ಕರುಣೆಯೆ ಬೆಳಕು

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ

ಎಷ್ಟೋ ನಾಗರಿಕತೆಗಳ ಕತೆಗಳ
ಎಷ್ಟೋ ರಾಜ್ಯದ ರಾಜರ ಚಿತೆಗಳ
ಕಂಡಿತು ಇತಿಹಾಸದ ಕಣ್ಣು
ಕೊಂಡಿತು ನಾವೀ ನಡೆಯುವ ಮಣ್ಣು

ಮನುಷ್ಯ ಮನುಷ್ಯರ ನಡುವಿನ ಯುದ್ದ
ಏನ ಗೆಲ್ಲಲು ಯಾರ ವಿರುದ್ದ ?
ಗೆದ್ಡವರಾರೂ ಗೆಲ್ಲಲೆ ಇಲ್ಲ
ಇದ್ಡವರೆಂದೂ ಇರುವುದು ಇಲ್ಲ

ಎಲ್ಲಿ ನಿನ್ನೆಯ ವೀರಾಧಿವೀರರು?
ಎಲ್ಲಿ ಅನಾದಿಯ ದೈವ ದೇವರು?
ಎಲ್ಲ ಮಾಯೆಗಳನು ಮೀರಿ ನಿಂತು
ಸಲ್ಲಬೇಕು ಜೀವದ ತಂತು

ಜೀವವೊಂದೇ ಜೀವಕೆ ಬದ್ಧ
ಸೇವೆಯಿಂದಲೆ ಜೀವನ ಶುದ್ಧ
ಎಂದ ಮಹಾತ್ಮನ ಮಾತಿದು ಸತ್ಯ
ಅಂದಿಗು ಇಂದಿಗು ಎಂದಿಗು ನಿತ್ಯ

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮವೆನಲು ಹಾಸ್ಯವೇ?
Next post ಮಾನ ಕಳೆದೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…