ಮುಂಜಾವದಲ್ಲಿ

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ
ಮಲಗಿದ್ದ ನಗರಗಳು,
ರಕ್ಷಣೆಗೆ ಗಮನಕೊಡದೆ
ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು.
ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು
ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ :
ಕಛೇರಿಯ ಗೋಪುರದಲ್ಲಿ ಮೂರ್ಛೆ ಬಿದ್ದ ಬಾವುಟದ ಮಡಿಕೆಗಳಲ್ಲಿ,
ಮರಗಳಲ್ಲಿ ಎಚ್ಚರವಾಗುತ್ತಿರುವ ಹಕ್ಕಿ ಸದ್ದಿನಲ್ಲಿ
ಪಾರ್ಕಿನ ಹಾಸುಗಲ್ಲಿನ ಮೇಲೆ
ನಿಧಾನ ಮೈ ಮುರಿಯುತ್ತಿರುವ ಬೆಕ್ಕಿನ ಕಣ್ಣಲ್ಲಿ,
ಅಂಗಡಿ ಕಿಟಕಿಗಳ ಮೇಲೆ
ನಾಚಿಕೊಂಡು ಇಷ್ಟಿಷ್ಟೆ ಪ್ರತಿಫಲಿಸುವ ಬೆಳಕು
ಸದಾ ಪ್ರಥಮ ಪ್ರವೇಶದ ನಟ.
ವಾರ್ಸಾದ ಹೊಗೆಯಾಡುವ ಆವೇಶದಂಥ
ಹಬೆಯಾಡುವ ಉದ್ಯಾನ,
ರಾತ್ರಿಯ ಮತ್ತಿನ್ನೂ ಇಳಿಯದ ಕುಡುಕರು
ಅಲ್ಲೊಬ್ಬರು ಇಲ್ಲೊಬ್ಬರು.
ಕಟುಕರಂಗಡಿಯ ಮುಂದೆ
ಇನ್ನೂ ಬಂದಿರದ ವ್ಯಾನು.
ಮುಂಜಾವಿನ ನಗರಕ್ಕೆ ಹೆಸರಿಲ್ಲ.
ಯಾರಿಗೂ ಸೇರಿದ್ದಲ್ಲ.
ಹೆಚ್ಚುವ ಬೆಳಕಲ್ಲಿ
ನಕ್ಷತ್ರಗಳು ಮಂಕಾಗುತ್ತಿರುವಾಗ
ಹೆಚ್ಚುತ್ತಿರುವ ರೈಲಿನ ವೇಗದೊಳಗೆ
ಸೇರಿಹೋದ ನನಗೂ ಹೆಸರಿಲ್ಲ.
*****
ಮೂಲ: ಆಡಂ ಝಗಯೇವ್ಸ್‍ಕಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಕ್ಷ್ಮೀಶ ಕವಿ
Next post ಮಗುವನ್ನು ಹುಡುಕಿಕೊಡಿ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…