ಹದಿನಾರರ

ಹದಿನಾರರ
ಹರೆಯದೋಕುಳಿಯಲ್ಲಿ
ಕಾಲ ಜಗಮಘ|
ಬದುಕು ಹರ್ಷಮಯ
ಜಗವು ವರ್ಣಮಯ||

ಮನದ ಮಾತಿಗಿಂತ
ರೂಪ ಆರ್ಕಷಣೆಗೇ ಒಲವು|
ಬುದ್ಧಿ ಮಾತಿಗಿಂತ
ಹೃದಯದ ಮಾತಿಗೆ ಸೆಳವು|
ಎಲ್ಲಾ ಅಂದುಕೊಂಡಂತೆ
ಆದ್ದದೇ ಆದರೆ ಶೃಂಗಾರವೀಕಾಲ||

ಸ್ನೇಹ ಜೊತೆಯಲಿ ಪ್ರೀತಿ
ತಾನಾಗಿ ಚಿಗಿರೊಡಯಲಿ|
ಪ್ರೀತಿಯಲಿ ನಂಬಿಕೆ ಇರಲಿ, ಆದರೆ
ಅತೀಯಾದ ಸಲಿಗೆ ಒಳ್ಳೆಯದಲ್ಲ|
ಮೋಹದಾವೇಷ ತರವಲ್ಲ
ನಿನ್ನಾಸೆಗಳಿಗೆ ಅಂಕುಷವಿರಲಿ
ಎಲ್ಲರಾ ಭಾವನೆಗಳಿಗೂ
ಅವರದ್ದೇ ಆದ ಬೆಲೆ ಸಿಗಲಿ||

ಬರೀ ಹರೆಯದ ಆಕರ್ಷಣೆಗೆ
ಒಳಗಾಗಿ ಸಚ್ಚರಿತ್ರೆಗೆ ಧಕ್ಕೆವಾಗೆ
ಪರಿತಪಿಸುವುದು ಪ್ರೀತಿಯಲ್ಲ |
ವಿಂಚಿ ಹೋದ ಮೇಲೆ ಕಾಲವನು
ಚಿಂತಿಸೆ ಶಪಿಸಿದರೆ ಫಲವಿಲ್ಲ|
ಭಗ್ನ ಪ್ರೇವಿಗಳಾಗದೆ
ಸಂಯಮದಿ ನಿಜ ಪ್ರೀತಿಯ
ರೂಪವ ಅರಿಯೇ ಉತ್ತಮ|
ಗೆದ್ದರೆ ಇಬ್ಬರೂ ಗೆಲ್ಲುವ
ಸೊತರೆ ಇಬ್ಬರು ಸೋಲುವ
ಏಕೈಕ ಪ್ರಕೃತಿ ಪುರುಷನ ಆಟ
ಈ ಪ್ರೀತಿ ಪ್ರೇಮದಾಟ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?
Next post ನಗು-ಅಳು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys