ಜಾಲೀಮರದ ಹಾಡು

ಕೇಳೊ ಗೆಳೆಯ ಕೇಳೊ ಕತೆಯ
ಉರಿ ಹತ್ತಿದ ಕಟ್ಟಿಗೆ
ಇದ್ದಿಲಾದ ವ್ಯಥೆಯ.

ಕನ್ನಡದ ಕಾಡಿನಲಿ ಏಸೊಂದು ಮರಗಳು
ಸಿರಿಗಂಧವೊಂದೇ ರಾಜನೇನು?
ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ
ಕನ್ನಡದ ಜಾಲೀಮರ ಬಲ್ಲೆಯೇನು?

ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ
ಕನ್ನಡದ ಕಲ್ಪತರು ನೋಡು ಗೆಳೆಯ
ಸಾಹುಕಾರರಿಗೆಲ್ಲ ಸಿರಿಗಂಧ ಬೇಕು
ಕೇಳುವರೆ ಗತಿಯಿಲ್ಲ ಕನ್ನಡದ ಕತೆಯ.

ಹೊಲದ ಕಾವಲಿಗಾಗಿ ಬೇಲಿ ಭಟನಾಗಿ
ಜಾಲಿಯದೆ ಜಯಘೋಷ
ತಣ್ಣೀರ ಕಾಯಿಸುವ ಸೌದೆಯಾಗಲು ಸಿದ್ಧ
ಸುತ್ತಿಕೊಂಡಿತು ಸರ್ಪ ಕಣ್ಣೀರ ಪಾಶ.

ಕನ್ನಡದ ಕಟ್ಟಿಗೆಯು ಇದ್ದಿಲಾಯಿತು ಇಲ್ಲಿ
ಗೆದ್ದ ಗದ್ದುಗೆಯೆ ನಗಬೇಡ ನೀನು
ಬಿದ್ದ ಇದ್ದಿಲಿನಲ್ಲಿ ಬೆಂಕಿ ಮೌನವಾಗಿಹುದು
ಕೆಂಪು ಕೆಂಡದ ಬೆಳಕು ಬಂದೀತು ಜೋಕೆ!
ಗರ ಬಡಿದು ಗದ್ದುಗೆಯು ಬಿದ್ದೀತು ನೆಲಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂ ದೇಶ ದೊಡ್ಡದು
Next post ಮಗುವಿನ ಪ್ರಶ್ನೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys