Home / ಕವನ / ಕವಿತೆ / ಆರದ ನೋವು

ಆರದ ನೋವು

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ !
ಒಂದು ಸಾರಿ ದನಿಗೂಡಿಸಯ್ಯ
ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ.

ನೋಡಿದ್ದೆ ಒಂದು ಕ್ಷಣದ ಹಿಂದೆ
ಇಲ್ಲಿಯೇ ಇದ್ದೆ
ಓಣಿಯ ಹುಡುಗರ ಸಂಗಡ
ಚಿನ್ನಾಟವಾಡುತ್ತಾ
ಕಣ್ಮನ ತುಂಬಿದ್ದೆ.

ಎಳೆವೆಯ ಸೆಳೆವಿನಲಿ
ಇಲ್ಲಿಯೇ.. ಎಲ್ಲೋ ಹೋಗಿರುವೆ
ಮರಳಿ ಬರುವೆಯೆಂಬ ನಿರೀಕ್ಷೆ ಸುಳ್ಳಾಗಿ
ತಿರುಗಿ ತಿರುಗಿ ಬಿದ್ದು ಹೋಗುತಿವೆ ಕಾಲು
ಹುಡುಕಿ ಹುಡುಕಿ ಬೆಳ್ಳಗಾಗುತಿವೆ ಕಣ್ಣು
ಸೋತು ಆತಂಕದಲಿ ತಿದಿಯಾಗುತಿದೆ ಎದೆ
ಗಾಳಿಗೆ ಸಿಲುಕಿದ ಸೊಡರಾಗುತಿದೆ ಮನ
ಜೀವಕ್ಕೆ ಏನೂ ಬೇಡದಾಗಿದೆ.

ಯಾರಲ್ಲಿ ಒರಲಲಯ್ಯಾ !
ಇಲ್ಲಿ ಯಾರ್‍ಯಾರದು ಅವರವರಿಗೆ ದೊಡ್ಡದು ಕಣಯ್ಯಾ !
ಹೆಚ್ಚಿನವರು ಮರುಕದ ನುಡಿಯೊಂದನೆಸೆದಾರು !
ಕಳೆದುಕೊಂಡಿದ್ದ ತುಂಬಿಸಿಕೊಡರಯ್ಯಾ ಯಾರೂ ?
ಬಾರಯ್ಯಾ ಮಗುವೇ.. ಬಂದು ನಿಲ್ಲೆನ್ನ ಎದುರು
ಒಂದು ಬಾರಿ ಬದುಕಿಸಯ್ಯ ನನ್ನ,

ತಾಯಿ ನಾಯಿಗೆ ಒರೆಯುವರಾರಯ್ಯಾ…
ಬಿಸಿಲಲಿ ಬವಳಿ ಗಾಡಿಯಡಿಯಲಿ ಮರೆತು ಮಲಗಿದ
ಮುದ್ದು ಮರಿಯನು ಎಬ್ಬಿಸಿ ಓಡಿಸದೆ
ಗತ್ತಿನಲಿ ಛಕ್ಕನೆ ಚಲಿಸಿ

ಪಟ್ಟನೆ ತಲೆಯನು ಸಿಡಿಸಿ
ಸಾಯಿಸಿ ಶಪಿಸಿ
ಕಸವ ಮಾಡಿ ಗುಡಿಸಿ, ಬೀಸಿ ಎಸೆದು ನಡೆದ
ಬರ್ಬರ ಸಂಗತಿಯ.

ಆರದು ! ಆರದು !!
ಹಗಲು ರಾತ್ರಿ,
ಮರಳಿ ಬಾರದ ಕಂದನಿಗಾಗಿ
ಓಣಿ ಓಣಿಯನು ಓಲುಗುಡಿಸುವ
ಹುಯಿಲಿಡುವ, ಕರೆಯುವ
ವಾತ್ಸಲ್ಯದೆದೆಯ ನೋವು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...