Home / ಲೇಖನ / ವಿಜ್ಞಾನ / ಮೈಕ್ರೋ ಸೆಲ್ಯೂಲರ್ ಫೋನ್‌ಗಳು

ಮೈಕ್ರೋ ಸೆಲ್ಯೂಲರ್ ಫೋನ್‌ಗಳು

PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್ತಾರೆ. ಈ ಮೈಕ್ರೋಸೆಲ್‌ಗಳಲ್ಲಿ ಅತಿ ಸಣ್ಣ ಮೈಕ್ರೋಬೇಸ್ ಸ್ಟೇಶನ್‌ಗಳಿರುತ್ತವೆ. ಈ ಮೈಕ್ರೋಬೇಸ್ ಸ್ಟೇಶನ್‌ಗಳು ದೂರವಾಣಿ ಕರೆಗಳನ್ನು ಗ್ರಹಿಸುವ, ರವಾನಿಸುವ, ಕೆಲಸ ಮಾಡುತ್ತವೆ. ಇದು ಕಡಿಮೆ ವೆಚ್ಚವಾಗಿದ್ದು ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲು ಸಮರ್ಥ ಹೊಂದಿದೆ.

ಹ್ಯಾಂಡ್‌ಸೆಟ್‌ನಿಂದ ಹೊರಟ ದೂರವಾಣಿ ಕರೆಯ ತರಂಗಗಳು ಸ್ವಲ್ಪ ದೂರ ಪ್ರಯಾಣಿಸಿದರೂ ಯಾವುದಾದರೂ ಬೇಸ್ ಸ್ಟೇಶನ್ ಇದನ್ನು ಗ್ರಹಿಸಿ ಸಂಪರ್ಕ ಕಲ್ಪಿಸುತ್ತದೆ. ಹ್ಯಾಂಡ್‌ಸೆಟ್ ಚಿಕ್ಕದಾಗಿದ್ದು ಕಡಿಮೆ ಬೆಲೆಯದ್ದಾಗಿರುತ್ತದೆ. ಮುಖ್ಯವಾಗಿ ಮಾಮೂಲಿ ಸೆಲ್ಯೂಲರ್ ತರಂಗಗಳು ತಲುಪದ ಸ್ಥಳಕ್ಕೂ ಮೈಕ್ರೋಸೆಲ್ಯೂಲರ್ ತರಂಗಗಳು ತಲುಪಬಲ್ಲವು. ಒಂದು ತಂತ್ರಜ್ಞಾನದ ಹ್ಯಾಂಡ್‌ಸೆಟ್ ಇದ್ದರೆ ಮನೆಯಲಿದ್ದಾಗ ಸಾಧಾರಣ ಪೋನಿನಂತೆಯೇ ಕೆಲಸ ಮಾಡುತ್ತವೆ. ನೀವು ಮನೆಯಿಂದ ಹೊರಗೆ ಓಡಾಡುವಾಗ ಈ ಹ್ಯಾಂಡ್‌ ಸೆಟ್ ಅಲ್ಲಲ್ಲಿ ಇರುವ ಮೈಕ್ರೋ ಬೇಸ್ ಸ್ಟೇಶನ್‌ಗಳ ಸಹಾಯದಿಂದ ಸಂಪರ್ಕ ಪಡೆಯುತ್ತದೆ. ಮತ್ತು ನೀವು ಚಲಿಸಿದಂತೆಲ್ಲ ಬೇರೆ ಬೇರೆ ಸ್ಟೇಷನ್‌ಗಳು ಸಂಪರ್ಕದ ಜವಾಬ್ದಾರಿಯನ್ನು ಹೊರುತ್ತವೆ. ಇದರ ಹಿಂದಿರುವ ಗುಟ್ಟು ಇಷ್ಟೆ. ನೀವು ಓಡಾಡುವಾಗ ನಿಮ್ಮ ಪೋನ್ ತನ್ನ ಇರುವಿಕೆಯ ಸ್ಥಳದ ಮಾಹಿತಿಯನ್ನು ನಿರಂತರವಾಗಿ ಕಂಪ್ಯೂಟರ್‌ಗಳಿಗೆ ತಿಳಿಸುತ್ತಿರುತ್ತದೆ. ಈ ಮಾಹಿತಿ ಹೊಂದಿರುವ ಕಂಪ್ಯೂಟರ್ ನಿಮಗಾಗಿ ಬಂದ ಕರೆಗಳನ್ನು ನೀವು ಇರುವ ಜಾಗದ ಸಮೀಪದ ಮೈಕ್ರೋಬೇಸ್ ಸ್ಟೇಶನ್ನಿನ ಮೂಲಕ ತಲುಪಿಸುತ್ತದೆ. ಒಂದು ವೇಳೆ ಗಂಟೆಗೆ ೧೬೦ ಕಿ.ಮಿ. ಮೀರಿದ ವೇಗದಲ್ಲಿ ಪಯಣಿಸುತ್ತಿದ್ದರೆ. ಬೇಸ್ ಸ್ಟೇಶನ್‌ಗಳು ಸಂಪರ್ಕ ಬದಲಾಯಿಸಲಾರವು. ಈ ತೊಂದರೆಯನ್ನು ಪರಿಹರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಪ್ರಪಂಚದ ಎಲ್ಲ ಫೋನುಗಳು ವೈರ್‌ಲೆಸ್ ಆಗುವ ಸಾಧ್ಯತೆ ಇದೆ. ಆಗ ಪ್ರಪಂಚದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಟೆಲಿಫೋನ್ ಕರೆಮಾಡಬಹುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...