ಆರದ ನೋವು

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ !
ಒಂದು ಸಾರಿ ದನಿಗೂಡಿಸಯ್ಯ
ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ.

ನೋಡಿದ್ದೆ ಒಂದು ಕ್ಷಣದ ಹಿಂದೆ
ಇಲ್ಲಿಯೇ ಇದ್ದೆ
ಓಣಿಯ ಹುಡುಗರ ಸಂಗಡ
ಚಿನ್ನಾಟವಾಡುತ್ತಾ
ಕಣ್ಮನ ತುಂಬಿದ್ದೆ.

ಎಳೆವೆಯ ಸೆಳೆವಿನಲಿ
ಇಲ್ಲಿಯೇ.. ಎಲ್ಲೋ ಹೋಗಿರುವೆ
ಮರಳಿ ಬರುವೆಯೆಂಬ ನಿರೀಕ್ಷೆ ಸುಳ್ಳಾಗಿ
ತಿರುಗಿ ತಿರುಗಿ ಬಿದ್ದು ಹೋಗುತಿವೆ ಕಾಲು
ಹುಡುಕಿ ಹುಡುಕಿ ಬೆಳ್ಳಗಾಗುತಿವೆ ಕಣ್ಣು
ಸೋತು ಆತಂಕದಲಿ ತಿದಿಯಾಗುತಿದೆ ಎದೆ
ಗಾಳಿಗೆ ಸಿಲುಕಿದ ಸೊಡರಾಗುತಿದೆ ಮನ
ಜೀವಕ್ಕೆ ಏನೂ ಬೇಡದಾಗಿದೆ.

ಯಾರಲ್ಲಿ ಒರಲಲಯ್ಯಾ !
ಇಲ್ಲಿ ಯಾರ್‍ಯಾರದು ಅವರವರಿಗೆ ದೊಡ್ಡದು ಕಣಯ್ಯಾ !
ಹೆಚ್ಚಿನವರು ಮರುಕದ ನುಡಿಯೊಂದನೆಸೆದಾರು !
ಕಳೆದುಕೊಂಡಿದ್ದ ತುಂಬಿಸಿಕೊಡರಯ್ಯಾ ಯಾರೂ ?
ಬಾರಯ್ಯಾ ಮಗುವೇ.. ಬಂದು ನಿಲ್ಲೆನ್ನ ಎದುರು
ಒಂದು ಬಾರಿ ಬದುಕಿಸಯ್ಯ ನನ್ನ,

ತಾಯಿ ನಾಯಿಗೆ ಒರೆಯುವರಾರಯ್ಯಾ…
ಬಿಸಿಲಲಿ ಬವಳಿ ಗಾಡಿಯಡಿಯಲಿ ಮರೆತು ಮಲಗಿದ
ಮುದ್ದು ಮರಿಯನು ಎಬ್ಬಿಸಿ ಓಡಿಸದೆ
ಗತ್ತಿನಲಿ ಛಕ್ಕನೆ ಚಲಿಸಿ

ಪಟ್ಟನೆ ತಲೆಯನು ಸಿಡಿಸಿ
ಸಾಯಿಸಿ ಶಪಿಸಿ
ಕಸವ ಮಾಡಿ ಗುಡಿಸಿ, ಬೀಸಿ ಎಸೆದು ನಡೆದ
ಬರ್ಬರ ಸಂಗತಿಯ.

ಆರದು ! ಆರದು !!
ಹಗಲು ರಾತ್ರಿ,
ಮರಳಿ ಬಾರದ ಕಂದನಿಗಾಗಿ
ಓಣಿ ಓಣಿಯನು ಓಲುಗುಡಿಸುವ
ಹುಯಿಲಿಡುವ, ಕರೆಯುವ
ವಾತ್ಸಲ್ಯದೆದೆಯ ನೋವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಶೋಧನೆ
Next post ಅರಿವು ಕಷ್ಟವೋ ? ಮರೆವು ಕಷ್ಟವೋ ?

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…