ಇರುಳು

ಈ ಅಪರಿಮಿತ ಪರಿಧಿ
ಇದು ಕತ್ತಲೆಯ ಸರದಿ
ಕೋವೆ ಕಂಭಗಳಿಂದೆದ್ದು ಸಂಜೆಯ ಮೋಡಗಳಿಂದ ಬಿದ್ದು
ಮೆಲ್ಲಗೆ ಆಕಳಿಸಿ ಹೊರಟಿದೆ ಸವಾರಿ ಕಂಬಳಿ ಹೊದ್ದು
ಡಾಮರು ರೋಡುಗಳ ಮೇಲೆ ಶೂನ್ಯ ಬಿಚ್ಚಿ ಹಾಸಿ
ಮಲಗುವ ತಯಾರಿ

ಅಥವಾ ಅದಕ್ಕೆ ಮೊದಲು
ಓಣಿ ಓಣಿಗಳಲ್ಲಿ ಸಂದಿಗೊಂದಿಗಳಲ್ಲಿ ಹೊಕ್ಕು
ಕಾಂಪೌಂಡ್ ಗೇಟುಗಳ ಜಿಗಿದು ಬಳ್ಳಿಗಳ ಬಳಸಿ
ಬೊಗಳಿಸಿಕೊಂಡು ಸ್ವಚ್ಛಂದ ಖವ್ವಾಲಿ ಹಾಡುವ
ಬೀದಿ ಭಿಕಾರಿ

ನೃತ್ಯ ಮಂದಿರಗಳಲ್ಲಿ ಕಾಕ್‌ಟೇಲ್ ಹೀರಿ ನಶಾ ಏರಿ
ಸ್ಕರ್ಟುಗಳ ನಿರಿಗಳಲಿ ಸೆರೆಯಾಗಿ ತೂಕಡಿಸಿ
ತಲೆದೀಪ ಕೆಡಿಸಿ ಅರೆತೆರೆದ ಪರೆ ತೆರೆದು
ರಹಸ್ಯ ದೋಚುವ ಮುಖವಾಡಧಾರಿ

ಬೀದಿಯಲ್ಲಿ ಬಿದ್ದವರ ಕೆಸರಿನ ಜನರ
ಹೊಕ್ಕಳಬಳ್ಳಿ ಹಿಡಿದು ಜಗ್ಗುವ ಕ್ರೂರ ಅಸ್ತಿತ್ವಕ್ಕೆ
ಬಲವಂತ ನಿದ್ದೆಗುಳಿಗೆ ತಿನ್ನಿಸಿ ಮಲಗಿಸುವ ಹೆಣ್ಣು
ಈ ಮಹಾನಗರದ ಬೆತ್ತಲೆಕಣ್ಣು
ಸಾಗರದಂತೆ ಅಲೆಯೆದ್ದು
ಎಲ್ಲಾ ನುಂಗಿ ಹಿರಿನಾಗರದಂತೆ ಬಿದ್ದ ಜಾಡ್ಯ
ಧ್ಯಾನಕ್ಕೆ ಸಂದಿದೆ ಮೌನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಕಥಾಲೋಕಕ್ಕೊಂದು ಸುತ್ತು…
Next post ತೊಳೆಯು ಬಾ ಬಸವ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys