ಮುಖಾ ಮುಖಿ

ನಾನು
‘ಅವನನ್ನು’ ಕಾಣ ಹೋದೆ
ಬೇಡಿಕೆ ಪಟ್ಟಿ
ಹನುಮನ ಬಾಲದಂತಿತ್ತು.

ಎದುರಿಗೆ ನಿಂತು
ಇಲ್ಲದ ಭಯ, ಭಕ್ತಿ ನಟಿಸುತ್ತ
“ನೀನೆ ನನಗೆ ಎಲ್ಲ
ನಿನ್ನದೇ ಇದು ಎಲ್ಲ
ನಾನು, ನನ್ನದೆಂಬುದೇನೂ ಇಲ್ಲ”

ನನ್ನ ಊನ, ವಕ್ರ ನೋಡಬೇಡ
ನಿನಗೇನು ಗುನ್ನ ಗೂಸ ಇಲ್ಲ
ಯಾರೂ… ಏನು ಬೇಕಾಗಿಲ್ಲ;

ನೀನು ನಾವಲ್ಲ!
ಧ್ಯಾನಿಸಬೇಕೆಂಬುದರ ವಿನಃ
ಅನ್ಯ ನಿರೀಕ್ಷೆಯಿಲ್ಲ.

ನೀನು ನಮ್ಮ ಧಣಿ!
ನಮ್ಮ ಕೋರಿಕೆ ಸಲ್ಲಿಸು
ನಿನ್ನನ್ನು ನೀನು ಸಾಬೀತು ಮಾಡಿಕೊ…
ಎಂದೊದರಿದೆ
ಎಂದಿನಂತೆ ಒಂದೇ ಉಸಿರಿಗೆ.

ಅವನು
ಮುಸು, ಮುಸು ನಕ್ಕಂತಾಗಿ
ಗಲಿ, ಬಿಲಿಗೊಂಡೆ.

ಇಲ್ಲಿ
ಎಲ್ಲವನ್ನು ಸೃಷ್ಟಿಸಿ
ಬಿಟ್ಟಿಹನು.

ನಾವು
ಯಾವುದು ಎಷ್ಟು ಬೇಕೋ ಅಷ್ಟು
ಬಳಸಿಕೊಳ್ಳಬೇಕು
ಬದುಕು ಕಟ್ಟಿಕೊಳ್ಳಬೇಕು.

ಬಾಳಿನಲ್ಲಿ
ಕಷ್ಟ, ಸುಖದ ತಟ್ಟೆಗಳು
ಎಂದೆಂದಿಗೂ ಸರಿದೂಗವೆಂದು
ಯಾರಿಗೆ ತಿಳಿದಿಲ್ಲ ?

ಮಕ್ಕಳಂತೆ
ದಿಗಿಲು ಬಿದ್ದು
ಪ್ರತಿ ಬಾರಿ ಓಡಿಹೋಗಿ
ದುಂಬಾಲು ಬೀಳೋದು
ನಮಗೆ, ನಮ್ಮದಕ್ಕೆ, ಅರ್ಥವನ್ನು ತರುವುದೇ?

ಜಿಜ್ಞಾಸೆ ಎದ್ದಿತು
ಸುಮ್ಮನೆ ಹೊರಬಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳಕೊಂಡವನು
Next post ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…