ಆಪ್ತ ಜೀವಕ್ಕೆ

ಈಗ ಹೊರಬಂತೆಲ್ಲ ಸತ್ಯ,
ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ;
ಯಾರೇನೆ ಆಡಲಿ ಅಪಥ್ಯ
ಭಂಡನುಡಿಗಳ ಕೊಂಚ ಸಹಿಸಿಕೊ
ಸುಳ್ಳನೆಂಬುದು ಸಿದ್ಧವಾದರೂ,
ತನ್ನೊಳಗೆ ಅಥವ ನೆರೆಹೊರೆಗೆ
ನಾಚದಂಥವರ ಜೊತೆ ಸ್ಪರ್‍ಧೆ
ಹಿರಿಜೀವ ನಡೆಸೀತು ಹೇಗೆ?
ಹುಚ್ಚು ಬೆರಳಾಡಿದರು ಮೇಲೆ,
ಬರಿ ಬಂಡೆಗಲ್ಲುಗಳ ನಡುವೆ,
ನಾದ ಚೆಲ್ಲುವ ವೀಣೆ ಹಾಗೆ
ನಕ್ಕು ಮುಖ ತಿರುಗಿಸಾ ಕಡೆಗೆ.
ಹಿರಿದಾದದ್ದಿದೆ ಗೆಲುವಿಗಿಂತ,
ತಾಳಿಕೋ ತಲೆಯೆತ್ತಿ ನಿಂತುಕೋ;
ಗೊತ್ತಿರುವ ಎಲ್ಲದಕ್ಕಿಂತ
ಅದೆ ಕಠಿಣ ಅಲ್ಲವೆ, ಕೇಳಿಕೋ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನಿಗೆ ಆಸರೆ ನೀಡಿದ್ದಲ್ಲದೆ ಐರಿಷ್ ರಂಗಭೂಮಿಯ ಪುನರುಜ್ಜೀವನಕ್ಕೆ ಅವನನ್ನು ಹುರಿದುಂಬಿಸಿದ ಲೇಡಿ ಗ್ರೆಗರಿಯನ್ನು ಕುರಿತ ಕವನ. ಐರ್‍ಲೆಂಡಿನ ಭೂಮಿ ಚಳುವಳಿಯ ಸಂಬಂಧದಲ್ಲಿ ಅವಳ ‘ಕೂಲೆ’ ಬಂಗಲೆಯ ಸುತ್ತಲ ಜಮೀನು ವಿವಾದಕ್ಕೊಳಗಾಯಿತು. ಖಿನ್ನಳಾದ ಲೇಡಿ ಗ್ರೆಗರಿಯನ್ನು ಸಂತೈಸುವ ಧಾಟಿಯಲ್ಲಿ ಬರೆದ ಪದ್ಯ ಇದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೦

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…