ನೀವು ಚಲಿಸಿದಂತೆಲ್ಲ ಬೇರೆ ಬೇರೆ ಸ್ಟೇಷನ್‌ಗಳು ಸಂಪರ್ಕದ ಜವಾಬ್ದಾರಿಯನ್ನು ಹೊರುತ್ತವೆ. ಇದರ ಹಿಂದಿರುವ ಗುಟ್ಟು ಇಷ್ಟೆ. ನೀವು ಓಡಾಡುವಾಗ ನಿಮ್ಮ ಪೋನ್ ತನ್ನ ಇರುವಿಕೆಯ ಸ್ಥಳದ ಮಾಹಿತಿಯನ್ನು ನಿರಂತರವಾಗಿ ಕಂಪ್ಯೂಟರ್‌ಗಳಿಗೆ ತಿಳಿಸುತ್ತಿರುತ್ತದೆ. ಈ ಮಾಹಿತಿ ಹೊಂದಿರುವ ಕಂಪ್ಯೂಟರ್ ನಿಮಗಾಗಿ ಬಂದ ಕರೆಗಳನ್ನು ನೀವು ಇರುವ ಜಾಗದ ಸಮೀಪದ ಮೈಕ್ರೋಬೇಸ್ ಸ್ಟೇಶನ್ನಿನ ಮೂಲಕ ತಲುಪಿಸುತ್ತದೆ. ಒಂದು ವೇಳೆ ಗಂಟೆಗೆ ೧೬೦ ಕಿ.ಮಿ. ಮೀರಿದ ವೇಗದಲ್ಲಿ ಪಯಣಿಸುತ್ತಿದ್ದರೆ. ಬೇಸ್ ಸ್ಟೇಶನ್‌ಗಳು ಸಂಪರ್ಕ ಬದಲಾಯಿಸಲಾರವು. ಈ ತೊಂದರೆಯನ್ನು ಪರಿಹರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಪ್ರಪಂಚದ ಎಲ್ಲ ಫೋನುಗಳು ವೈರ್‌ಲೆಸ್ ಆಗುವ ಸಾಧ್ಯತೆ ಇದೆ. ಆಗ ಪ್ರಪಂಚದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಟೆಲಿಫೋನ್ ಕರೆಮಾಡಬಹುದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...