ಮುಂಜಾವದಲ್ಲಿ

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ
ಮಲಗಿದ್ದ ನಗರಗಳು,
ರಕ್ಷಣೆಗೆ ಗಮನಕೊಡದೆ
ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು.
ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು
ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ :
ಕಛೇರಿಯ ಗೋಪುರದಲ್ಲಿ ಮೂರ್ಛೆ ಬಿದ್ದ ಬಾವುಟದ ಮಡಿಕೆಗಳಲ್ಲಿ,
ಮರಗಳಲ್ಲಿ ಎಚ್ಚರವಾಗುತ್ತಿರುವ ಹಕ್ಕಿ ಸದ್ದಿನಲ್ಲಿ
ಪಾರ್ಕಿನ ಹಾಸುಗಲ್ಲಿನ ಮೇಲೆ
ನಿಧಾನ ಮೈ ಮುರಿಯುತ್ತಿರುವ ಬೆಕ್ಕಿನ ಕಣ್ಣಲ್ಲಿ,
ಅಂಗಡಿ ಕಿಟಕಿಗಳ ಮೇಲೆ
ನಾಚಿಕೊಂಡು ಇಷ್ಟಿಷ್ಟೆ ಪ್ರತಿಫಲಿಸುವ ಬೆಳಕು
ಸದಾ ಪ್ರಥಮ ಪ್ರವೇಶದ ನಟ.
ವಾರ್ಸಾದ ಹೊಗೆಯಾಡುವ ಆವೇಶದಂಥ
ಹಬೆಯಾಡುವ ಉದ್ಯಾನ,
ರಾತ್ರಿಯ ಮತ್ತಿನ್ನೂ ಇಳಿಯದ ಕುಡುಕರು
ಅಲ್ಲೊಬ್ಬರು ಇಲ್ಲೊಬ್ಬರು.
ಕಟುಕರಂಗಡಿಯ ಮುಂದೆ
ಇನ್ನೂ ಬಂದಿರದ ವ್ಯಾನು.
ಮುಂಜಾವಿನ ನಗರಕ್ಕೆ ಹೆಸರಿಲ್ಲ.
ಯಾರಿಗೂ ಸೇರಿದ್ದಲ್ಲ.
ಹೆಚ್ಚುವ ಬೆಳಕಲ್ಲಿ
ನಕ್ಷತ್ರಗಳು ಮಂಕಾಗುತ್ತಿರುವಾಗ
ಹೆಚ್ಚುತ್ತಿರುವ ರೈಲಿನ ವೇಗದೊಳಗೆ
ಸೇರಿಹೋದ ನನಗೂ ಹೆಸರಿಲ್ಲ.
*****
ಮೂಲ: ಆಡಂ ಝಗಯೇವ್ಸ್‍ಕಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಕ್ಷ್ಮೀಶ ಕವಿ
Next post ಮಗುವನ್ನು ಹುಡುಕಿಕೊಡಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…