ತವರೂರ ಹಾದಿಯಲಿ

ತವರೂರ ಹಾದಿಯಲಿ ಹೂವು ಚೆಲ್ಲಿ
ಎನ್ನ ಮನೆಯ ಬೆಳಗುವಲ್ಲಿ
ಹೊನ್ನ ಕುಡಿಯ ತಾರೆಂದು ಒಡಲ
ಮಡಿಲ ತುಂಬಿ ಬಾರೆಂದು ಹೇಳಿ
ಹೋದಿರಿ! ಎನ್ನ ಸಖಾ ನಾನಿಲುವೇನೆ ||

ನಿಮ್ಮ ಮನೆಯ ಬೆಳಗುವ
ದೀಪವೆಂದೂ ಆರದೆ ಉಳಿಸುವೆ
ನಿಮ್ಮದೇ ಭಾವದುಸಿರಲಿ ನಿಮ್ಮ
ಒಲವ ಕಾಯುವೆ ಬರಬಾರದೆ ಸಖ
ಚಂದಿರ ಬೆಳಕು ಚೆಲ್ಲುವ ನಭಕೆ ||

ಬಾಳ ಒಲವಿನ ಪಯಣದಲ್ಲಿ
ಕೈ ಹಿಡಿದು ನಡೆಸಿದಿರಿ
ನೋವು ನಲಿವಲ್ಲಿ ಆಸರೆಯಾದಿರಿ
ಮರೆತು ಬಿಡಲು ನಿಮ್ಮನು
ಗೊಂಬೆಯಾಟ ಅಲ್ಲ ಇದು ತಿಳಿಯಿರಿ ||

ಎನ್ನ ಜೀವನದ ಉಸಿರಾಗಿ
ಮನದಂಗಳದಲ್ಲಿ ಮನೆ ಮಾಡಿದಿರಿ
ಭಾವನೆಗಳ ತೋಳ್ ತೆಕ್ಕೆಯಲಿ
ಬಿಗಿದೆನ್ನ ನಗಿಸಿ ಮನದರಸಿ ನೀ
ಎಂದದ್ದು ನೆನಪಿದೆಯಾ ಸಖ ||

ಉರಿಯುವುದೆ ಎಣ್ಣೆ ಇಲ್ಲದಾ ದೀಪ
ಒಲಿಯುವನೇ ಭಕ್ತಿ ಇಲ್ಲದೆ ದೇವನು
ಬದುಕುವುದೆ ನೀರಿಲ್ಲದೆ ಮೀನು
ನೀವಿಲ್ಲದೆ ಎನಗೆ ಯಾರು ಆಸರೆ
ಎನ್ನ ಮನದಲೀ ತುಂಬಿರುವಿರಿ ನೀವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀನಿಯರ್ ಕ್ರಿಕೆಟಿಗನ ಸಂಜೆ
Next post ಸಂಜೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…