ಬುದ್ಧನ ದಾರಿಯ ಹಿಡಿದೇವು

ಬುದ್ಧನ ದಾರಿಯ ಹಿಡಿದೇವು….
ನಮಗೆ ನಾವು ಬೆಳಕಾದೇವು…. //ಪ//

ಮತ ಮೌಢ್ಯಗಳ ಅಡೆತಡೆಯಿಲ್ಲ….
ಧರ್ಮದಫೀಮಿನ ನಿಶೆ ಇಲ್ಲಿಲ್ಲ….
ಶಾಸ್ತ್ರದ ಕಂತೆ ಪುರಾಣ ಬೊಂತೆ
ಇಲ್ಲ ಇವು ನಮಗೆಂದಿಗೂ ಇಲ್ಲ
ನಮಗೆ ನಾವು ಬೆಳಕಾದೇವು….
ಬುದ್ಧನಲ್ಲೆ ನಿಜ ಕಂಡೇವು

ಜಾತಿ ಅನಿಷ್ಠದ ಕಳೆ ಕಿತ್ತೇವು….
ದೇವರಿಲ್ಲದ ನೊಗ ಹೊತ್ತೇವು….
ಮೇಲು ಕೀಳಿನ ಕುಂಟೆಯ ಹೊಡೆದು
ನವ ಸಮೃದ್ಧಿಯ ಬೆಳೆ ಬೆಳೆದೇವು
ನಮಗೆ ನಾವು ಬೆಳಕಾದೇವು. . . .
ಬುದ್ಧನಲ್ಲೆ ನಿಜ ತೋರೇವು

ನಡೆದ ದಾರಿ ಹೇಗಾದರು ಇರಲಿ….
ಕಮರಿದ ಕನಸು ಸಾವಿರ ಇರಲಿ….
ಬುದ್ಧನ ಪಂಜನು ಹಿಡಿದ ನಾವು
ಹೊಸ ಹಾದಿಯನು ಹಿಡಿದೇವು
ನಮಗೆ ನಾವು ಬೆಳಕಾದೇವು….
ಬೆಳಕಿನ ಭಾಷ್ಯವ ಬರೆದೇವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುಳ ಸಂಜೆಯಲಿ
Next post ದೇರಾಜೆಯವರ ಮಹಾಭಾರತ ಕಥಾಮೃತ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys