ಭಜನಿ ಕೇಳಿದಿಯೇನ

ಭಜನಿ ಕೇಳಿದಿಯೇನ ನನಸಜನಿ
ರಜನಿ ಹೂಳಿದಿಯೇನ ||ಪಲ್ಲ||

ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ
ಜಡಿತುಂಬ ಕ್ಯಾದಿಗಿ ಹೆಣೆದಾನ
ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ
ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧||

ಎಂಥ ಚಂದನ ಭಜನಿ ಸಂಗಮ ಶಿವಭಜನಿ
ಬಾಲ್ಯಾರ ಬಡಿವಾರ ನೋಡ್ಯಾನ
ಪಟ್ಟದ ಗುರುವಲ್ಲ ಮಠದಂಗ್ಡಿ ಸ್ವಾಮೆಲ್ಲ
ಚಲುವೇರ ಎದಿತುಂಬ ಮಲಗ್ಯಾನ ||೨||

ಯೋಗಾಗ್ನಿ ಕೈತುಂಬ ಜ್ಞಾನಾಗ್ನಿ ಕಣ್ತುಂಬ
ಗುಳಬುಟ್ಟಿ ತಿಪ್ಪೀಯ ಸುಟ್ಟಾನ
ದಕ್ಷಿಣಿ ಗುರುವಲ್ಲ ಯಕ್ಷಿಣಿ ಸ್ವಾಮೆಲ್ಲ
ಮಂಗ್ಯಾಗ ಚಳ್ಹಣ್ಣು ತಿನಿಸ್ಯಾನ ||೩||

ಜನುಮವಿಲ್ಲದ ಸೋಮ ಹನುಮನಿಲ್ಲದ ರಾಮ
ಹುಡಿಗೇರ ತುಡುಗೇರ ಮಾಡ್ಯಾನ
ಪಲ್ಲಕ್ಕಿ ಗುರುವಲ್ಲ ಚೌರಿಚಾಮರವೊಲ್ಲ
ಪರಹೆಂಡ್ರ ಮಠದಾಗ ಕದ್ದಾನ ||೪||
*****
ಭಜನಿ = ಭಗವಂತನ ವಾಣಿ
ಸಜನಿ = ಪ್ರಿಯತಮೆ, ಆತ್ಮ
ಗುರುರಾಯ = ಪ್ರಿಯತಮ, ಪರಮಾತ್ಮ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ ವಿವಾಹ
Next post ನೆಕ್ಲೇಸ್

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…