Home / ಕವನ / ಕವಿತೆ / ಬೆಳಸು

ಬೆಳಸು


ನನ್ನ ಅಜ್ಜಿಯದು
ತುಂಬು ಸಂಸಾರ
ನನ್ನ ಅವ್ವನಿಗೆ
ನಾಲ್ಕು ಮಂದಿ ಮಕ್ಕಳು
ನನಗೆ-
ಒಬ್ಬಳೇ ಹೆಣ್ಣು ಮಗಳು
ಎಲ್ಲ ನೆನಪಾಗುವುದು-

ನಾನು, ನನ್ನ ತಂಗಿ
ತಮ್ಮಂದಿರು ಹಂಚಿಕೊಂಡೆವು
ಅನ್ನದಂತೆಯೇ ಪ್ರೀತಿಯನ್ನು
ಸಾಧಿಸಿದೆವು ದ್ವೇಷವನ್ನು
ಬಿಟ್ಟುಕೊಟ್ಟವು ಹಠವನ್ನು
ಒಟ್ಟಾಗಿಯೆ ಕಂಡೆವು ಕನಸುಗಳನ್ನು

ಕಿತ್ತಾಡಿದೆವು, ರಾಜಿಯಾದೆವು
ಕರುಬಿದೆವು, ಮರುಗಿದೆವು
ಪರಸ್ಪರ ಜೊತೆಯಾಗಿಯೇ
ಇಟ್ಟೆವು ಹೆಜ್ಜೆಗಳನ್ನು
ಅವ್ವ ನೋಯುವಳೆಂದು
ಬಲಿಕೊಟ್ಟೆವು
ಸಣ್ಣ ಪುಟ್ಟ ಆಕಾಂಕ್ಷೆಗಳನ್ನು

ಅಪ್ಪ ಬಸವಳಿಯದಿರಲಿ
ಎಂದು ಹೆಗಲು ಕೊಟ್ಟೆವು ನೊಗಕ್ಕೆ
ಬಯಸದ ಪ್ರತಿಫಲವನ್ನು
ಕೊಟ್ಟು-ಕೊಂಡೆವು ಪ್ರೀತಿಯ
ಈಜಿ ಪ್ರವಾಹದ ವಿರುದ್ಧ
ಸೇರಿದೆವು ದಡ ಒಟ್ಟಾಗಿ


ಈಗ:
ನನ್ನ ಮಗಳು ಇಡೀ
ಪರಿವಾರದ ಕಣ್ಮಣಿ
ಅಣ್ಣ, ತಂಗಿ, ತಮ್ಮ
ಸಂಬಂಧಗಳ ಒಳಸುಳಿ ಅರಿಯಳು
ರಾಜಿಯಾಗುವುದು, ಹಂಚಿಕೊಳ್ಳುವುದು
ಅವಳಿಗೆ ನಿಘಂಟಿನ ಪದಗಳು

ಅಚ್ಚೆಯ ಕುಂಡದಲ್ಲಿ
ಅವ್ವ ಅಪ್ಪನ ನೆರಳಲ್ಲೇ
ಬೆಳೆದ ಹೂಬಳ್ಳಿ
ಪ್ರಖರ ಸೂರ್‍ಯನನು ಎದುರಿಸಲಾರಳು
ಅಂಜುಕುಳಿ-
ಗಾಳಿಯಾಟಕೂ ಬೆದರುವಳು

ವಿಚಿತ್ರವೆನಿಸುವುದು
ಎಷ್ಟು ಇತ್ತರೂ
ಏನೇ ಇತ್ತರೂ
ಮತ್ತಷ್ಟು ಬಯಸುವಳು
ಭಿಕ್ಷುಕಿಯಂತೆ….

ಇಡೀ ಲೋಕವ
ತಂದು ಸುರಿದರೂ ತುಂಬದವಳ
ಭಿಕ್ಷಾಪಾತ್ರೆ
ಹಸಿವು ಹಸಿವೆಂದು ಚೀರುವಳು


ನನಗೊ ಒಳಗೊಳಗೆ ವೇದನೆ
ಮಮತೆ ಮುಳುವಾಯಿತೆ?
ಅನುಮಾನ-

ನಿದ್ರೆಯಿಲ್ಲದ ರಾತ್ರಿಗಳಲ್ಲಿ
ಕೆಟ್ಟ ಕನಸುಗಳು…

ಶುಭ್ರವಾದ ಆಕಾಶ
ಹಕ್ಕಿಯಾಗಿದ್ದಾಳೆ ನನ್ನ ಮಗಳು
ಅವಳಿಗೆ ರೆಕ್ಕೆಗಳೇ ಇಲ್ಲ!
ನೀಲಿ ಸಮುದ್ರ
ದೋಣಿಯಲ್ಲಿದ್ದಾಳೆ ನನ್ನ ಮಗಳು
ಹುಟ್ಟೇ ಇಲ್ಲ!

ನನೇ ನೆಟ್ಟು ನೀರುಣಿಸಿ
ಬೆಳೆಸಿದ ಸಸಿ
ಭರಭರ ಬೆಳೆದು ಸೊಕ್ಕಿ ನಿಂತಿದೆ
ಮರವಾಗಿ-
ಸ್ವಾರ್ಥವೇ ಅದರ ಫಲವಾಗಿ…

ಎದೆ ಹಾಲು
ಹಾಲಾಹಲವಾಗುವುದೆಂದರೆ…
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ