ನಮಗೇ ಇರಬೇಕೆನಿಸುವುದೆ ?

ನೆನೆಯಿರಿ ಹಿರಿಯರ
ಹಣ್ಣು, ಮರಗಿಡಗಳ ಬೆಳೆಯುವವರ.

ಕೃಷಿ ಪ್ರೇಮ
ಇಹಕೂ ಆಯಿತು
ಪರಕೂ ಆಯಿತು
ಸಾರ್ಥಕ ಬದುಕಿನ ಸಂಕೇತವಾಯಿತು.

ನೆಟ್ಟ ಮರ ಗಿಡಗಳಲಿ
ಒಂದು ಒಣಗಿದರೂ
ಹುಳುಕು ಫಲಗಳ ಹೊತ್ತು ನಿಂತರೂ
ಹೌಹಾರುತ್ತಿದ್ದರು
ಎದೆ ಅಪಮೌಲ್ಯಗೊಂಡಿದೆಯೆಂದು.

ಕೊರಗಿ ಕಾಲವ ನೂಕಿ ಸಾಯುತ್ತಿರಲಿಲ್ಲ
ಪುಟ ಚೆಂಡಿನಂತೆ
ಬೆಳೆಯುವ ಪಟ್ಟು ಬಿಡದೆ
ಆತ್ಮ ನಿರೀಕ್ಷಣೆ ನಡೆಸಿ
ತಪ್ಪು ಹುಡುಕಿ, ತಿದ್ದಿ
ಒಂದರ ಬದಲು ಹತ್ತು ನೆಟ್ಟು
ಮರಳಿ ಸಮಾಧಾನ ಪಡೆಯುತ್ತಿದ್ದರು.

ಸಂಪ್ರೀತ
ವಸುಂಧರೆಯ ವದನದಲಿ
ಗೊಮ್ಮಟನ ಸವಿ ಮಂದಹಾಸ ಮಿನುಗುತ್ತಿತ್ತು
ಮೋಹಿತ ಅಲೌಕಿಕರು
ಬಂದು ಹೋಗುವ
ಸುಂದರ ತಾಣವಾಗಿತ್ತು.

ಇಲ್ಲಿ
ಈಗಿನ ಕಾಲದಲಿ
ಅವರು ಬಂದು ಹೋಗುವುದಿರಲಿ
ನಮಗೇ ಇರಬೇಕೆನಿಸುವುದೇ ? ಹೇಳಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕಾರಿಯೊ
Next post ಕುಂತು ಸಾಗುವ ವಾಹನವಿರಲೇನು ಕಷ್ಟವೋ ? ಯಾತ್ರೆಗೆ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…