ಬುದ್ಧನ ದಾರಿಯ ಹಿಡಿದೇವು

ಬುದ್ಧನ ದಾರಿಯ ಹಿಡಿದೇವು….
ನಮಗೆ ನಾವು ಬೆಳಕಾದೇವು…. //ಪ//

ಮತ ಮೌಢ್ಯಗಳ ಅಡೆತಡೆಯಿಲ್ಲ….
ಧರ್ಮದಫೀಮಿನ ನಿಶೆ ಇಲ್ಲಿಲ್ಲ….
ಶಾಸ್ತ್ರದ ಕಂತೆ ಪುರಾಣ ಬೊಂತೆ
ಇಲ್ಲ ಇವು ನಮಗೆಂದಿಗೂ ಇಲ್ಲ
ನಮಗೆ ನಾವು ಬೆಳಕಾದೇವು….
ಬುದ್ಧನಲ್ಲೆ ನಿಜ ಕಂಡೇವು

ಜಾತಿ ಅನಿಷ್ಠದ ಕಳೆ ಕಿತ್ತೇವು….
ದೇವರಿಲ್ಲದ ನೊಗ ಹೊತ್ತೇವು….
ಮೇಲು ಕೀಳಿನ ಕುಂಟೆಯ ಹೊಡೆದು
ನವ ಸಮೃದ್ಧಿಯ ಬೆಳೆ ಬೆಳೆದೇವು
ನಮಗೆ ನಾವು ಬೆಳಕಾದೇವು. . . .
ಬುದ್ಧನಲ್ಲೆ ನಿಜ ತೋರೇವು

ನಡೆದ ದಾರಿ ಹೇಗಾದರು ಇರಲಿ….
ಕಮರಿದ ಕನಸು ಸಾವಿರ ಇರಲಿ….
ಬುದ್ಧನ ಪಂಜನು ಹಿಡಿದ ನಾವು
ಹೊಸ ಹಾದಿಯನು ಹಿಡಿದೇವು
ನಮಗೆ ನಾವು ಬೆಳಕಾದೇವು….
ಬೆಳಕಿನ ಭಾಷ್ಯವ ಬರೆದೇವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುಳ ಸಂಜೆಯಲಿ
Next post ದೇರಾಜೆಯವರ ಮಹಾಭಾರತ ಕಥಾಮೃತ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…