ನಮಗೇ ಇರಬೇಕೆನಿಸುವುದೆ ?

ನೆನೆಯಿರಿ ಹಿರಿಯರ
ಹಣ್ಣು, ಮರಗಿಡಗಳ ಬೆಳೆಯುವವರ.

ಕೃಷಿ ಪ್ರೇಮ
ಇಹಕೂ ಆಯಿತು
ಪರಕೂ ಆಯಿತು
ಸಾರ್ಥಕ ಬದುಕಿನ ಸಂಕೇತವಾಯಿತು.

ನೆಟ್ಟ ಮರ ಗಿಡಗಳಲಿ
ಒಂದು ಒಣಗಿದರೂ
ಹುಳುಕು ಫಲಗಳ ಹೊತ್ತು ನಿಂತರೂ
ಹೌಹಾರುತ್ತಿದ್ದರು
ಎದೆ ಅಪಮೌಲ್ಯಗೊಂಡಿದೆಯೆಂದು.

ಕೊರಗಿ ಕಾಲವ ನೂಕಿ ಸಾಯುತ್ತಿರಲಿಲ್ಲ
ಪುಟ ಚೆಂಡಿನಂತೆ
ಬೆಳೆಯುವ ಪಟ್ಟು ಬಿಡದೆ
ಆತ್ಮ ನಿರೀಕ್ಷಣೆ ನಡೆಸಿ
ತಪ್ಪು ಹುಡುಕಿ, ತಿದ್ದಿ
ಒಂದರ ಬದಲು ಹತ್ತು ನೆಟ್ಟು
ಮರಳಿ ಸಮಾಧಾನ ಪಡೆಯುತ್ತಿದ್ದರು.

ಸಂಪ್ರೀತ
ವಸುಂಧರೆಯ ವದನದಲಿ
ಗೊಮ್ಮಟನ ಸವಿ ಮಂದಹಾಸ ಮಿನುಗುತ್ತಿತ್ತು
ಮೋಹಿತ ಅಲೌಕಿಕರು
ಬಂದು ಹೋಗುವ
ಸುಂದರ ತಾಣವಾಗಿತ್ತು.

ಇಲ್ಲಿ
ಈಗಿನ ಕಾಲದಲಿ
ಅವರು ಬಂದು ಹೋಗುವುದಿರಲಿ
ನಮಗೇ ಇರಬೇಕೆನಿಸುವುದೇ ? ಹೇಳಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕಾರಿಯೊ
Next post ಕುಂತು ಸಾಗುವ ವಾಹನವಿರಲೇನು ಕಷ್ಟವೋ ? ಯಾತ್ರೆಗೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…