ಕರ್ಣ

ಸಿಕ್ಕೀತು ಹೇಗೆ ಕರ್ಣನಿಗೆ
ಈ ನಾಡ ಸಿಂಹಾಸನ!
ಹೆತ್ತ ತಾಯಿಯೆ ತೇಲಿಬಿಟ್ಟಳು-
ನೀರ ಮೇಲಿನ ಪಯಣ.

ಮೀನುಗಳು ಮುತ್ತಿಟ್ಟವು
ಮೊಸಳೆಗಳು ಮುಟ್ಟವು
ಅಲೆಯ ಮೇಲಿನ ಬಾಳು
ಆಸೆಗಳು ಹುಟ್ಟವು.

ಒಬ್ಬನಿಗೆ ಹೃದಯಕಳಶ
ಇನ್ನೊಬ್ಬನಿಗೆ ಮೈಯ ಕವಚ
ಕರ್ಣಕುಂಡಲಕ್ಕೂ ಬಿತ್ತು ದಾನದ ಕತ್ತಿ
ಮಾರಿಕೊಳ್ಳದ ಮನಸು
ಕನ್ನಡದ ಕರ್ಣಕನಸು
ಬತ್ತಿಹೋಗದ ಒರತ ಜೀವಶಕ್ತಿ.

ಕಣ್ಣಪಟ್ಟಿಯ ಕುರುಕ್ಷೇತ್ರದಲ್ಲಿ
ಕರ್ಣ ರಥವ ಹತ್ತಿದ;
ವರ್ಣ ಪಥವ ಮೀರಿ ಮಿಂಚಿ
ಕೃಷ್ಣಗೀತೆ ಕೇಳಿ ಸಟೆದ
ಪಾರ್ಥನಿಗೆ ದಕ್ಕಿದ.

ಭಾರತದ ಭೂಪಟದಲ್ಲಿ ನಮ್ಮ ನಾಡ ಕರ್ಣ
ಯಾರು ಕೃಷ್ಣ ಯಾರು ಪಾರ್ಥ
ಕರ್ಣರಥಕೆ ಕೆಂಪು ಕೆಸರು
ಎದ್ದು ನಿಂತ ಸ್ವಾರ್ಥ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣಾಗಿ ಜನ್ಮನೀಡಿ
Next post ಬಂಜೆಯ ಬಯಕೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys