ಸರಕಾರದ ವಿರುದ್ಧ ನಾಯಕ

ಊರಲ್ಲೆಲ್ಲ ಹಾಹಾಕಾರ
ಜನರ ಸ್ಥಿತಿ ಭೀಕರ
ಹಾಗಿದ್ರೂನೂ ಹಾಕ್ತಾರಪೋ
ಕುಂತರೆ ನಿಂತರೆ ಕರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬಿಸಿಲಿಗೆ ನಿಂತಿದೆ ಗಿಡ ಮರ
ಕುಡಿಯೋ ನೀರಿಗು ಬರ
ಅನ್ನ ಕೇಳಿದರೆ ತಗೋ ಅಂತಾರೆ
ಕಂಪೋಸ್ಟ್ ಗೊಬ್ಬರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಹೊಟ್ಟೆಯೊಳಗೆ ಉಪ್ಪು ಖಾರ
ರೋಡಿನ ಮೇಲೆ ದಾಮರ
ಹಾಗಿದ್ರೂನೂ ಕೊಡಬೇಕೇನು
ಸರಕಾರಕ್ಕೆ ಸಹಕಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬೇಡ ನಮಗೆ ಸರಕಾರ
ಕೊಡಿ ಅನ್ನ ಕೋಳಿ ಸಾರ
ಕೊಡೀಂದ್ರೂನು ಕೊಡ್ತಾರಾ
ಬಳೀರಿವರ ಮುಕಕ್ಕೆ ತಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈತ ಸಂದರ್ಶನ
Next post ಬೊಕ್ಕ ತಲೆ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…