ಎಲ್ಲಕ್ಕೂ ತಂದೆಯೇ ಕಾರಣ

ಎಲ್ಲಕ್ಕೂ ತಂದೆಯೇ ಕಾರಣ

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ಹೆಣ್ಣು ಸಂತಾನವು ಒಂದೇ ಇರಲೆಂಬ ಹಂಬಲ ನಮ್ಮ ಮೂರ್ಖ ಜನಕ್ಕಿದೆ. ಹೆಣ್ಣು ಹೆಚ್ಚಾದರೆ ಒಂದು ಗಂಡು ಮಗುವನ್ನು ಹೆತ್ತುಕೋಡದ ಗಯ್ಯಾಳಿ, ಎಂದು ಹೆಣ್ಣಿಗೆ ಶಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಇಂದು ಗೌರವ ಪ್ರತಿಷ್ಟೇ ವಂಶದ ವಾಹಿನಿಗೆ ಹೆಣ್ಣೇ ಬಹುತೇಕ ಕಡೆ ಸಾಬೀತಾಗುತ್ತಿದ್ದಾಳೆ ಮತ್ತು ತಂದೆ ತಾಯಿಯರನ್ನು ಸಲಹುತ್ತಾಳೆ, ಸಂತೈಸುತ್ತಾಳೆ. ಗಂಡುಮಕ್ಕಳಲ್ಲಿ ಬಹುತೇಕ ಜನ ಪೋಲಿ ಪುಂಡರಾಗಿ ಹಿಂಸೆಯಲ್ಲಿ ತೊಡಗಿ ಮರ್ಯಾದೆಯನ್ನು ಹರಾಜು ಹಾಕುವುದು ನಮ್ಮ ಜನಕ್ಕೆ ಕಾಣುವುದೇ ಇಲ್ಲ. ಇದೇನೇ ಇರಲಿ, ಇಲ್ಲಿ ಇದು ಮುಖ್ಯ ಪ್ರಶ್ನೆ ಅಲ್ಲವೇ ಅಲ್ಲ. ಈಗ ವೈಜ್ಞಾನಿಕವಾಗಿ ಚಿಂತಿಸೋಣ. ಯಾವುದೇ ಮಗುವಿನಲಿಂಗ ನಿರ್ಧಾರವಾಗುವುದು ತಂದೆಯಿಂದ ಮಾತ್ರವೆಂದು ವಿಜ್ಞಾನಿಗಳು ಹೇಳುತ್ತಾರೆ. ತಂದೆಯಾದವನು X ಕ್ರೋಮೊಜೋಮ್, ನೀಡಿದರೆ ತಾಯಿಯ x ಜತೆಗೂಡಿ XX ಆಗಿ ಹೆಣ್ಣಾಗುತ್ತದೆ. y ಕ್ರೋಮೋಜೋಮ್ ನೀಡಿದರೆ ತಾಯಿಯ x ಕ್ರೋಮೋಜೋಮ್ ಜೊತೆ ಸೇರಿ xy ಗಂಡಾಗುತ್ತದೆ. ಆದ್ದರಿಂದ ಗಂಡಿಗೆ ತಂದೆ ನೀಡುವ ಕ್ರೋಮೋಜೋಮ್ ಹೆಣ್ಣು ಅಥವಾ ಗಂಡನ್ನು ರೂಪಿಸುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಹೆಂಡತಿಯಾದವಳು ಹೆಣ್ಣು ಹೆತ್ತರೆ ಗಂಡುಮಗುವಿಗಾಗಿ ಹಂಬಲಿಸಿ ಮತ್ತೆ ಮತ್ತೇ ಗರ್ಭಿಣಿಯಾಗುತ್ತಾಳೆ. ಇದೇ ರೀತಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವಿಲ್ಲದೇ ಗರ್ಭೀಣಿಯಾದವಳು ದೈಹಿಕವಾಗಿ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾಳೆ.

ತಿನ್ನುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರವನ್ನು ಮನೆಯ ಯಜಮಾನನಿಗೆ ಅಂದರೆ ಗಂಡನಿಗೆ ಸಲ್ಲುವುದರಿಂದ ತಾಯಿ ತಿನ್ನುವ ಆಹಾರ ಪೌಷ್ಟಿಕವಾಗಿರುವುದಿಲ್ಲ. ಹೀಗೆ ದಿನಗಳೆದಂತೆ ಕೆಲವೊಮ್ಮೆ ಹೆರುವ ಮಗು ಅಪೌಷ್ಠಿಕತೆಯಿಂದ ಇದು ಸರಿಯಾದ ರೀತಿಯಲಿ ಬೆಳವಣಿಗೆಯಾಗದೇ ಹುಟ್ಟುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಯಾವುದೇ ಹೆಣ್ಣು ಅಥವಾ ಗಂಡು ಮಗುವಾಗಬೇಕಾದರೆ ಗಂಡಿನ x-ಅಥವಾ y ಕ್ರೋಮೊಜೋಮ್‌ಗಳೇ ಕಾರಣವಾಗಿರುತ್ತವೆ ಎಂಬ ಸತ್ಯವನ್ನು ಹೆಣ್ಣಿಗೆ ತೆಗಳುವವರು ಅರಿತುಕೊಳ್ಳಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರದ ಹಾಡು
Next post ಸಾಲುಗಳ ಬೊಂಬೆ ಕೇಳೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…