Home / ಕವನ / ಕವಿತೆ / ಜೀವರೂಪ

ಜೀವರೂಪ

ಯಾವುದೀ ಒಳಗಿನ ಲೋಕ
ಹೊರಗೆ ಲಯವಾಗುತ್ತ ಒಳಗೆ
ಹುಟ್ಟುತಿಹುದು.
ಒಳಗೆ ಮೂಡಿದ ಆಕೃತಿ
ಹೊರಗೆ ಕೃತಿಯಾಗುತ್ತಿಹುದು.

ಸತ್ತ ಜೀವಗಳ ಮೇಲೆ ಚಿತ್ತವಿಟ್ಟವರಾರು
ಭೂಮಿಯಲ್ಲಿ ಎಲ್ಲರೂ ಬೆಂಕಿ ಬೆಳೆದವರು
ಅಗ್ನಿಸುತೆ ಸೀರೆಯಲಿ ಸಂಕಟವ ಬಿಚ್ಚಿಕೊಳ್ಳುತ್ತಿರುವಾಗ
ಬಾಯಿ ಕಚ್ಚಿಕೊಂಡರು ನಮ್ಮ ಪುಣ್ಯಪುರುಷರು!

ಸೀತೆಸೀರೆಯ ಗಂಟು ಬಿಚ್ಚಿಕೊಳ್ಳಲಿಲ್ಲ
ಬೆಚ್ಚಿಬಿದ್ದರು ನೀತಿವಂತರು ರಾವಣನ ಹೆಸರಿಗೆ
ಹೊರಗೆ ಏಕಲವ್ಯನ ಹೆಬ್ಬೆರಳು ಕೆಂಬೆವರು
ಮುಂದೆ ಬರೆಯಿತು ಕರ್ಣರಥವ ಕರಿನೆತ್ತರು.

ಪುರಾಣಕ್ಕೆ ಮಾಡಿದ ಕಸಿ ಇತಿಹಾಸವಾಗಿ
ಸಮಕಾಲೀನದಲ್ಲೂ ಬುದ್ಧಿ-ಬಲದ ಅಟ್ಟಹಾಸ!
ಯಾರು ರಾವಣ, ಯಾರು ರಾಮ
ಯಾರು ಕೌರವ, ಯಾರು ಧರ್ಮ, ದ್ರೋಣ?
ಯಾರದೊ ಬಿಲ್ಲು ಯಾರದೊ ಬಾಣ
ಮಾರಾಟಕ್ಕಿದೆ ಬೆವರಿನ ಪ್ರಾಣ!

ಪುರಾಣೇತಿಹಾಸದ ಪುಣ್ಯಾರ್ಚನೆಯಲ್ಲಿ
ಒಳತಿರುಳ ಸುಟ್ಟು
ಅರ್ಥಶೋಧಕ್ಕೆ ಹಾಕಿದರು ಕಣ್ಣುಕಟ್ಟು.

ಹೊರಗಿನ ಹುನ್ನಾರ ಲಯವಾಗುತ್ತ ಹೋದಂತೆ
ಒಳಗು ಬಿಚ್ಚಿಕೊಳ್ಳುತ್ತದೆ ಸಿಪ್ಪೆ ಸುಲಿದು
ಬೀಜ ಬೆಳೆಯುತ್ತದೆ ಹುಟ್ಟಿನಲ್ಲಿ ಸಾಯುತ್ತ
ಸಾವಿನಲಿ ಹುಟ್ಟುತ್ತ ಜೀವರೂಪವ ತಳೆದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...