Home / ಕವನ / ಕವಿತೆ / ರಸಿಕ

ರಸಿಕ

ಶರದ ಚಂದ್ರನ ವಿರಹ ಗಾನಕೆ
ಸುರಿಸಿ ಹಿಮಜಲವೆಂಬ ಕಂಬನಿ
-ಚಿರ ಕಳಂಕಿಯ ಭಾವವರಿವಾ ಶಿಲೆಯೆ- ಭುವಿಯಲಿ ರಸಿಕನು-

ಅಣುವು ಕಣಗಳ ಚಿತ್ರ ಕೂಟದ!
ಕಣಕೆ ಕಣಗಳ ನೂತ ನಾದದ
-ಬೆಣಚು! ಕರೆಯಲು ಪೋಗಿ ಮುತ್ತುವ ಲೋಹ-ಕಣಿಕವೆ ರಸಿಕನು-

ಹರಿದ ಬೆಳಕನು ಹೀರಿಕೊಳ್ಳದೆ
ತಿರುಗಿ ತಿರುಗಿಸಿ ಮಧುರ ಛವಿಗಳ
-ಹರಿಸಿ ಭುವಿಗನುರಾಗಿಯಾಗುವ ರತ್ನ ಶಲಕವೆ ರಸಿಕನು-

ಸಲಿಲ ಗರ್ಭನು ಬಳಸಿ ಬರುತಲೆ
ಚಲಿಸೆ ಜೋತಿಯ ಜಿಹ್ವೆಯಾಗಲೆ
-ವಲಿದು ವೂಟೆಯೊಳರ್ಘ್ಯ ವೀಯುವ ಶೈಲಶಿಖರವೆ! ರಸಿಕನು-

ಅರಳೆ ದಳಗಳು ಹರಿಯೆ ಸೌರಭ
ಕರೆಸಿ ಕೊಳ್ಳದೆ ಬಂದು ರಸವನು
-ನಿರುತ ಹೀರುತ ಧೂಳೊಳದ್ದುವ ಮತ್ತ ಬಂಭರ ರಸಿಕನು-

ಪದವ ಕಂಡೊಡೆ ಪದವು ಮೊಳೆಯಲು
ಮುದವದುಕ್ಕಲು ಓದಿಯೋದುತ
-ಚದುರ ಹೃದಯವು ಬಿರಿದು ಕಂಪಿಡಲಗಗೊ! ನೋಡದೊ! ರಸಿಕನು-

ಶಿಖಿಯನೆತ್ತುತಲಿರಲು ಸೊಡರು!
ಮುಖವ ಪಂಖವ ನೀಯುತಾಹುತಿ
-ಸುಖವೆ ಲಯವೆಂದೆಣಿಸಿ! ಮುತ್ತುವ ಆ ಪತಂಗವೆ ರಸಿಕನು-

ಕವಿಯ ಕಮಲಕೆ ಮಿತ್ರ ರಸಿಕನು!
ಕವಿ ಸುಧಾರಸವುಣುವ ರಸಿಕನು!
-ಕವನ ಲಹರಿಯ ಕರೆವ ರತ್ನಾಕರನೆ ನಿರುಪಮ ರಸಿಕನು!-
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...