Home / ಕವನ / ಅನುವಾದ / ಮುಂಜಾವದಲ್ಲಿ

ಮುಂಜಾವದಲ್ಲಿ

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ
ಮಲಗಿದ್ದ ನಗರಗಳು,
ರಕ್ಷಣೆಗೆ ಗಮನಕೊಡದೆ
ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು.
ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು
ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ :
ಕಛೇರಿಯ ಗೋಪುರದಲ್ಲಿ ಮೂರ್ಛೆ ಬಿದ್ದ ಬಾವುಟದ ಮಡಿಕೆಗಳಲ್ಲಿ,
ಮರಗಳಲ್ಲಿ ಎಚ್ಚರವಾಗುತ್ತಿರುವ ಹಕ್ಕಿ ಸದ್ದಿನಲ್ಲಿ
ಪಾರ್ಕಿನ ಹಾಸುಗಲ್ಲಿನ ಮೇಲೆ
ನಿಧಾನ ಮೈ ಮುರಿಯುತ್ತಿರುವ ಬೆಕ್ಕಿನ ಕಣ್ಣಲ್ಲಿ,
ಅಂಗಡಿ ಕಿಟಕಿಗಳ ಮೇಲೆ
ನಾಚಿಕೊಂಡು ಇಷ್ಟಿಷ್ಟೆ ಪ್ರತಿಫಲಿಸುವ ಬೆಳಕು
ಸದಾ ಪ್ರಥಮ ಪ್ರವೇಶದ ನಟ.
ವಾರ್ಸಾದ ಹೊಗೆಯಾಡುವ ಆವೇಶದಂಥ
ಹಬೆಯಾಡುವ ಉದ್ಯಾನ,
ರಾತ್ರಿಯ ಮತ್ತಿನ್ನೂ ಇಳಿಯದ ಕುಡುಕರು
ಅಲ್ಲೊಬ್ಬರು ಇಲ್ಲೊಬ್ಬರು.
ಕಟುಕರಂಗಡಿಯ ಮುಂದೆ
ಇನ್ನೂ ಬಂದಿರದ ವ್ಯಾನು.
ಮುಂಜಾವಿನ ನಗರಕ್ಕೆ ಹೆಸರಿಲ್ಲ.
ಯಾರಿಗೂ ಸೇರಿದ್ದಲ್ಲ.
ಹೆಚ್ಚುವ ಬೆಳಕಲ್ಲಿ
ನಕ್ಷತ್ರಗಳು ಮಂಕಾಗುತ್ತಿರುವಾಗ
ಹೆಚ್ಚುತ್ತಿರುವ ರೈಲಿನ ವೇಗದೊಳಗೆ
ಸೇರಿಹೋದ ನನಗೂ ಹೆಸರಿಲ್ಲ.
*****
ಮೂಲ: ಆಡಂ ಝಗಯೇವ್ಸ್‍ಕಿ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...