Home / ಕವನ / ಕವಿತೆ / ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?
ಜಗಜ್ಜಾಹೀರವಾಗಿರಲು ನೀನು|
ಏಕೆ ಕಾಣಿಸುವುದಿಲ್ಲವೆನ್ನಲಿ
ಸರ್ವವ್ಯಾಪಿಯಾಗಿರುವ ನಿನ್ನ|
ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ
ಸರ್ವಾಂತರ್ಯಾಮಿಯಾದ ನಿನ್ನ||

ನಿನ್ನ ಒಂದು ಈ ಭೂ‌ಅರಮನೆಯಲಿ
ಗಾಳಿ, ನೀರು, ಬೆಳಕು
ಶಕ್ತಿಯಾಗಿ ನಿರಂತರ ಚಲಿಸುತಿರಲು|
ಎಂದೋ ಅತಿಥಿಯಾಗಿ
ಬಂದು ಹೋಗುವ ನಾನು
ನಿನ್ನ ಅರಿಯಲು ಸಾಧ್ಯವೇ||

ಅನಂತ ಶತಮಾನಗಳ ಹಿಂದೆ
ನೀ ಸೃಷ್ಟಿಸಿರುವ ನಿನ್ನ ಕುರುಹುಗಳ
ಸರಿಯಾಗಿ ಅರಿಯದಲೆ
ನಿನ್ನ ಅಲ್ಲಗಳೆವುದು ನ್ಯಾಯವೇ?
ನೀನಿತ್ತ ಮತಿಯ ಉಪಯೋಗಿಸಿ
ನಿನ್ನ ಪ್ರಶ್ನೆಮಾಡುವುದು ಸರಿಯೇ||

ಕುರುಡನೊಬ್ಬ ಆನೆಯ ಕಾಲ ಮುಟ್ಟಿ
ಅದು ಕಂಬದಂತಿದೆ ಎಂದಂತೆ
ಪರಿಕಲ್ಪಿಸುವುದು ಸರಿಯೇ?
ನಿನ್ನನರಿಲುಬೇಕು ಅಂತರಂಗದ ಕಣ್ಣು,
ಸತ್ಯವನರಿಯುವ ಕಣ್ಣು||

ಚಂದ್ರ, ಮಂಗಳನ ಮೇಲೆ ಕಾಲಿರುಸಿದಕೆ|
ತಂತ್ರಜ್ಞಾನದಿ ಹಕ್ಕಿಯಂದದಿ
ಹಾರಾಡುವುದ, ಪ್ರಾಣಿಯಂತೆ ನೀರಲಿ
ಚಲಿಸುವುದ ಕಲಿತಿದಕೆ,
ಅಂತರಿಕ್ಷದಲಿ ಸಂಚರಿಸುವುದ
ಅರಿತಿರುವುದಕೆ
ದೇವರಿಲ್ಲವೆಂಬುದು ತರವೇ?||

ಕೋಟ್ಯಾನು ಕೋಟಿ
ಜೀವ ಜಂಗುಳಿಯ ಸೃಷ್ಟಿಸಿ
ಅನ್ನಾದಿಗಳನಿತ್ತು ಸಲಹುವ
ಆ ದೈವವ ಅಪಮಾನಿಸುವುದು
ನ್ಯಾಯವೇ, ಧರ್ಮವೇ ? ||

ಬೇಡ, ಹೆತ್ತತಾಯಿಯನೇ
ಶಂಕಿಸಿಸುವುದು ದೂಷಿಸುವುದು|
ತಾಯಿ ಎದೆಹಾಲು ಕುಡಿದು
ಬೆಳೆದಾದ ಮೇಲೆ,
ಅದು ನಿನ್ನೆಯದೊ ಇಂದಿನದೊ
ಎಂಬ ರಾಜಕೀಯತೆ||

ನೀ ಚಲಿಸುತ್ತಿರುವುದು
ನಿನ್ನ ಶಕ್ತಿಯಿಂದ ಎನ್ನುವುದಾದರೆ!
ಈ ಭೂಮಿ, ಈ ಬ್ರಹ್ಮಾಂಡ
ಸಹಾಸ್ರಾರು ವರುಷ ನಿರಂತರ
ಹೀಗೆ ಸಾಗುತ್ತಿರುವುದು
ಆ ದೈವದಶಕ್ತಿ ಇರುವುದರಿಂದಲೇ|
ಅನ್ಯತಾ ಕಾಲಹರಣವ ಮಾಡದಲೆ
ಅನ್ಯರ ಮಾರ್ಗದಲಿ ತೊಡಕಾಗದೆ
ನೀ ಬಂದ ಕಾರ್ಯ ಮುಗಿಸುವುದೇ ಲೇಸು||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....