ತವರೂರ ಹಾದಿಯಲಿ

ತವರೂರ ಹಾದಿಯಲಿ ಹೂವು ಚೆಲ್ಲಿ
ಎನ್ನ ಮನೆಯ ಬೆಳಗುವಲ್ಲಿ
ಹೊನ್ನ ಕುಡಿಯ ತಾರೆಂದು ಒಡಲ
ಮಡಿಲ ತುಂಬಿ ಬಾರೆಂದು ಹೇಳಿ
ಹೋದಿರಿ! ಎನ್ನ ಸಖಾ ನಾನಿಲುವೇನೆ ||

ನಿಮ್ಮ ಮನೆಯ ಬೆಳಗುವ
ದೀಪವೆಂದೂ ಆರದೆ ಉಳಿಸುವೆ
ನಿಮ್ಮದೇ ಭಾವದುಸಿರಲಿ ನಿಮ್ಮ
ಒಲವ ಕಾಯುವೆ ಬರಬಾರದೆ ಸಖ
ಚಂದಿರ ಬೆಳಕು ಚೆಲ್ಲುವ ನಭಕೆ ||

ಬಾಳ ಒಲವಿನ ಪಯಣದಲ್ಲಿ
ಕೈ ಹಿಡಿದು ನಡೆಸಿದಿರಿ
ನೋವು ನಲಿವಲ್ಲಿ ಆಸರೆಯಾದಿರಿ
ಮರೆತು ಬಿಡಲು ನಿಮ್ಮನು
ಗೊಂಬೆಯಾಟ ಅಲ್ಲ ಇದು ತಿಳಿಯಿರಿ ||

ಎನ್ನ ಜೀವನದ ಉಸಿರಾಗಿ
ಮನದಂಗಳದಲ್ಲಿ ಮನೆ ಮಾಡಿದಿರಿ
ಭಾವನೆಗಳ ತೋಳ್ ತೆಕ್ಕೆಯಲಿ
ಬಿಗಿದೆನ್ನ ನಗಿಸಿ ಮನದರಸಿ ನೀ
ಎಂದದ್ದು ನೆನಪಿದೆಯಾ ಸಖ ||

ಉರಿಯುವುದೆ ಎಣ್ಣೆ ಇಲ್ಲದಾ ದೀಪ
ಒಲಿಯುವನೇ ಭಕ್ತಿ ಇಲ್ಲದೆ ದೇವನು
ಬದುಕುವುದೆ ನೀರಿಲ್ಲದೆ ಮೀನು
ನೀವಿಲ್ಲದೆ ಎನಗೆ ಯಾರು ಆಸರೆ
ಎನ್ನ ಮನದಲೀ ತುಂಬಿರುವಿರಿ ನೀವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀನಿಯರ್ ಕ್ರಿಕೆಟಿಗನ ಸಂಜೆ
Next post ಸಂಜೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…