Home / ಕವನ / ಕವಿತೆ / ಭಜನಿ ಕೇಳಿದಿಯೇನ

ಭಜನಿ ಕೇಳಿದಿಯೇನ

ಭಜನಿ ಕೇಳಿದಿಯೇನ ನನಸಜನಿ
ರಜನಿ ಹೂಳಿದಿಯೇನ ||ಪಲ್ಲ||

ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ
ಜಡಿತುಂಬ ಕ್ಯಾದಿಗಿ ಹೆಣೆದಾನ
ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ
ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧||

ಎಂಥ ಚಂದನ ಭಜನಿ ಸಂಗಮ ಶಿವಭಜನಿ
ಬಾಲ್ಯಾರ ಬಡಿವಾರ ನೋಡ್ಯಾನ
ಪಟ್ಟದ ಗುರುವಲ್ಲ ಮಠದಂಗ್ಡಿ ಸ್ವಾಮೆಲ್ಲ
ಚಲುವೇರ ಎದಿತುಂಬ ಮಲಗ್ಯಾನ ||೨||

ಯೋಗಾಗ್ನಿ ಕೈತುಂಬ ಜ್ಞಾನಾಗ್ನಿ ಕಣ್ತುಂಬ
ಗುಳಬುಟ್ಟಿ ತಿಪ್ಪೀಯ ಸುಟ್ಟಾನ
ದಕ್ಷಿಣಿ ಗುರುವಲ್ಲ ಯಕ್ಷಿಣಿ ಸ್ವಾಮೆಲ್ಲ
ಮಂಗ್ಯಾಗ ಚಳ್ಹಣ್ಣು ತಿನಿಸ್ಯಾನ ||೩||

ಜನುಮವಿಲ್ಲದ ಸೋಮ ಹನುಮನಿಲ್ಲದ ರಾಮ
ಹುಡಿಗೇರ ತುಡುಗೇರ ಮಾಡ್ಯಾನ
ಪಲ್ಲಕ್ಕಿ ಗುರುವಲ್ಲ ಚೌರಿಚಾಮರವೊಲ್ಲ
ಪರಹೆಂಡ್ರ ಮಠದಾಗ ಕದ್ದಾನ ||೪||
*****
ಭಜನಿ = ಭಗವಂತನ ವಾಣಿ
ಸಜನಿ = ಪ್ರಿಯತಮೆ, ಆತ್ಮ
ಗುರುರಾಯ = ಪ್ರಿಯತಮ, ಪರಮಾತ್ಮ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...