Home / ಕವನ / ಕವಿತೆ / ನಮಗೇ ಇರಬೇಕೆನಿಸುವುದೆ ?

ನಮಗೇ ಇರಬೇಕೆನಿಸುವುದೆ ?

ನೆನೆಯಿರಿ ಹಿರಿಯರ
ಹಣ್ಣು, ಮರಗಿಡಗಳ ಬೆಳೆಯುವವರ.

ಕೃಷಿ ಪ್ರೇಮ
ಇಹಕೂ ಆಯಿತು
ಪರಕೂ ಆಯಿತು
ಸಾರ್ಥಕ ಬದುಕಿನ ಸಂಕೇತವಾಯಿತು.

ನೆಟ್ಟ ಮರ ಗಿಡಗಳಲಿ
ಒಂದು ಒಣಗಿದರೂ
ಹುಳುಕು ಫಲಗಳ ಹೊತ್ತು ನಿಂತರೂ
ಹೌಹಾರುತ್ತಿದ್ದರು
ಎದೆ ಅಪಮೌಲ್ಯಗೊಂಡಿದೆಯೆಂದು.

ಕೊರಗಿ ಕಾಲವ ನೂಕಿ ಸಾಯುತ್ತಿರಲಿಲ್ಲ
ಪುಟ ಚೆಂಡಿನಂತೆ
ಬೆಳೆಯುವ ಪಟ್ಟು ಬಿಡದೆ
ಆತ್ಮ ನಿರೀಕ್ಷಣೆ ನಡೆಸಿ
ತಪ್ಪು ಹುಡುಕಿ, ತಿದ್ದಿ
ಒಂದರ ಬದಲು ಹತ್ತು ನೆಟ್ಟು
ಮರಳಿ ಸಮಾಧಾನ ಪಡೆಯುತ್ತಿದ್ದರು.

ಸಂಪ್ರೀತ
ವಸುಂಧರೆಯ ವದನದಲಿ
ಗೊಮ್ಮಟನ ಸವಿ ಮಂದಹಾಸ ಮಿನುಗುತ್ತಿತ್ತು
ಮೋಹಿತ ಅಲೌಕಿಕರು
ಬಂದು ಹೋಗುವ
ಸುಂದರ ತಾಣವಾಗಿತ್ತು.

ಇಲ್ಲಿ
ಈಗಿನ ಕಾಲದಲಿ
ಅವರು ಬಂದು ಹೋಗುವುದಿರಲಿ
ನಮಗೇ ಇರಬೇಕೆನಿಸುವುದೇ ? ಹೇಳಿ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...