ಕರುಣೆಯೆ ಬೆಳಕು

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ

ಎಷ್ಟೋ ನಾಗರಿಕತೆಗಳ ಕತೆಗಳ
ಎಷ್ಟೋ ರಾಜ್ಯದ ರಾಜರ ಚಿತೆಗಳ
ಕಂಡಿತು ಇತಿಹಾಸದ ಕಣ್ಣು
ಕೊಂಡಿತು ನಾವೀ ನಡೆಯುವ ಮಣ್ಣು

ಮನುಷ್ಯ ಮನುಷ್ಯರ ನಡುವಿನ ಯುದ್ದ
ಏನ ಗೆಲ್ಲಲು ಯಾರ ವಿರುದ್ದ ?
ಗೆದ್ಡವರಾರೂ ಗೆಲ್ಲಲೆ ಇಲ್ಲ
ಇದ್ಡವರೆಂದೂ ಇರುವುದು ಇಲ್ಲ

ಎಲ್ಲಿ ನಿನ್ನೆಯ ವೀರಾಧಿವೀರರು?
ಎಲ್ಲಿ ಅನಾದಿಯ ದೈವ ದೇವರು?
ಎಲ್ಲ ಮಾಯೆಗಳನು ಮೀರಿ ನಿಂತು
ಸಲ್ಲಬೇಕು ಜೀವದ ತಂತು

ಜೀವವೊಂದೇ ಜೀವಕೆ ಬದ್ಧ
ಸೇವೆಯಿಂದಲೆ ಜೀವನ ಶುದ್ಧ
ಎಂದ ಮಹಾತ್ಮನ ಮಾತಿದು ಸತ್ಯ
ಅಂದಿಗು ಇಂದಿಗು ಎಂದಿಗು ನಿತ್ಯ

ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮವೆನಲು ಹಾಸ್ಯವೇ?
Next post ಮಾನ ಕಳೆದೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys