Home / ಕವನ / ಕವಿತೆ / ಎತ್ತ ಹೋದನಮ್ಮ?

ಎತ್ತ ಹೋದನಮ್ಮ?

ಎತ್ತ ಹೋದನಮ್ಮ?
ನಮ್ಮಯ ಕೃಷ್ಣಾ
ಎತ್ತ ಹೋದನಮ್ಮ|
ನಾವು ಅವನಕೂಡೆ
ಆಡೆ ಬಂದೆವಮ್ಮ||

ಅವನು ಏಲ್ಲಿ ಹೋಗುವಂತಿಲ್ಲ
ಅವನ ನಾನು ಬಿಡುವುದೂ ಇಲ್ಲ|
ಅವನ ತರಲೆ ಕೇಳಿ ಕೇಳಿ
ನನಗಂತೂ ಸಾಕಾಗಿದೆ|
ಅದಕೆ ಅವನ ಕಂಬಕೆ
ಕಟ್ಟಿಹಾಕಿ, ಹಾಲು ಮೊಸರು
ಬೆಣ್ಣೆಯನೆಲ್ಲಾ ದೂರವಿರಿಸಿರುವೆ||

ಅವನದೇನು ತಪ್ಪಿಲ್ಲಮ್ಮ
ಎಲ್ಲಾ ನಮಗಾಗಿಯೇ ಮಾಡಿದನಮ್ಮ|
ಅವನೊಬ್ಬನಿಗೇಕೆ ಇಂಥ ಶಿಕ್ಷೆ
ನಮಗೂ ನೀಡಿ ಅಂತಹುದೇ ಶಿಕ್ಷೆ|
ನಾವು ಅವನ ಬಿಟ್ಟು
ಎಲ್ಲೂ ಹೋಗುವುದೇ ಇಲ್ಲ ||

ಮುದ್ದು ಮಕ್ಕಳ ಮಾತ ಕೇಳಿ
ನಕ್ಕು ಯಶೋಧೆ |
ಶ್ರೀ ಕೃಷ್ಣನ ಕೈಯ ಬಿಡಿಸಿ
ಮಕ್ಕಳ ಮಾಣಿಕ್ಯನ
ಅಪ್ಪಿ ತಾ ಮುದ್ದಿಸಿ|
ಹಾಲು ಮೊಸರನ್ನೆಲ್ಲಾ
ಮಕ್ಕಳಿಗೆ ನೀಡಿ ಆನಂದಿಸಿ|
ಜನ್ಮ ಧನ್ಯತೆಯಿಂದ ಭಾಷ್ಪಿಸಿದಳು||

ಅತ್ತ ಮತ್ತೆ ಕೃಷ್ಣ ಗೆಳೆಯರ ಕೂಡಿ
ಹೊರಗೆ ಓಡಿದನಮ್ಮ
ಮತ್ತೆ ತರಲೆಗಳ
ಸರಮಾಲೆಯನೆ ತಂದನಮ್ಮ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...