ಮುಖಾ ಮುಖಿ

ನಾನು
‘ಅವನನ್ನು’ ಕಾಣ ಹೋದೆ
ಬೇಡಿಕೆ ಪಟ್ಟಿ
ಹನುಮನ ಬಾಲದಂತಿತ್ತು.

ಎದುರಿಗೆ ನಿಂತು
ಇಲ್ಲದ ಭಯ, ಭಕ್ತಿ ನಟಿಸುತ್ತ
“ನೀನೆ ನನಗೆ ಎಲ್ಲ
ನಿನ್ನದೇ ಇದು ಎಲ್ಲ
ನಾನು, ನನ್ನದೆಂಬುದೇನೂ ಇಲ್ಲ”

ನನ್ನ ಊನ, ವಕ್ರ ನೋಡಬೇಡ
ನಿನಗೇನು ಗುನ್ನ ಗೂಸ ಇಲ್ಲ
ಯಾರೂ… ಏನು ಬೇಕಾಗಿಲ್ಲ;

ನೀನು ನಾವಲ್ಲ!
ಧ್ಯಾನಿಸಬೇಕೆಂಬುದರ ವಿನಃ
ಅನ್ಯ ನಿರೀಕ್ಷೆಯಿಲ್ಲ.

ನೀನು ನಮ್ಮ ಧಣಿ!
ನಮ್ಮ ಕೋರಿಕೆ ಸಲ್ಲಿಸು
ನಿನ್ನನ್ನು ನೀನು ಸಾಬೀತು ಮಾಡಿಕೊ…
ಎಂದೊದರಿದೆ
ಎಂದಿನಂತೆ ಒಂದೇ ಉಸಿರಿಗೆ.

ಅವನು
ಮುಸು, ಮುಸು ನಕ್ಕಂತಾಗಿ
ಗಲಿ, ಬಿಲಿಗೊಂಡೆ.

ಇಲ್ಲಿ
ಎಲ್ಲವನ್ನು ಸೃಷ್ಟಿಸಿ
ಬಿಟ್ಟಿಹನು.

ನಾವು
ಯಾವುದು ಎಷ್ಟು ಬೇಕೋ ಅಷ್ಟು
ಬಳಸಿಕೊಳ್ಳಬೇಕು
ಬದುಕು ಕಟ್ಟಿಕೊಳ್ಳಬೇಕು.

ಬಾಳಿನಲ್ಲಿ
ಕಷ್ಟ, ಸುಖದ ತಟ್ಟೆಗಳು
ಎಂದೆಂದಿಗೂ ಸರಿದೂಗವೆಂದು
ಯಾರಿಗೆ ತಿಳಿದಿಲ್ಲ ?

ಮಕ್ಕಳಂತೆ
ದಿಗಿಲು ಬಿದ್ದು
ಪ್ರತಿ ಬಾರಿ ಓಡಿಹೋಗಿ
ದುಂಬಾಲು ಬೀಳೋದು
ನಮಗೆ, ನಮ್ಮದಕ್ಕೆ, ಅರ್ಥವನ್ನು ತರುವುದೇ?

ಜಿಜ್ಞಾಸೆ ಎದ್ದಿತು
ಸುಮ್ಮನೆ ಹೊರಬಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳಕೊಂಡವನು
Next post ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys