ಹೆಣ್ಣಾಗಿ ಜನ್ಮನೀಡಿ

ಹೆಣ್ಣಾಗಿ ಜನ್ಮನೀಡಿ
ಹೆತ್ತ ಕುಡಿಗೆ ಹಸಿವ ನೀಗಿಸೇ
ನಿನ್ನ ಸೌಂದರ್ಯ ಕೆಡುವುದೆಂಬ
ಅಲ್ಪತನದ ಸೌಂದರ್ಯ ಪ್ರಜ್ಞೆಗೆ
ಅಜ್ಞಾನವೆನ್ನುವುದೇ ಸರಿ|
ಅತಿಥಿಯಾಗಿ ಅಲ್ಪಸಮಯದಿ
ಬಂದುಹೋಗುವ ಯೌವನಕೆ
ಏಕಿಂತ ವ್ಯಾಕುಲತೆ||

ಅಮ್ಮನೆನಿಸುವ ಭಾಗ್ಯ
ಎಲ್ಲರಿಗೂ ಸಿಗುವುದಿಲ್ಲ|
ಸುಖಕೆ ಮಗುವ ಹೆತ್ತರೆ
ತಾಯಿಯಾಗುವುದಿಲ್ಲ|
ಹಗಲು ರಾತ್ರಿ ನಿದ್ದೆಗೆಡಬೇಕು
ಕಷ್ಟ ಪಡಬೇಕು, ಇಷ್ಟಾರ್ಥಗಳನ್ನೆಲ್ಲ
ಆ ಕಂದಮ್ಮನಿಗಾಗಿ ಬದಿಗಿಡಲುಬೇಕು|
ಎಷ್ಟುಜನ್ಮದ ಪುಣ್ಯದ ಫಲವೊ ನೀ
ತಾಯಿಯಾಗಿರುವುದು||

ನಿನ್ನನೇ ನಂಬಿ ಹುಟ್ಟಿರುವ
ಕಂದನಾ ಹಸಿವ ತಣಿಸೆ ಆಗದಿರೆ
ನಿನ್ನ ಹೆಣ್ತನಕೆ ಧಿಕ್ಕಾರವಿರಲಿ|
ನಿನ್ನ ನಿರಾಧಾರ ಸೌಂದರ್ಯ
ಕೀಳು ಪ್ರಜ್ಞೆಗೆ ಧಿಕ್ಕಾರವಿರಲಿ|
ನಿನ್ನಂತೆ ಎಲ್ಲ ತಾಯಂದಿರು
ಅಲ್ಪತನದಲಿ ಯೋಚಿಸಿದರೆ
ಮಾನವಜನ್ಮದ ಮುಂದಿನ ಗತಿಯೇನು?
ಸ್ತ್ರೀಗೆ ಸಮಾಜದಲಿ ಬೆಲೆ ಇನ್ನೇನು?||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಪು ಪಾನೀಯಗಳಿಂದ ಅಪಾಯವಿದೆ ಹುಶಾರ್!
Next post ಕರ್ಣ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys