ಸರಕಾರದ ವಿರುದ್ಧ ನಾಯಕ

ಊರಲ್ಲೆಲ್ಲ ಹಾಹಾಕಾರ
ಜನರ ಸ್ಥಿತಿ ಭೀಕರ
ಹಾಗಿದ್ರೂನೂ ಹಾಕ್ತಾರಪೋ
ಕುಂತರೆ ನಿಂತರೆ ಕರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬಿಸಿಲಿಗೆ ನಿಂತಿದೆ ಗಿಡ ಮರ
ಕುಡಿಯೋ ನೀರಿಗು ಬರ
ಅನ್ನ ಕೇಳಿದರೆ ತಗೋ ಅಂತಾರೆ
ಕಂಪೋಸ್ಟ್ ಗೊಬ್ಬರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಹೊಟ್ಟೆಯೊಳಗೆ ಉಪ್ಪು ಖಾರ
ರೋಡಿನ ಮೇಲೆ ದಾಮರ
ಹಾಗಿದ್ರೂನೂ ಕೊಡಬೇಕೇನು
ಸರಕಾರಕ್ಕೆ ಸಹಕಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬೇಡ ನಮಗೆ ಸರಕಾರ
ಕೊಡಿ ಅನ್ನ ಕೋಳಿ ಸಾರ
ಕೊಡೀಂದ್ರೂನು ಕೊಡ್ತಾರಾ
ಬಳೀರಿವರ ಮುಕಕ್ಕೆ ತಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈತ ಸಂದರ್ಶನ
Next post ಬೊಕ್ಕ ತಲೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…