ಏನ್‍ಚಂದ ಏನ್‍ಚಂದ ನಮ್ಮೂರ ಕಾಲೇಜು

ಏನ್ಚಂದ ಏನ್ಚಂದ ನಮ್ಮೂರ ಕಾಲೇಜು
ಹನುಮಂತ ದೇವ್ರಾಂಗ ಮುದ್ದು ಯವ್ವಾ
ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ
ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧||

ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ
ಕುಂತಾರ ಹುಡುಗೋರು ಗೇಟಿನ್ಯಾಗ
ಥೇಟ್ ಥೇಟ ಕಾಮಣ್ರು ಒಳಗೆಲ್ಲಾ ಜೋಗಣ್ರು
ತಲಿಯಂದ್ರ ಸಿಗರೇಟು ಪ್ಯಾಕುಯವ್ವ ||೨||

ಕ್ಲಾಸೀಗೆ ಚಕ್ಕರು ಕ್ಲಬ್ಬೀಗೆ ಹಾಜರು
ನನಕಂಡು ಕ್ಯಾಕೀಯ ಹಾಕ್ಯಾರವ್ವಾ
ಏ ಹುಡಿಗಿ ಅಂತಾರ ನನವಯು ನಲವಯ್ಸು
ಹರೆಯದ ಹುಡಿಗೇರ್‍ಗೆ ಹ್ಯಾಂಗೇಯವ್ವಾ ||೩||

ಕಲಸೋರು ಮಾಜಾಣ್ರು ಮಿಂಚಕ್ಕಿ ಕಾಜಾಣ್ರು
ಸಂಜೀಕ ಇಸಪೇಟು ಆಡ್ಯಾರವ್ವಾ
ಹಿಂಗಾದ್ರ ಹೆಂಗವ್ವ ನನಮಕ್ಳ ಗತಿಯವ್ವ
ನನಗೂನು ಡಾರ್‍ಲಿಂಗು ಅಂತಾರವ್ವಾ ||೪||

ನಮ್ಮೋಣಿ ಕಲ್ಲವ್ವ ಕಾಲೇಜು ಕಲಿತಾಳ
ಮಂಗ್ಯಾನ ಚಡ್ಡೀಯ ಹಾಕ್ಯಾಳವ್ವ
ಸೋಗ್ಲಾಡಿ ಸುಬ್ಬವ್ವ ತಲಿಯಾಗ ಸೆಗಣೆವ್ವ
ಓದಂದ್ರ ಕುಂಡೀಯ ತಿರುವ್ಯಾಳವ್ವ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯ ಬಾಳು
Next post ದಳ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…