ಕರುಣೆಯೆ ಬೆಳಕು

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ

ಎಷ್ಟೋ ನಾಗರಿಕತೆಗಳ ಕತೆಗಳ
ಎಷ್ಟೋ ರಾಜ್ಯದ ರಾಜರ ಚಿತೆಗಳ
ಕಂಡಿತು ಇತಿಹಾಸದ ಕಣ್ಣು
ಕೊಂಡಿತು ನಾವೀ ನಡೆಯುವ ಮಣ್ಣು

ಮನುಷ್ಯ ಮನುಷ್ಯರ ನಡುವಿನ ಯುದ್ದ
ಏನ ಗೆಲ್ಲಲು ಯಾರ ವಿರುದ್ದ ?
ಗೆದ್ಡವರಾರೂ ಗೆಲ್ಲಲೆ ಇಲ್ಲ
ಇದ್ಡವರೆಂದೂ ಇರುವುದು ಇಲ್ಲ

ಎಲ್ಲಿ ನಿನ್ನೆಯ ವೀರಾಧಿವೀರರು?
ಎಲ್ಲಿ ಅನಾದಿಯ ದೈವ ದೇವರು?
ಎಲ್ಲ ಮಾಯೆಗಳನು ಮೀರಿ ನಿಂತು
ಸಲ್ಲಬೇಕು ಜೀವದ ತಂತು

ಜೀವವೊಂದೇ ಜೀವಕೆ ಬದ್ಧ
ಸೇವೆಯಿಂದಲೆ ಜೀವನ ಶುದ್ಧ
ಎಂದ ಮಹಾತ್ಮನ ಮಾತಿದು ಸತ್ಯ
ಅಂದಿಗು ಇಂದಿಗು ಎಂದಿಗು ನಿತ್ಯ

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮವೆನಲು ಹಾಸ್ಯವೇ?
Next post ಮಾನ ಕಳೆದೆ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…