Home / ಕವನ / ಕವಿತೆ / ಮುಗಿಯಲಾರದ ದುಃಖಕೆ

ಮುಗಿಯಲಾರದ ದುಃಖಕೆ

ಕಣ್ಣ ಬೆಳಕೇ
ಒಲವಿನ ಉಸಿರೇ
ಜೀವದ ಜೀವವೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ

ಉಸಿರಿಗೆ ಉಸಿರಾದವಳೇ
ಬೆಳಕಿಗೆ ಬೆಳಕಾದವಳೇ
ಕಣ್ಣ ಮುಂದಿನ ಬೆಳಕೆ
ದಾರಿ ಮುಂದಿನ ಕನಸೇ
ನಿನಗಾಗಿ ಬರೆಯುವೆ
ಎಂದೆಂದೂ ಮುಗಿಯದ ಕತೆಯ

ಅಂಗೈ ಬೊಗಸೆಯಲ್ಲಿ ಮುಖವಿಟ್ಟು ಮಳೆ ಸುರಿಸಿದವಳೆ
ಅಂಗೈಯ ಅಳಿಸದ ರೇಖೆಗಳಲ್ಲಿ ನದಿಯಾದವಳೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಕಾವ್ಯವ

ಕಣ್ಣಲ್ಲಿ ಕಣ್ಣಿಟ್ಟು ಬದುಕ ಹೊಸೆದವಳೇ
ಬಂಧವಿರದ ಬಂಧಕೆ ಧ್ವನಿಯಾದವಳೇ
ಮುಗಿಯಲಾರದ ದುಃಖಕೆ
ಸಾಂತ್ವಾನ ಹೇಳಿದವಳೆ

ಕಣ್ಣೀರ ಕತೆಗೆ ಕಣ್ಣೀರ ಬೆಸೆದು
ಜೀವ ಜೀವಕೆ ಉದ್ದೀಪನವಾದವಳೇ
ಒಲವ ಬದುಕ ಪಯಣದಲ್ಲಿ
ಜೊತೆಯಾಗಿ ನಿಂತವಳೇ

ಅವಮಾನಗಳ ಹಾಸಿಹೊದ್ದ
ಬದುಕಲಿ, ಪ್ರೀತಿಯ ಹಠವ ಜೀವಧಾತುವಾಗಿ ಬೆಸೆದವಳೇ
ನಿನಗಾಗಿ ಬರೆಯುವೆ
ಮನುಜ ಬದುಕಿನ ಸೆಣಸಾಟದ ಪತ್ರವ

ಮುಗಿಯದ ಅಳಿಯದ ಬದುಕ
ಅರ್ಥಕೆ ವ್ಯಾಖ್ಯಾನವಾದವಳೇ
ನಿನಗಾಗಿ ಬದುಕಿ ಬರೆಯುವೆ
ಎಂದೆಂದೂ ಅಂತ್ಯವಿಲ್ಲದ
ಒಲವಿನೋಲೆ ಬರೆಯುವೆ

ಭೂಮಿಯ ಎದೆಯೊಳಗಿನೊಲವ ಬಿತ್ತಿ
ಒಲವು ಒಲವ ಸಂತೈಸಿದಂತೆ
ಆಕಾಶದಲ್ಲಿ ಹೂ ಅರಳಿದ ಬಗ್ಗೆ
ಪತ್ರವೊಂದ ಬರೆವೆ ನಿನಗಾಗಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...