Home / ಕವನ / ಕವಿತೆ / ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ

ನಡೆದರು ಮುಗಿಯದ ಕಾಡಿನ ಹಾದಿ
ಕಾಣಿಸಿತೊಂದು ಗುಡಿಸಲ ಬಿಡದಿ

ಮೀಯಲು ಬೆಚ್ಚನೆ ಬಿಸಿ ನೀರಿತ್ತು
ಕುಡಿಯಲು ಪನ್ನೀರಿನ ಷರಬತ್ತು

ಒಲೆಯ ಮೇಲೊಂದು ಮಾಯಾ ಗಡಿಗೆ
ಬಯಸಿದ ತಕ್ಷಣ ಪಾಯಸದಡಿಗೆ

ಆ ದಿನ ಅಲ್ಲೇ ನಮ್ಮ ಠಿಕಾಣಿ
ದಿಂಬಿನ ಬದಿಗೇ ನೂಲಿನ ಏಣಿ

ಮಲಗಿರಲೇನದು ಯಾರೋ ಎದ್ದು
ಮನೆಯೊಳಗೆಲ್ಲೋ ನಡೆಯುವ ಸದ್ದು

ಕನಸೋ ನೆನಸೊ ಯಾರಿಗೆ ಗೊತ್ತು
ರಾತ್ರಿ ತುಂಬಾ ಹೊತ್ತಾಗಿತ್ತು

ಅಜ್ಜೀ ಅಜ್ಜೀ ಏನಜ್ಜೀ
ನಡೆಯುವ ಸದ್ದು ಯಾರಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಹೇಳುವೆನೊಂದು ಸುದ್ದಿಯ ನಿಮಗೆ
ಕಣ್ಣಿಗೆ ಮಂಪರು ಹತ್ತುವವರೆಗೆ

ತುಂಬಾ ಚೆಲುವೆ ರಾಜನ ಮಗಳು
ಕಾಲಿನವರೆಗೂ ಇಳಿಯುವ ಹೆರಳು

ಆದರೆ ಒಬ್ಬ ಮಾಂತ್ರಿಕ ಬಂದು
ಪೀಡಿಸುತಿರುವನು ಆಕೆಯನಿಂದು

ತಾನೇ ಹಿಡಿದು ಆಕೆಯ ಕೈಯ
ರಾಜ್ಯವ ಪಡೆವುದು ಅವನ ಉಪಾಯ

ನಾಳೆ ಹೇಳುವೆ ಇನ್ನುಳಿದದ್ದು
ಮಲಗಿರಿ ಈಗ ಕಂಬಳಿ ಹೊದ್ದು

ಅಜ್ಜೀ ಅಜ್ಜೀ ಹೇಳಜ್ಜೀ
ಆತನ ಕೊಲುವುದು ಹೇಗಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಏಳು ಸಮುದ್ರಗಳಾಚೆಗೆ ದ್ವೀಪ
ಉರಿಯುವುದಲ್ಲಿ ನಂದಾದೀಪ

ಅಲ್ಲೇ ಇರುವುದು ಮಾಂತ್ರಿಕ ಜೀವ
ಆರಿಸಲೆಂದೇ ಆತನು ಸಾವ

ಆದರೆ ಮಾತ್ರ ದ್ವೀಪದ ಸುತ್ತಲು
ರಕ್ಕಸನೊಬ್ಬ ಇರುವನು ಕಾವಲು

ನಾಳೆ ಹೇಳುವೆ ಆತನ ಗುಟ್ಟು
ಮಲಗಿರಿ ಈಗ ಗಾಬರಿ ಬಿಟ್ಟು

ಭಾರೀ ನಿದ್ದೆಯೆ ಬಿದ್ದಿರಬೇಕು
ಎಚ್ಚರವಾಗಲು ಸೂರ್ಯನ ಬೆಳಕು

ಸುತ್ತ ನೋಡಿದರೆ ಉರಿಗಣ್ಣುಜ್ಜಿ
ಎಲ್ಲೂ ಇಲ್ಲದ ಅಡಗೂಲಜ್ಜಿ

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲ ಗುರುತುಗಳನು ಒಮ್ಮೆಲೆ ಉಜ್ಜಿ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್