Home / ಕವನ / ಕವಿತೆ / ಎತ್ತ ಹೋದನಮ್ಮ?

ಎತ್ತ ಹೋದನಮ್ಮ?

ಎತ್ತ ಹೋದನಮ್ಮ?
ನಮ್ಮಯ ಕೃಷ್ಣಾ
ಎತ್ತ ಹೋದನಮ್ಮ|
ನಾವು ಅವನಕೂಡೆ
ಆಡೆ ಬಂದೆವಮ್ಮ||

ಅವನು ಏಲ್ಲಿ ಹೋಗುವಂತಿಲ್ಲ
ಅವನ ನಾನು ಬಿಡುವುದೂ ಇಲ್ಲ|
ಅವನ ತರಲೆ ಕೇಳಿ ಕೇಳಿ
ನನಗಂತೂ ಸಾಕಾಗಿದೆ|
ಅದಕೆ ಅವನ ಕಂಬಕೆ
ಕಟ್ಟಿಹಾಕಿ, ಹಾಲು ಮೊಸರು
ಬೆಣ್ಣೆಯನೆಲ್ಲಾ ದೂರವಿರಿಸಿರುವೆ||

ಅವನದೇನು ತಪ್ಪಿಲ್ಲಮ್ಮ
ಎಲ್ಲಾ ನಮಗಾಗಿಯೇ ಮಾಡಿದನಮ್ಮ|
ಅವನೊಬ್ಬನಿಗೇಕೆ ಇಂಥ ಶಿಕ್ಷೆ
ನಮಗೂ ನೀಡಿ ಅಂತಹುದೇ ಶಿಕ್ಷೆ|
ನಾವು ಅವನ ಬಿಟ್ಟು
ಎಲ್ಲೂ ಹೋಗುವುದೇ ಇಲ್ಲ ||

ಮುದ್ದು ಮಕ್ಕಳ ಮಾತ ಕೇಳಿ
ನಕ್ಕು ಯಶೋಧೆ |
ಶ್ರೀ ಕೃಷ್ಣನ ಕೈಯ ಬಿಡಿಸಿ
ಮಕ್ಕಳ ಮಾಣಿಕ್ಯನ
ಅಪ್ಪಿ ತಾ ಮುದ್ದಿಸಿ|
ಹಾಲು ಮೊಸರನ್ನೆಲ್ಲಾ
ಮಕ್ಕಳಿಗೆ ನೀಡಿ ಆನಂದಿಸಿ|
ಜನ್ಮ ಧನ್ಯತೆಯಿಂದ ಭಾಷ್ಪಿಸಿದಳು||

ಅತ್ತ ಮತ್ತೆ ಕೃಷ್ಣ ಗೆಳೆಯರ ಕೂಡಿ
ಹೊರಗೆ ಓಡಿದನಮ್ಮ
ಮತ್ತೆ ತರಲೆಗಳ
ಸರಮಾಲೆಯನೆ ತಂದನಮ್ಮ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...