ಸಂಜೆ

ಬಟ್ಟೆ ಬದಲಾಯಿಸುತ್ತಾ ಪ್ರಾಚೀನ ವೃಕ್ಷಗಳು
ಎತ್ತಿಹಿಡಿದ ಉಡುಪನ್ನು ನಿಧಾನವಾಗಿ ಧರಿಸುವುದು ಸಂಜೆ.
ನೋಡು: ನೀನು ನಿಂತಲ್ಲಿಂದ ಬಯಲು ಇಬ್ಬಾಗವಾಗಿದೆ,
ಕಣ್ಮರೆಯಾಗುವವರೆಗೂ ಒಂದು ಕೆಳಗೆ ಸಾಗಿದೆ, ಇನ್ನೊಂದು ಮುಗಿಲಿಗೇರಿದೆ.
ನೀನು ಎಲ್ಲಿಗೂ ಪೂರ್ತಿ ಸೇರಿದವನಲ್ಲ,
ನಿಶ್ಯಬ್ದವಾಗಿ ಕತ್ತಲಲ್ಲಿ ನಿಂತ ಮರೆಯವನಲ್ಲ, ರಾತ್ರಿ ಆಕಾಶದಲ್ಲಿ ಮೇಲೇರುತ್ತ
ಅನಂತತೆಯ ವರಿಸಿದ ನಕ್ಷತ್ರವಾಗುವ ಬೆಳಕೂ ನಿನ್ನ ನೆಲೆಯಿಲ್ಲ.
ಮಾತಿಗೂ ಮೀರಿ ಗೊಂದಲಗೊಂಡ ನಿನಗೆ ಉಳಿದಿರುವುದು
ನಿನ್ನ ಬದುಕು, ಮಾಗುತ್ತಿರುವ, ಕಂಬನಿ ತುಂಬಿದ ದೊಡ್ಡ ಬದುಕು,
ಒಮ್ಮೆ ಎಲ್ಲದರ ಒಳಗಾಗುತ್ತ, ಇನ್ನೊಮ್ಮೆ ಎಲ್ಲವನ್ನೂ ತುಂಬಿಕೊಳ್ಳುತ್ತ,
ಈಗ ಕಲ್ಲಾಗಿ ಮತ್ತೊಮ್ಮೆ ತಾರೆಯಾಗಿ ಬದಲಾಗುತ್ತಿರುವ ಬದುಕು.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತವರೂರ ಹಾದಿಯಲಿ
Next post ಕುವೆಂಪು ಕಾವ್ಯ : ಚಿಂತನೆಯ ಶಿಖರ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys