Home / ಕವನ / ಕವಿತೆ / ಇಲ್ಲ! ಬರಲಿಲ್ಲ!

ಇಲ್ಲ! ಬರಲಿಲ್ಲ!

ಇಲ್ಲ !
ಬರಲಿಲ್ಲ
ಆ ದಿನ ಬರಲಿಲ್ಲ.

ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ
ಗುಡುಗು, ಮಿಂಚುಗಳ
ಬಾಣ, ಬಿರುಸಿನ ಮಾಲೆ ಹೊತ್ತಿಸಿ
ಗಿಡ, ಮರಗಳ ಬುಡ ನಡುಗಿಸಿ
ತಲೆ ಕೊಡವಿಸಿ
ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ
ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತಾರಾಡಿಸಿ
ಬಾನು, ಭುವಿಯನು ಬೆಸೆವ ಕೆಂದೂಳ ಸೇತುವೆಯನೆಬ್ಬಿಸುವ
ಮಳೆ ಗಾಳಿ ನೀನು ಬರಲಿಲ್ಲ.

ಬಯಲು, ಬೇಲಿ, ತಬ್ಬಿ
ಬಣ್ಣ ಗಂಧವ ರುಬ್ಬಿ
ಕಣ್ಮನಕೆ ಹಬ್ಬ ತರುವ
ಭಾದ್ರಪದ ನೀನು
ಬರಲಿಲ್ಲ

ಪ್ರೇಮ ಚುಂಬನದಿ
ಮಿಂಚು ರೋಮಾಂಚನವ ಸ್ಪುರಿಸಿ
ನವ, ನವ ಭಾವಗಳ ಚಿಗುರು ಉಡಿಸಿ
ಕಣಿವೆ ಕೊಳ್ಳಗಳಲಿ
ಕೋಗಿಲೆಗಳ ಮಧುರ ಗಾನವ ಮೊಳಗಿಸಿ
ಕನಸುಗಳ ತೇಲಿಬಿಡುವ
ಬಾಲ ಗ್ರೀಶ್ಮನು ನೀನು ಬರಲಿಲ್ಲ.

ಮಧುರ ಪರಿಮಳದ
ಮುಂಗಾರು ಮಲ್ಲಿಗೆಯ
ಮೊಗ್ಗಿನ ಮುಖದಲ್ಲಿ
ಮುಗುಳು ನಗೆ ತೇಲಿಸುವ
ಸಂಜೆ ಗಾಳಿ ನೀನು ಬರಲಿಲ್ಲ.

ನನ್ನಾಸೆ ಹೂವುಗಳು
ಕಾಯಾಗಿ ಹೊರೆಯಲು, ಹಣ್ಣಾಗಿ ಮಾಗಲು
ತಹತಹಿಪ
ಅನುರಾಗ ಪರಾಗ ನಿಯೋಗಿ ನೀನು ಬರಲಿಲ್ಲ.

ಹಸಿದು
ಕಂಗಾಲಾಗಿ
ಕೀಚ್ ಕೀಚೆನುತ ತಪಿಸುವ
ಗೂಡಿನ ಮರಿಗಳಿಗೆ
ಜೀವ ಗುಟುಕನು ತರುವ
ತಾಯಿ ಹಕ್ಕಿ ನೀನು
ಬರಲಿಲ್ಲ.

ಜಗವ ಕವಿದಿರುಳ ಮೇಲೆ
ಬೆಳಕ ದಾಳಿ ನಡೆಸಿ
ಸೋತ ತಾರಾ ಕುಲವ
ಮುನ್ನಡೆಸಿ ಗೆಲುವ
ಚಂದ್ರಿಕೆ ನೀನು
ಬರಲಿಲ್ಲ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...