ಕನ್ನಡ ಪ್ರೀತಿಸಿ

ಬೇಡ ನಿಮ್ಮ ತನು ಧನ
ನೀಡಿ ತುಸುವೆ ಮನ
ಆಡಿ ಕನ್ನಡ, ಓದಿ ಕನ್ನಡ, ಬಳಸಿ ಕನ್ನಡ
ಅರಿವ ದೀವಿಗೆಯಾಗುವಿರಿ.

ದರ್ಶಿಸಿ
ಕನ್ನಡ ಸುಂದರ ನೆಲ, ಜನ
ಬದುಕು ಉಪಯುಕ್ತವಾಯಿತು
ಎನಿಸದಿರೆ ಕೇಳಿ !

ತಿಳಿಯಿರಿ
ಕನ್ನಡ ಇತಿಹಾಸ, ಪರಂಪರೆ
ಮೌಲ್ಯಗಳ ಖಜಾನೆ
ಕೀಲಿ ಕೈ ಪಡೆಯಿರಿ.

ಮನನ ಮಾಡಿ
ಕನ್ನಡ ಕಲೆ, ಸಾಹಿತ್ಯ, ಸಂತರು, ದರ್ಶಕರ
ಸಲೀಸಾಗಿ
ಸಾರ್ಥಕ ಬದುಕಿನ ದಾರಿ ತೆರೆವುದು.

ಪ್ರೀತಿಸಿ
ಕನ್ನಡ ಜೀವ ದೇವ ಜನಪದರ
ಸತ್ಯ, ಶಿವ, ಸೌಂದರ್ಯ
ನೆಲೆ, ಮೂಲ ಕಾಣುವಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನುಗೋಲು
Next post ಎಲ್ಲವೆಮಗಪ್ಪಂತಿರಬೇಕೆಂದು ಹೋರಾಡಿದರೆ ಎಲ್ಲಿರ್‍ಪುದಾರೋಗ್ಯ?

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…