Home / ಕವನ / ಕವಿತೆ / ಕಣ್ಣಾಗ ನಗಿ ನಗಿ

ಕಣ್ಣಾಗ ನಗಿ ನಗಿ

ಕಣ್ಣಾಗ ನಗಿ ನಗಿ ಹೊಟ್ಯಾಗ ಹೊಗಿ ಹೊಗಿ
ಏನ್ಕಂಡು ಏನಾತು ನನಬಾಳೆ ||ಪಲ್ಲ||

ನೀರ್‍ಲಣ್ಣು ಮರತುಂಬ ಪ್ಯಾರ್‍ಲಣ್ಣು ಗಿಡತುಂಬ
ಹರದರ ಭುಸು ಭುಸು ಭುಸ್ಸಣ್ಣಾ
ಪೈಪಾಟ ಥೈಥಾಟ ಮೈಮಾಟ ಸೈಸಾಟ
ಮುಟ್ಟಂಬ್ಲಿ ಮುಚ್ಚಂಬ್ಲಿ ಮುಳ್ಳಣ್ಣಾ ||೧||

ಗಡಗಡ ಗಮ್ಮತ್ತು ನಡನಡ ಮಸಲತ್ತು
ಜಡಿಜಡಿ ಕ್ಯಾದಿಗಿ ಹೊಡಿಯಣ್ಣಾ
ಎದಿಗುಂಡ ಮನಗಂಡ ಬಿಂಗ್ರೇನ ಸಿಂಗ್ರೇನ
ಸುತ್ತಾರ ಸೆಳುವೇನ ಸಂಗಣ್ಣಾ ||೨||

ಪಾತರಗಿತ್ಯಾಗ ತಂಬಾಕು ತುಂಬ್ಯಾರ
ಹೂವಿಗಿ ಕುಡಿಸ್ಯಾರ ಹುಳಿಹೆಂಡಾ
ಕೂಸೀನ ಬಾಯಿಗೆ ಭುಸುಭುಸು ಬೀಡೆಣ್ಣಾ
ಹಣಕೊಂದು ಮಣಕುಂಡಿ ಹೆಣ್ಣಣ್ಣಾ ||೩||

ತುಟಿತುಂಬ ತಂಬೂರಿ ಎದಿತುಂಬ ನಗಾರಿ
ನೌಬತ್ತು ನಾರಂಗಿ ನಾರಿಯಣ್ಣಾ
ಬಿಚಬಿಲ್ಲಿ ಬಸವಣ್ಣಾ ಹುಚಬಿಲ್ಲಿ ಹನುಮಣ್ಣಾ
ಅಡಚಾಪಿ ಗುಡಚಾಪಿ ಕಟ್ಟಣ್ಣಾ ||೪||

ಮುಗಲಾಗ ಪಲ್ಲಕ್ಕಿ ಜಡಿಯಾಗ ಅವಲಕ್ಕಿ
ಹಕ್ಯಾಗಿ ಹಾರಣ್ಣಾ ಮ್ಯಾಲಮ್ಯಾಲ
ಎತ್ತಾರ ಬಿತ್ತಾರ ಉತ್ತಮರ ಹತ್ತಾರ
ಉತ್ತತ್ತಿ ಗೊನಿಯಣ್ಣಾ ಮ್ಯಾಲಮ್ಯಾಲ ||೫||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...