ಸರಕಾರದ ವಿರುದ್ಧ ನಾಯಕ

ಊರಲ್ಲೆಲ್ಲ ಹಾಹಾಕಾರ
ಜನರ ಸ್ಥಿತಿ ಭೀಕರ
ಹಾಗಿದ್ರೂನೂ ಹಾಕ್ತಾರಪೋ
ಕುಂತರೆ ನಿಂತರೆ ಕರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬಿಸಿಲಿಗೆ ನಿಂತಿದೆ ಗಿಡ ಮರ
ಕುಡಿಯೋ ನೀರಿಗು ಬರ
ಅನ್ನ ಕೇಳಿದರೆ ತಗೋ ಅಂತಾರೆ
ಕಂಪೋಸ್ಟ್ ಗೊಬ್ಬರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಹೊಟ್ಟೆಯೊಳಗೆ ಉಪ್ಪು ಖಾರ
ರೋಡಿನ ಮೇಲೆ ದಾಮರ
ಹಾಗಿದ್ರೂನೂ ಕೊಡಬೇಕೇನು
ಸರಕಾರಕ್ಕೆ ಸಹಕಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬೇಡ ನಮಗೆ ಸರಕಾರ
ಕೊಡಿ ಅನ್ನ ಕೋಳಿ ಸಾರ
ಕೊಡೀಂದ್ರೂನು ಕೊಡ್ತಾರಾ
ಬಳೀರಿವರ ಮುಕಕ್ಕೆ ತಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈತ ಸಂದರ್ಶನ
Next post ಬೊಕ್ಕ ತಲೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…