Home / ಲೇಖನ / ವಿಜ್ಞಾನ / ಎಲ್ಲಕ್ಕೂ ತಂದೆಯೇ ಕಾರಣ

ಎಲ್ಲಕ್ಕೂ ತಂದೆಯೇ ಕಾರಣ

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ಹೆಣ್ಣು ಸಂತಾನವು ಒಂದೇ ಇರಲೆಂಬ ಹಂಬಲ ನಮ್ಮ ಮೂರ್ಖ ಜನಕ್ಕಿದೆ. ಹೆಣ್ಣು ಹೆಚ್ಚಾದರೆ ಒಂದು ಗಂಡು ಮಗುವನ್ನು ಹೆತ್ತುಕೋಡದ ಗಯ್ಯಾಳಿ, ಎಂದು ಹೆಣ್ಣಿಗೆ ಶಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಇಂದು ಗೌರವ ಪ್ರತಿಷ್ಟೇ ವಂಶದ ವಾಹಿನಿಗೆ ಹೆಣ್ಣೇ ಬಹುತೇಕ ಕಡೆ ಸಾಬೀತಾಗುತ್ತಿದ್ದಾಳೆ ಮತ್ತು ತಂದೆ ತಾಯಿಯರನ್ನು ಸಲಹುತ್ತಾಳೆ, ಸಂತೈಸುತ್ತಾಳೆ. ಗಂಡುಮಕ್ಕಳಲ್ಲಿ ಬಹುತೇಕ ಜನ ಪೋಲಿ ಪುಂಡರಾಗಿ ಹಿಂಸೆಯಲ್ಲಿ ತೊಡಗಿ ಮರ್ಯಾದೆಯನ್ನು ಹರಾಜು ಹಾಕುವುದು ನಮ್ಮ ಜನಕ್ಕೆ ಕಾಣುವುದೇ ಇಲ್ಲ. ಇದೇನೇ ಇರಲಿ, ಇಲ್ಲಿ ಇದು ಮುಖ್ಯ ಪ್ರಶ್ನೆ ಅಲ್ಲವೇ ಅಲ್ಲ. ಈಗ ವೈಜ್ಞಾನಿಕವಾಗಿ ಚಿಂತಿಸೋಣ. ಯಾವುದೇ ಮಗುವಿನಲಿಂಗ ನಿರ್ಧಾರವಾಗುವುದು ತಂದೆಯಿಂದ ಮಾತ್ರವೆಂದು ವಿಜ್ಞಾನಿಗಳು ಹೇಳುತ್ತಾರೆ. ತಂದೆಯಾದವನು X ಕ್ರೋಮೊಜೋಮ್, ನೀಡಿದರೆ ತಾಯಿಯ x ಜತೆಗೂಡಿ XX ಆಗಿ ಹೆಣ್ಣಾಗುತ್ತದೆ. y ಕ್ರೋಮೋಜೋಮ್ ನೀಡಿದರೆ ತಾಯಿಯ x ಕ್ರೋಮೋಜೋಮ್ ಜೊತೆ ಸೇರಿ xy ಗಂಡಾಗುತ್ತದೆ. ಆದ್ದರಿಂದ ಗಂಡಿಗೆ ತಂದೆ ನೀಡುವ ಕ್ರೋಮೋಜೋಮ್ ಹೆಣ್ಣು ಅಥವಾ ಗಂಡನ್ನು ರೂಪಿಸುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಹೆಂಡತಿಯಾದವಳು ಹೆಣ್ಣು ಹೆತ್ತರೆ ಗಂಡುಮಗುವಿಗಾಗಿ ಹಂಬಲಿಸಿ ಮತ್ತೆ ಮತ್ತೇ ಗರ್ಭಿಣಿಯಾಗುತ್ತಾಳೆ. ಇದೇ ರೀತಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವಿಲ್ಲದೇ ಗರ್ಭೀಣಿಯಾದವಳು ದೈಹಿಕವಾಗಿ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾಳೆ.

ತಿನ್ನುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರವನ್ನು ಮನೆಯ ಯಜಮಾನನಿಗೆ ಅಂದರೆ ಗಂಡನಿಗೆ ಸಲ್ಲುವುದರಿಂದ ತಾಯಿ ತಿನ್ನುವ ಆಹಾರ ಪೌಷ್ಟಿಕವಾಗಿರುವುದಿಲ್ಲ. ಹೀಗೆ ದಿನಗಳೆದಂತೆ ಕೆಲವೊಮ್ಮೆ ಹೆರುವ ಮಗು ಅಪೌಷ್ಠಿಕತೆಯಿಂದ ಇದು ಸರಿಯಾದ ರೀತಿಯಲಿ ಬೆಳವಣಿಗೆಯಾಗದೇ ಹುಟ್ಟುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಯಾವುದೇ ಹೆಣ್ಣು ಅಥವಾ ಗಂಡು ಮಗುವಾಗಬೇಕಾದರೆ ಗಂಡಿನ x-ಅಥವಾ y ಕ್ರೋಮೊಜೋಮ್‌ಗಳೇ ಕಾರಣವಾಗಿರುತ್ತವೆ ಎಂಬ ಸತ್ಯವನ್ನು ಹೆಣ್ಣಿಗೆ ತೆಗಳುವವರು ಅರಿತುಕೊಳ್ಳಬೇಕಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...