Home / ಕವನ / ಕವಿತೆ / ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ
ಮುಟ್ಟಬೇಕೆನ್ನಿಸುವ
ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ
ಅಕ್ಷರಗಳು
ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ.

ಆತನ ತುಟಿಗಳ ಮೇಲೆ
ಬೆರಳಾಡಿಸಿದಾಗೆಲ್ಲ
ಅನೂಹ್ಯವಾದ ಬೆಸುಗೆ
ಕರುಳ ಕೊಂಡಿಯಂತೆ
ಒಳಗೊಳಗೆ ಬಲಿಯುತ್ತದೆ.
ನನ್ನೊಳಗಿನ ಆತ್ಮದ ಕುರುಡು
ಕರಗಿ ಹೋಗಲೆಂದು
ಆತನ ಪತ್ರಕ್ಕೆ ಮಾತ್ರ ರುಜು ಹಾಕಿದೆ.

ಸತ್ಯಕ್ಕೂ ಸುಳ್ಳಿಗೂ ನಡುವಿನ ಪಟ
ಕಳೆದು ಕಪ್ಪುಕಲೆಗಳು
ಎದ್ದುಬಿದ್ದು ಹೊರಳಾಡಿ
ಶುದ್ಧ ಮಣ್ಣಿನೆದೆಗಳು ಬರಸೆಳೆದು
ತಬ್ಬಿಕೊಂಡವು.
ಲೋಕದ ಜಂಜಾಟಗಳಿಗೆ
ಆರ್ತನಾದಗೈವ ಅಕ್ಷರಗಳಿಲ್ಲ ಈಗ

ನೀಲಾಕಾಶದ ನಿರಭ್ರತೆಯ
ಹೊಟ್ಟೆ ಸೀಳಿ
ಮಿಂಚಿನ ಕಣವೊಂದು ಆಳಕ್ಕೆ
ಗರ್ಭದೊಳಗೆ ಹೊಕ್ಕಿದ್ದೇ ತಡ,
ನೆಲ ಮುಗಿಲನ್ನು
ಮೋಹಿಸುತ್ತಾ ಎದೆತೆರೆದು ಕಣ್ಣರಳಿಸಿತು.
ಈ ದಾರಿಯ ಸೊಬಗಿನಲ್ಲಿ
ಕಣ್ಸೆಳೆಯುವ
ಬಿಸಿಲು-ಬೆಳದಿಂಗಳು, ಹಸಿರು-ಕೆಸರು
ಎಲ್ಲವನ್ನೂ ಇನ್ನಿಲ್ಲದಂತೆ ಪ್ರೀತಿಸುತ್ತಾ,
ಎರಡೂ ತೆಕ್ಕೆಗಳಲ್ಲಿ
ಬರಸೆಳೆದುಕೊಂಡು ಮುದ್ದಿಸುತ್ತಿದ್ದೇನೆ.

ಬಿಚ್ಚು ಮನಸ್ಸಿನಂತೆ
ದೇಹದ ಬಿಚ್ಚು ಕೂಡಾ ಆಪ್ತವಾದಂತೆ
ಅವನೂ ನಾನು ಕ್ಷಣಕ್ಷಣವೂ ಬಿಡದೇ
ಆವರಿಸಿಕೊಳ್ಳುತ್ತಲೇ,
ನೆಲದ ಹಸಿ ಚಿಗುರನ್ನು
ಜಗವೊಪ್ಪುವ ಪದಗಳಿಂದ ಹಿಡಿದು
ಮತ್ತದನ್ನು ಸುರವಿ ಹರವುದನು ಕಲಿತಿದ್ದೇನೆ.

ಆತನ ಕೈಸಂದಿನೊಳಗೆ
ಬೆರಳು ತೂರಿಸಿಕೊಂಡೇ
ದೇಹ ಮೀರಿದ ಪ್ರೇಮದ
ಠೇವಣಿ ಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ.
ಈಗ ನಾನು ಅವನೂ ಕೂಡಿಯೇ
ಮನೆ ಕಟ್ಟುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....