ತೊಳೆಯು ಬಾ ಬಸವ

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ
ಜನರ ಬುದ್ಧಿ ಭಾವ
ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ
ಶುದ್ಧ ಬುದ್ಧ ಬಸವ || ಪ ||

ಯಜ್ಞಯಾಗಗಳ ಪೂಜೆ ನೇಮಗಳ
ನೆಪದಲಿ ಜನರನು ಸುಲಿವ
ಪುರಾಣ ಶಾಸ್ತ್ರವ ಸುಳ್ಳು ಕಂತೆಗಳ
ಹೇಳುತ ಹೊಟ್ಟೆಯ ಹೊರೆವ || ೧ ||

ಪೂಜಾರಿ ವರ್ಗ ಬದುಕಿನ ಮಾರ್ಗ
ಎಂದು ಹಳಿದು ಅವರ
ಸರಳ ಸಂಬಂಧ ದೇವಭಕ್ತರಿಗೆ
ಕಲ್ಪಿಸಿದೆ ಉಳಿಸಿ ಜನರ || ೨ ||

ದಿನವಾರಗಳನು ಗ್ರಹ ತಾರೆಗಳನು
ಎಣಿಸುವ ಗುಣಿಸುವ ತಂತ್ರ
ಮೋಸವೆಂದೆ ಜ್ಯೋತಿಷ್ಯ ಶಾಸ್ತ್ರ
ಮೈಗಳೃ ಜನರ ಕುತಂತ್ರ || ೩ ||

ಶಿವನ ನೆನೆದು ದಿನ ರಾತ್ರಿ ಕಳೆಯುವಗೆ
ಪ್ರತಿಕ್ಷಣವು ಸುಮುಹೂರ್ತ
ಶಿವನನು ಎಲ್ಲೆಡೆ ಕಾಂಬ ಭಕ್ತರಿಗೆ
ಇಹವೆಲ್ಲ ಕರ್ಮ ಕರ್ತ || ೪ ||

ನೋವು ನಷ್ಟಗಳ ವ್ಯಾಧಿ ಬಾಧೆಗಳ
ಭಯವು ಹೆಚ್ಚಿನದು ಮರಣ
ಭಯವೆ ಮೌಢ್ಯತೆಗೆ ಮೂಲ ಭಕ್ತನಿಗೆ
ಮಹಾನವಮಿ ಆ ಮರಣ || ೫ ||

ಮೌಢ್ಯಶೋಷಣೆಯ ಮುಕ್ತ ಸಮಾಜವ
ನಿರ್ಮಿಸ ಬಯಸಿದೆ ನೀನು
ಮನುಜ ಮಹಿಮೆಯನು ಎತ್ತಿ ಹಿಡಿದ ನೀ
ಯುಗದ ಜಗದ ಭಾನು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುಳು
Next post ತುತ್ತೂರಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys