Home / ಲೇಖನ / ವಿಜ್ಞಾನ / ಭೂಗರ್ಭದೊಳಗೆ ಬದುಕು

ಭೂಗರ್ಭದೊಳಗೆ ಬದುಕು

ಇದುವರೆಗೆ ಯಾವುದೇ ನಿವೇಶನವೂ ಭೂಮಿಯ ಮೇಲೆ ಇರುತ್ತದೆಂಬುವುದು ವಾಸ್ತವ. ಇತ್ತೀಚೆಗೆ ಈ ಭೂಮಿಯ (ನೆಲದ) ಮೇಲೆ ಸ್ಥಳಾವಕಾಶವಿಲ್ಲವೆಂದೂ, ಇನ್ನೂ ಅನೇಕ ಕಾರಣಗಳಿಂದಾಗಿ ಈ ಮಾನವ ವಿಜ್ಞಾನದ ಸಹಾಯದಿಂದ ಭೂಗರ್ಭಕ್ಕೆ ಲಗ್ಗೆ ಇಡುತ್ತಿದ್ದಾನೆ. ಜಪಾನ್ ದೇಶ ಈ ನೆಲದಾಳಿನ ವಾಸದ ಸಾಹಸಕ್ಕೆ ಕೈ ಹಾಕಿದೆ. ಪದೆ ಪದೇ ಭೂಕಂಪನದಿಂದ ಬೇಸತ್ತ ಜಪಾನಿಯರು ನೆಲದಾಳದಲ್ಲಿ ಭೂಕಂಪನ ಮುಕ್ತವಾದ ನಗರಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಚಿನ್ನದ, ಕಲ್ಲಿದ್ದಿಲಿನ ಗಣಿಗಳಂತೆ ಕಾಣುವ ಈ ನಗರಗಳು ಭೂಮಿಯ ಮೇಲ್ಮೈಯಿಂದ ೫೦ ಮೀಟರ್ ಆಳದಲ್ಲಿ ೧೦೦ ಕಿ.ಮೀ. ವಿಸ್ತಾರದಲ್ಲಿ ಹೊಸ ನಗರಗಳ ರಚನೆ ಯಾಗಲಿವೆ. ನಗರದಾದ್ಯಾಂತ ಓಡಾಡುವ ಅತಿವೇಗದ ನೆಲದಾಳದಿಂದ ಭೂಮಿಯ ಮೇಲಕ್ಕೆ ವೇಗವಾಗಿ ಪಯಣಿಸುವ ಸಾರಿಗೆ ಈ ಭೂಗರ್ಭ ನಗರಗಳನ್ನು ಸಂಪರ್ಕಿಸುತ್ತದೆ.

ಸೂರ್ಯನ ಬೆಳಕನ್ನು ಪ್ರತಿಫಲಿಸಿ ನೆಲದಾಳದಲ್ಲಿ ಹಿತವಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಸಂಪೂರ್ಣ ನಗರವೇ ಹವಾನಿಯಂತ್ರಿತ ಮಾಡಲಾಗಿದೆ. ನಗರದಲ್ಲಿ ಕೃತಕ ತಂತ್ರಗಳನ್ನು ಬಳಸಿ ನೆಲದ ಮೇಲಿರುವಂತೆ ವಾತಾವರಣವನ್ನು ಸೃಷ್ಟಿಸುವ ಸೋಜಿಗದ ಪಟ್ಟಣಗಳು ಇವಾಗಲಿವೆ.

ಇಂದು ಕೂಡ ಬಹಳ ಜನ ಕೇವಲ ಪುರಾಣಕಾಲದ ಕಲ್ಪನೆ, ಎಂದು ಹೇಳುತ್ತಿರುವಾಗ ಇದು ಕೂಡ ಒಂದು ರೀತಿಯ ‘ಪಾತಾಳಲೋಕ’ ವೆಂದರೆ ಒಂದು ರೀತಿಯಲ್ಲಿ ತಪ್ಪಿಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...