ನಾವಿಕರು

|| ನಾವಿಕರಾವಿಹವೆವು ಜೀವಾರ್ಣವದಲ್ಲಿ ತೇಲುತ್ತಿಹೆವು ||

ನಾವು ಜನುಮದ ನಾವೆ ಯೇರ್‍ದೆವು
ಸಾವು ನೋವನು ದೂರಲಿರುವೆವು
ಜೀವಕಕ್ಷರ ಭಾವ ಹೊಳೆಯಲಿ
-ಜಾವ ಜಾವಕೆ ನಾಡನೆನಹಲಿ-

ಅಲ್ಲಿತೆರೆ ಕೊರೆ ಕಲ್ಲು ಸುಳಿಯಿವೆ!
ಇಲ್ಲಿ ಹೂಡಿರಿ! ದೋಣಿಯೆನ್ನುತ
ಎಲ್ಲಸಾಗರ ನಾಭಿಯಲ್ಲಿರೆ!
-ಚಲ್ಪ ಬುದ್ದನ ಗರುಡದೀಪವು-

ನುಡಿದು ನಡೆಯುತ ತೇದು ತೊಳೆಯುತ
ಗಡಿಯ ಬೆಳಗುತ ನಿತ್ಯ ಜೀವನ-
ಉಡಿಗೆ ಯುಡಿಸುತ ತಿನಿಸಿನಲಿವೆಡೆ
-ಒಡನೆ ಯಾಡಲಿ ಗಾಂಧಿರೂಹದು –

ನೋಡಿನಲಿಯಲು-ಹೂಡಿದಣಿಯಲು
ಕೂಡೆಕರೆಯಲು-ಜೋಡಿಗತಿಥಿಯ!
ಕಾಡಿರವಿಠಾ ಕೂರಜಿಹ್ವೆಯು
-ಹಾಡಕಲಿಸಲಿ ನಾಡನೆನಹಿನ-

ನಲವುನೋವಿನ ಉಬ್ಬರಿಳಿತವ
ಗೆಲಿದು ತೇಲಲು ಜೀವಜಲಧಿಯ
ಲಿಳಿದು ಹೊರಟೆವು! ನಾಡನೆನಹಿನೊ
-ಳಳಿವುದುಳಿವುದ ಬಲ್ಲನಾತನು- ನಾವಿಕರಾನಿಹೆವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೬
Next post ನವಿಲುಗರಿ – ೯

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys