ಉದ್ದಕ್ಕ ಅಗಲಕ್ಕ ಲಕಲಕ್ಕ ಚೊಕಚೊಕ್ಕ

ಉದ್ದ ಅಗಲಕ್ಕ ಲಕಲಕ್ಕ ಚೊಕಚೊಕ್ಕ
ನಿನಕಂಡು ಆಗ್ಯಾರೆ ಹುಂಚಿಪಕ್ಕ
ಪಾತರಗಿ ಪಕ್ಕಕ್ಕ ಲಕ್ಕಕ್ಕ ಲಡಿಯಕ್ಕ
ಚಕಚಕ್ಕ ತೂಯ್ಯಾರೆ ರೊಕ್ಕಪಕ್ಕ ||೧||

ನಿನ ಸೆರಗು ಗಗನಕ್ಕ ನಿನ ತುರುಬು ಸಾಗರಕ
ನೀಬಂದಿ ಓಗರಕ ನಗಿಮಾರೆ
ಕಣ್ಣಾಗ ಕಂಡೋರು ಕಣ್ಣಾಗ ಸತ್ತಾರೆ
ನೀಬಂದು ಮುತ್ತಿಟ್ಟಿ ಸುವನಾರೆ ||೨||

ನಿನಕಂಡು ಕುಣಿಯಲ್ಲಿ ನವಿಲಾಗಿ ಎದ್ದಾವೆ
ಹೆಣವೆಲ್ಲ ಹೂಹಣ್ಣು ತೂರ್‍ಯಾವೆ
ಬಾಬಾರೆ ಅಂಗಣಕ ತಾತಾರೆ ರಂಗಣಕ
ಕಲ್ಲಾಗ ಕಾರಂಜಿ ಹಾರ್‍ಯಾವೆ ||೩||

ಹಿತ್ತಲದ ಕಸಬರಗಿ ಕುತನೀಯ ಗಾದ್ಯಾತ
ರತುನದ ಸರವಾತ ಕಾಕುಳ್ಳಾ
ಬಿಡುಬಿಟ್ಟ ಬೀಕಲಾ ಪರದೇಶಿ ಕೋಕಿಲಾ
ಹಾಕೀತ ಹೊಸಸಿಳ್ಳಾ ನಿನಕಂಡಾ ||೪||

ಹೆಂಥ ಸುಂದರಿ ಹೆಣ್ಣಾ ಥಂಡ್ಥಂಡಿ ಈ ಕಣ್ಣಾ
ಮುತ್ತಾಗಿ ನೆತಾರಾ ಹೆಣದಾಳೆ
ಅತ್ತಾರು ಅರವತ್ತು ಉತ್ತಮರು ಸತ್ತಾರೆ
ಸುತ್ತೇಳು ಕೋಟಿಯ ಆಳ್ಯಾಳೆ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಶೈಲಿ
Next post ಟ್ಯೂಷನ್

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys