Home / ಕವನ / ಕವಿತೆ / ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ
ಮುಟ್ಟಬೇಕೆನ್ನಿಸುವ
ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ
ಅಕ್ಷರಗಳು
ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ.

ಆತನ ತುಟಿಗಳ ಮೇಲೆ
ಬೆರಳಾಡಿಸಿದಾಗೆಲ್ಲ
ಅನೂಹ್ಯವಾದ ಬೆಸುಗೆ
ಕರುಳ ಕೊಂಡಿಯಂತೆ
ಒಳಗೊಳಗೆ ಬಲಿಯುತ್ತದೆ.
ನನ್ನೊಳಗಿನ ಆತ್ಮದ ಕುರುಡು
ಕರಗಿ ಹೋಗಲೆಂದು
ಆತನ ಪತ್ರಕ್ಕೆ ಮಾತ್ರ ರುಜು ಹಾಕಿದೆ.

ಸತ್ಯಕ್ಕೂ ಸುಳ್ಳಿಗೂ ನಡುವಿನ ಪಟ
ಕಳೆದು ಕಪ್ಪುಕಲೆಗಳು
ಎದ್ದುಬಿದ್ದು ಹೊರಳಾಡಿ
ಶುದ್ಧ ಮಣ್ಣಿನೆದೆಗಳು ಬರಸೆಳೆದು
ತಬ್ಬಿಕೊಂಡವು.
ಲೋಕದ ಜಂಜಾಟಗಳಿಗೆ
ಆರ್ತನಾದಗೈವ ಅಕ್ಷರಗಳಿಲ್ಲ ಈಗ

ನೀಲಾಕಾಶದ ನಿರಭ್ರತೆಯ
ಹೊಟ್ಟೆ ಸೀಳಿ
ಮಿಂಚಿನ ಕಣವೊಂದು ಆಳಕ್ಕೆ
ಗರ್ಭದೊಳಗೆ ಹೊಕ್ಕಿದ್ದೇ ತಡ,
ನೆಲ ಮುಗಿಲನ್ನು
ಮೋಹಿಸುತ್ತಾ ಎದೆತೆರೆದು ಕಣ್ಣರಳಿಸಿತು.
ಈ ದಾರಿಯ ಸೊಬಗಿನಲ್ಲಿ
ಕಣ್ಸೆಳೆಯುವ
ಬಿಸಿಲು-ಬೆಳದಿಂಗಳು, ಹಸಿರು-ಕೆಸರು
ಎಲ್ಲವನ್ನೂ ಇನ್ನಿಲ್ಲದಂತೆ ಪ್ರೀತಿಸುತ್ತಾ,
ಎರಡೂ ತೆಕ್ಕೆಗಳಲ್ಲಿ
ಬರಸೆಳೆದುಕೊಂಡು ಮುದ್ದಿಸುತ್ತಿದ್ದೇನೆ.

ಬಿಚ್ಚು ಮನಸ್ಸಿನಂತೆ
ದೇಹದ ಬಿಚ್ಚು ಕೂಡಾ ಆಪ್ತವಾದಂತೆ
ಅವನೂ ನಾನು ಕ್ಷಣಕ್ಷಣವೂ ಬಿಡದೇ
ಆವರಿಸಿಕೊಳ್ಳುತ್ತಲೇ,
ನೆಲದ ಹಸಿ ಚಿಗುರನ್ನು
ಜಗವೊಪ್ಪುವ ಪದಗಳಿಂದ ಹಿಡಿದು
ಮತ್ತದನ್ನು ಸುರವಿ ಹರವುದನು ಕಲಿತಿದ್ದೇನೆ.

ಆತನ ಕೈಸಂದಿನೊಳಗೆ
ಬೆರಳು ತೂರಿಸಿಕೊಂಡೇ
ದೇಹ ಮೀರಿದ ಪ್ರೇಮದ
ಠೇವಣಿ ಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ.
ಈಗ ನಾನು ಅವನೂ ಕೂಡಿಯೇ
ಮನೆ ಕಟ್ಟುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...