ಹದಿನಾರರ

ಹದಿನಾರರ
ಹರೆಯದೋಕುಳಿಯಲ್ಲಿ
ಕಾಲ ಜಗಮಘ|
ಬದುಕು ಹರ್ಷಮಯ
ಜಗವು ವರ್ಣಮಯ||

ಮನದ ಮಾತಿಗಿಂತ
ರೂಪ ಆರ್ಕಷಣೆಗೇ ಒಲವು|
ಬುದ್ಧಿ ಮಾತಿಗಿಂತ
ಹೃದಯದ ಮಾತಿಗೆ ಸೆಳವು|
ಎಲ್ಲಾ ಅಂದುಕೊಂಡಂತೆ
ಆದ್ದದೇ ಆದರೆ ಶೃಂಗಾರವೀಕಾಲ||

ಸ್ನೇಹ ಜೊತೆಯಲಿ ಪ್ರೀತಿ
ತಾನಾಗಿ ಚಿಗಿರೊಡಯಲಿ|
ಪ್ರೀತಿಯಲಿ ನಂಬಿಕೆ ಇರಲಿ, ಆದರೆ
ಅತೀಯಾದ ಸಲಿಗೆ ಒಳ್ಳೆಯದಲ್ಲ|
ಮೋಹದಾವೇಷ ತರವಲ್ಲ
ನಿನ್ನಾಸೆಗಳಿಗೆ ಅಂಕುಷವಿರಲಿ
ಎಲ್ಲರಾ ಭಾವನೆಗಳಿಗೂ
ಅವರದ್ದೇ ಆದ ಬೆಲೆ ಸಿಗಲಿ||

ಬರೀ ಹರೆಯದ ಆಕರ್ಷಣೆಗೆ
ಒಳಗಾಗಿ ಸಚ್ಚರಿತ್ರೆಗೆ ಧಕ್ಕೆವಾಗೆ
ಪರಿತಪಿಸುವುದು ಪ್ರೀತಿಯಲ್ಲ |
ವಿಂಚಿ ಹೋದ ಮೇಲೆ ಕಾಲವನು
ಚಿಂತಿಸೆ ಶಪಿಸಿದರೆ ಫಲವಿಲ್ಲ|
ಭಗ್ನ ಪ್ರೇವಿಗಳಾಗದೆ
ಸಂಯಮದಿ ನಿಜ ಪ್ರೀತಿಯ
ರೂಪವ ಅರಿಯೇ ಉತ್ತಮ|
ಗೆದ್ದರೆ ಇಬ್ಬರೂ ಗೆಲ್ಲುವ
ಸೊತರೆ ಇಬ್ಬರು ಸೋಲುವ
ಏಕೈಕ ಪ್ರಕೃತಿ ಪುರುಷನ ಆಟ
ಈ ಪ್ರೀತಿ ಪ್ರೇಮದಾಟ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?
Next post ನಗು-ಅಳು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…