ಆಪ್ತ ಜೀವಕ್ಕೆ

ಈಗ ಹೊರಬಂತೆಲ್ಲ ಸತ್ಯ,
ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ;
ಯಾರೇನೆ ಆಡಲಿ ಅಪಥ್ಯ
ಭಂಡನುಡಿಗಳ ಕೊಂಚ ಸಹಿಸಿಕೊ
ಸುಳ್ಳನೆಂಬುದು ಸಿದ್ಧವಾದರೂ,
ತನ್ನೊಳಗೆ ಅಥವ ನೆರೆಹೊರೆಗೆ
ನಾಚದಂಥವರ ಜೊತೆ ಸ್ಪರ್‍ಧೆ
ಹಿರಿಜೀವ ನಡೆಸೀತು ಹೇಗೆ?
ಹುಚ್ಚು ಬೆರಳಾಡಿದರು ಮೇಲೆ,
ಬರಿ ಬಂಡೆಗಲ್ಲುಗಳ ನಡುವೆ,
ನಾದ ಚೆಲ್ಲುವ ವೀಣೆ ಹಾಗೆ
ನಕ್ಕು ಮುಖ ತಿರುಗಿಸಾ ಕಡೆಗೆ.
ಹಿರಿದಾದದ್ದಿದೆ ಗೆಲುವಿಗಿಂತ,
ತಾಳಿಕೋ ತಲೆಯೆತ್ತಿ ನಿಂತುಕೋ;
ಗೊತ್ತಿರುವ ಎಲ್ಲದಕ್ಕಿಂತ
ಅದೆ ಕಠಿಣ ಅಲ್ಲವೆ, ಕೇಳಿಕೋ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನಿಗೆ ಆಸರೆ ನೀಡಿದ್ದಲ್ಲದೆ ಐರಿಷ್ ರಂಗಭೂಮಿಯ ಪುನರುಜ್ಜೀವನಕ್ಕೆ ಅವನನ್ನು ಹುರಿದುಂಬಿಸಿದ ಲೇಡಿ ಗ್ರೆಗರಿಯನ್ನು ಕುರಿತ ಕವನ. ಐರ್‍ಲೆಂಡಿನ ಭೂಮಿ ಚಳುವಳಿಯ ಸಂಬಂಧದಲ್ಲಿ ಅವಳ ‘ಕೂಲೆ’ ಬಂಗಲೆಯ ಸುತ್ತಲ ಜಮೀನು ವಿವಾದಕ್ಕೊಳಗಾಯಿತು. ಖಿನ್ನಳಾದ ಲೇಡಿ ಗ್ರೆಗರಿಯನ್ನು ಸಂತೈಸುವ ಧಾಟಿಯಲ್ಲಿ ಬರೆದ ಪದ್ಯ ಇದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೦

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys