Home / ಕವನ / ಕವಿತೆ / ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ
ಮುಟ್ಟಬೇಕೆನ್ನಿಸುವ
ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ
ಅಕ್ಷರಗಳು
ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ.

ಆತನ ತುಟಿಗಳ ಮೇಲೆ
ಬೆರಳಾಡಿಸಿದಾಗೆಲ್ಲ
ಅನೂಹ್ಯವಾದ ಬೆಸುಗೆ
ಕರುಳ ಕೊಂಡಿಯಂತೆ
ಒಳಗೊಳಗೆ ಬಲಿಯುತ್ತದೆ.
ನನ್ನೊಳಗಿನ ಆತ್ಮದ ಕುರುಡು
ಕರಗಿ ಹೋಗಲೆಂದು
ಆತನ ಪತ್ರಕ್ಕೆ ಮಾತ್ರ ರುಜು ಹಾಕಿದೆ.

ಸತ್ಯಕ್ಕೂ ಸುಳ್ಳಿಗೂ ನಡುವಿನ ಪಟ
ಕಳೆದು ಕಪ್ಪುಕಲೆಗಳು
ಎದ್ದುಬಿದ್ದು ಹೊರಳಾಡಿ
ಶುದ್ಧ ಮಣ್ಣಿನೆದೆಗಳು ಬರಸೆಳೆದು
ತಬ್ಬಿಕೊಂಡವು.
ಲೋಕದ ಜಂಜಾಟಗಳಿಗೆ
ಆರ್ತನಾದಗೈವ ಅಕ್ಷರಗಳಿಲ್ಲ ಈಗ

ನೀಲಾಕಾಶದ ನಿರಭ್ರತೆಯ
ಹೊಟ್ಟೆ ಸೀಳಿ
ಮಿಂಚಿನ ಕಣವೊಂದು ಆಳಕ್ಕೆ
ಗರ್ಭದೊಳಗೆ ಹೊಕ್ಕಿದ್ದೇ ತಡ,
ನೆಲ ಮುಗಿಲನ್ನು
ಮೋಹಿಸುತ್ತಾ ಎದೆತೆರೆದು ಕಣ್ಣರಳಿಸಿತು.
ಈ ದಾರಿಯ ಸೊಬಗಿನಲ್ಲಿ
ಕಣ್ಸೆಳೆಯುವ
ಬಿಸಿಲು-ಬೆಳದಿಂಗಳು, ಹಸಿರು-ಕೆಸರು
ಎಲ್ಲವನ್ನೂ ಇನ್ನಿಲ್ಲದಂತೆ ಪ್ರೀತಿಸುತ್ತಾ,
ಎರಡೂ ತೆಕ್ಕೆಗಳಲ್ಲಿ
ಬರಸೆಳೆದುಕೊಂಡು ಮುದ್ದಿಸುತ್ತಿದ್ದೇನೆ.

ಬಿಚ್ಚು ಮನಸ್ಸಿನಂತೆ
ದೇಹದ ಬಿಚ್ಚು ಕೂಡಾ ಆಪ್ತವಾದಂತೆ
ಅವನೂ ನಾನು ಕ್ಷಣಕ್ಷಣವೂ ಬಿಡದೇ
ಆವರಿಸಿಕೊಳ್ಳುತ್ತಲೇ,
ನೆಲದ ಹಸಿ ಚಿಗುರನ್ನು
ಜಗವೊಪ್ಪುವ ಪದಗಳಿಂದ ಹಿಡಿದು
ಮತ್ತದನ್ನು ಸುರವಿ ಹರವುದನು ಕಲಿತಿದ್ದೇನೆ.

ಆತನ ಕೈಸಂದಿನೊಳಗೆ
ಬೆರಳು ತೂರಿಸಿಕೊಂಡೇ
ದೇಹ ಮೀರಿದ ಪ್ರೇಮದ
ಠೇವಣಿ ಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ.
ಈಗ ನಾನು ಅವನೂ ಕೂಡಿಯೇ
ಮನೆ ಕಟ್ಟುತ್ತಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...