Home / ಕವನ / ಕವಿತೆ / ಮುಂಜಾವು

ಮುಂಜಾವು

ಕತ್ತಲೆ ಮುಸುಗು
ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು
ಒಳಗಿಂದೊಳಗೆ
ಬೆಳಕಿನ ತೆನೆಯು ಕಾಳುಗಟ್ಟುತಿತ್ತು.

ರಾತ್ರಿ ಬೆಳಗಿದ
ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು
ಲೋಕಾದ ಲೋಕವೆಲ್ಲ
ಹಿತಕರ ತಂಪಿನ ಮಾಡು ಹೊದಿಯುತಿತ್ತು.

ಅಮೃತ ನಿದ್ದೆ
ತೆಕ್ಕೆಯ ಸಡಿಸಲಿಸಿ ಜೀವ ಭಾವವು ಎಚ್ಚರವಾಗುತಿತ್ತು
ನವ ಚೈತನ್ಯದಾಯಿ
ಶುದ್ಧಗಾಳಿಯು ನವಿರಾಗಿ ನರ್ತಿಸತೊಡಗಿತ್ತು.

ಹೊಸತೊಂದು ದಿನದ
ತವಕದ ಬಾಳಿಗೆ ಪಕ್ಷಿ ಸಂಕುಲ ಸಿದ್ದವಾಗುತಿತ್ತು
ಅಂತೆಯೆ ಎಲ್ಲೆಡೆ
ಜೀವ ವ್ಯವಹಾರ ನಿಧಾನವಾಗಿ ಚಾಲನೆ ಪಡಿತಿತ್ತು.

ಅರಿವಿನ ಬೆಳಗು
ಎದೆ, ಮನ ತಟ್ಟಿ ಆತ್ಮವು ಮಲ್ಲಿಗೆಯಾಗುತಿತ್ತು
ಮೂಡಣ ದಿಗಂತ
ರತ್ನ ಕೆಂಪಿನ ಸಾಗರದಲ್ಲಿ ಓಕುಳಿಯಾಡುತಿತ್ತು.

ಕಾವುಳ ಕರಗಿ
ಹೋಮ ಧೂಮವಾಗಿ ಗುಳೆ ಹೋಗುತಿತ್ತು
ಸಸ್ಯ ಸಂಪದವು
ಮಂಜು ಹನಿಗಳ ಮುತ್ತುಗಳಿಂದ ಸಿಂಗಾರಗೊಳುತಿತ್ತು

ಮೂಡುವ ರವಿಯಲಿ
ಮಾತೆಯ ನೊಸಲಿನ ಮಂಗಳ ತಿಲಕದ ಶೋಭೆ ಏರುತಿತ್ತು
ದರ್ಶಕ ಮನಸು
ಆಲೌಕಿಕ ಚೆಲುವಿನ ರಸಪಾಕವನುಂಡು
ದಿವ್ಯಾನುಭೂತಿ ಹೊಂದುತಲಿತ್ತು.
*****

Tagged:

2 Comments

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...