ತವರೂರ ಹಾದಿಯಲಿ

ತವರೂರ ಹಾದಿಯಲಿ ಹೂವು ಚೆಲ್ಲಿ
ಎನ್ನ ಮನೆಯ ಬೆಳಗುವಲ್ಲಿ
ಹೊನ್ನ ಕುಡಿಯ ತಾರೆಂದು ಒಡಲ
ಮಡಿಲ ತುಂಬಿ ಬಾರೆಂದು ಹೇಳಿ
ಹೋದಿರಿ! ಎನ್ನ ಸಖಾ ನಾನಿಲುವೇನೆ ||

ನಿಮ್ಮ ಮನೆಯ ಬೆಳಗುವ
ದೀಪವೆಂದೂ ಆರದೆ ಉಳಿಸುವೆ
ನಿಮ್ಮದೇ ಭಾವದುಸಿರಲಿ ನಿಮ್ಮ
ಒಲವ ಕಾಯುವೆ ಬರಬಾರದೆ ಸಖ
ಚಂದಿರ ಬೆಳಕು ಚೆಲ್ಲುವ ನಭಕೆ ||

ಬಾಳ ಒಲವಿನ ಪಯಣದಲ್ಲಿ
ಕೈ ಹಿಡಿದು ನಡೆಸಿದಿರಿ
ನೋವು ನಲಿವಲ್ಲಿ ಆಸರೆಯಾದಿರಿ
ಮರೆತು ಬಿಡಲು ನಿಮ್ಮನು
ಗೊಂಬೆಯಾಟ ಅಲ್ಲ ಇದು ತಿಳಿಯಿರಿ ||

ಎನ್ನ ಜೀವನದ ಉಸಿರಾಗಿ
ಮನದಂಗಳದಲ್ಲಿ ಮನೆ ಮಾಡಿದಿರಿ
ಭಾವನೆಗಳ ತೋಳ್ ತೆಕ್ಕೆಯಲಿ
ಬಿಗಿದೆನ್ನ ನಗಿಸಿ ಮನದರಸಿ ನೀ
ಎಂದದ್ದು ನೆನಪಿದೆಯಾ ಸಖ ||

ಉರಿಯುವುದೆ ಎಣ್ಣೆ ಇಲ್ಲದಾ ದೀಪ
ಒಲಿಯುವನೇ ಭಕ್ತಿ ಇಲ್ಲದೆ ದೇವನು
ಬದುಕುವುದೆ ನೀರಿಲ್ಲದೆ ಮೀನು
ನೀವಿಲ್ಲದೆ ಎನಗೆ ಯಾರು ಆಸರೆ
ಎನ್ನ ಮನದಲೀ ತುಂಬಿರುವಿರಿ ನೀವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀನಿಯರ್ ಕ್ರಿಕೆಟಿಗನ ಸಂಜೆ
Next post ಸಂಜೆ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys