ಜಾಲೀಮರದ ಹಾಡು

ಕೇಳೊ ಗೆಳೆಯ ಕೇಳೊ ಕತೆಯ
ಉರಿ ಹತ್ತಿದ ಕಟ್ಟಿಗೆ
ಇದ್ದಿಲಾದ ವ್ಯಥೆಯ.

ಕನ್ನಡದ ಕಾಡಿನಲಿ ಏಸೊಂದು ಮರಗಳು
ಸಿರಿಗಂಧವೊಂದೇ ರಾಜನೇನು?
ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ
ಕನ್ನಡದ ಜಾಲೀಮರ ಬಲ್ಲೆಯೇನು?

ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ
ಕನ್ನಡದ ಕಲ್ಪತರು ನೋಡು ಗೆಳೆಯ
ಸಾಹುಕಾರರಿಗೆಲ್ಲ ಸಿರಿಗಂಧ ಬೇಕು
ಕೇಳುವರೆ ಗತಿಯಿಲ್ಲ ಕನ್ನಡದ ಕತೆಯ.

ಹೊಲದ ಕಾವಲಿಗಾಗಿ ಬೇಲಿ ಭಟನಾಗಿ
ಜಾಲಿಯದೆ ಜಯಘೋಷ
ತಣ್ಣೀರ ಕಾಯಿಸುವ ಸೌದೆಯಾಗಲು ಸಿದ್ಧ
ಸುತ್ತಿಕೊಂಡಿತು ಸರ್ಪ ಕಣ್ಣೀರ ಪಾಶ.

ಕನ್ನಡದ ಕಟ್ಟಿಗೆಯು ಇದ್ದಿಲಾಯಿತು ಇಲ್ಲಿ
ಗೆದ್ದ ಗದ್ದುಗೆಯೆ ನಗಬೇಡ ನೀನು
ಬಿದ್ದ ಇದ್ದಿಲಿನಲ್ಲಿ ಬೆಂಕಿ ಮೌನವಾಗಿಹುದು
ಕೆಂಪು ಕೆಂಡದ ಬೆಳಕು ಬಂದೀತು ಜೋಕೆ!
ಗರ ಬಡಿದು ಗದ್ದುಗೆಯು ಬಿದ್ದೀತು ನೆಲಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂ ದೇಶ ದೊಡ್ಡದು
Next post ಮಗುವಿನ ಪ್ರಶ್ನೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys