Home / ಕವನ / ಕವಿತೆ / ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?
ಜಗಜ್ಜಾಹೀರವಾಗಿರಲು ನೀನು|
ಏಕೆ ಕಾಣಿಸುವುದಿಲ್ಲವೆನ್ನಲಿ
ಸರ್ವವ್ಯಾಪಿಯಾಗಿರುವ ನಿನ್ನ|
ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ
ಸರ್ವಾಂತರ್ಯಾಮಿಯಾದ ನಿನ್ನ||

ನಿನ್ನ ಒಂದು ಈ ಭೂ‌ಅರಮನೆಯಲಿ
ಗಾಳಿ, ನೀರು, ಬೆಳಕು
ಶಕ್ತಿಯಾಗಿ ನಿರಂತರ ಚಲಿಸುತಿರಲು|
ಎಂದೋ ಅತಿಥಿಯಾಗಿ
ಬಂದು ಹೋಗುವ ನಾನು
ನಿನ್ನ ಅರಿಯಲು ಸಾಧ್ಯವೇ||

ಅನಂತ ಶತಮಾನಗಳ ಹಿಂದೆ
ನೀ ಸೃಷ್ಟಿಸಿರುವ ನಿನ್ನ ಕುರುಹುಗಳ
ಸರಿಯಾಗಿ ಅರಿಯದಲೆ
ನಿನ್ನ ಅಲ್ಲಗಳೆವುದು ನ್ಯಾಯವೇ?
ನೀನಿತ್ತ ಮತಿಯ ಉಪಯೋಗಿಸಿ
ನಿನ್ನ ಪ್ರಶ್ನೆಮಾಡುವುದು ಸರಿಯೇ||

ಕುರುಡನೊಬ್ಬ ಆನೆಯ ಕಾಲ ಮುಟ್ಟಿ
ಅದು ಕಂಬದಂತಿದೆ ಎಂದಂತೆ
ಪರಿಕಲ್ಪಿಸುವುದು ಸರಿಯೇ?
ನಿನ್ನನರಿಲುಬೇಕು ಅಂತರಂಗದ ಕಣ್ಣು,
ಸತ್ಯವನರಿಯುವ ಕಣ್ಣು||

ಚಂದ್ರ, ಮಂಗಳನ ಮೇಲೆ ಕಾಲಿರುಸಿದಕೆ|
ತಂತ್ರಜ್ಞಾನದಿ ಹಕ್ಕಿಯಂದದಿ
ಹಾರಾಡುವುದ, ಪ್ರಾಣಿಯಂತೆ ನೀರಲಿ
ಚಲಿಸುವುದ ಕಲಿತಿದಕೆ,
ಅಂತರಿಕ್ಷದಲಿ ಸಂಚರಿಸುವುದ
ಅರಿತಿರುವುದಕೆ
ದೇವರಿಲ್ಲವೆಂಬುದು ತರವೇ?||

ಕೋಟ್ಯಾನು ಕೋಟಿ
ಜೀವ ಜಂಗುಳಿಯ ಸೃಷ್ಟಿಸಿ
ಅನ್ನಾದಿಗಳನಿತ್ತು ಸಲಹುವ
ಆ ದೈವವ ಅಪಮಾನಿಸುವುದು
ನ್ಯಾಯವೇ, ಧರ್ಮವೇ ? ||

ಬೇಡ, ಹೆತ್ತತಾಯಿಯನೇ
ಶಂಕಿಸಿಸುವುದು ದೂಷಿಸುವುದು|
ತಾಯಿ ಎದೆಹಾಲು ಕುಡಿದು
ಬೆಳೆದಾದ ಮೇಲೆ,
ಅದು ನಿನ್ನೆಯದೊ ಇಂದಿನದೊ
ಎಂಬ ರಾಜಕೀಯತೆ||

ನೀ ಚಲಿಸುತ್ತಿರುವುದು
ನಿನ್ನ ಶಕ್ತಿಯಿಂದ ಎನ್ನುವುದಾದರೆ!
ಈ ಭೂಮಿ, ಈ ಬ್ರಹ್ಮಾಂಡ
ಸಹಾಸ್ರಾರು ವರುಷ ನಿರಂತರ
ಹೀಗೆ ಸಾಗುತ್ತಿರುವುದು
ಆ ದೈವದಶಕ್ತಿ ಇರುವುದರಿಂದಲೇ|
ಅನ್ಯತಾ ಕಾಲಹರಣವ ಮಾಡದಲೆ
ಅನ್ಯರ ಮಾರ್ಗದಲಿ ತೊಡಕಾಗದೆ
ನೀ ಬಂದ ಕಾರ್ಯ ಮುಗಿಸುವುದೇ ಲೇಸು||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...