ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?
ಜಗಜ್ಜಾಹೀರವಾಗಿರಲು ನೀನು|
ಏಕೆ ಕಾಣಿಸುವುದಿಲ್ಲವೆನ್ನಲಿ
ಸರ್ವವ್ಯಾಪಿಯಾಗಿರುವ ನಿನ್ನ|
ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ
ಸರ್ವಾಂತರ್ಯಾಮಿಯಾದ ನಿನ್ನ||

ನಿನ್ನ ಒಂದು ಈ ಭೂ‌ಅರಮನೆಯಲಿ
ಗಾಳಿ, ನೀರು, ಬೆಳಕು
ಶಕ್ತಿಯಾಗಿ ನಿರಂತರ ಚಲಿಸುತಿರಲು|
ಎಂದೋ ಅತಿಥಿಯಾಗಿ
ಬಂದು ಹೋಗುವ ನಾನು
ನಿನ್ನ ಅರಿಯಲು ಸಾಧ್ಯವೇ||

ಅನಂತ ಶತಮಾನಗಳ ಹಿಂದೆ
ನೀ ಸೃಷ್ಟಿಸಿರುವ ನಿನ್ನ ಕುರುಹುಗಳ
ಸರಿಯಾಗಿ ಅರಿಯದಲೆ
ನಿನ್ನ ಅಲ್ಲಗಳೆವುದು ನ್ಯಾಯವೇ?
ನೀನಿತ್ತ ಮತಿಯ ಉಪಯೋಗಿಸಿ
ನಿನ್ನ ಪ್ರಶ್ನೆಮಾಡುವುದು ಸರಿಯೇ||

ಕುರುಡನೊಬ್ಬ ಆನೆಯ ಕಾಲ ಮುಟ್ಟಿ
ಅದು ಕಂಬದಂತಿದೆ ಎಂದಂತೆ
ಪರಿಕಲ್ಪಿಸುವುದು ಸರಿಯೇ?
ನಿನ್ನನರಿಲುಬೇಕು ಅಂತರಂಗದ ಕಣ್ಣು,
ಸತ್ಯವನರಿಯುವ ಕಣ್ಣು||

ಚಂದ್ರ, ಮಂಗಳನ ಮೇಲೆ ಕಾಲಿರುಸಿದಕೆ|
ತಂತ್ರಜ್ಞಾನದಿ ಹಕ್ಕಿಯಂದದಿ
ಹಾರಾಡುವುದ, ಪ್ರಾಣಿಯಂತೆ ನೀರಲಿ
ಚಲಿಸುವುದ ಕಲಿತಿದಕೆ,
ಅಂತರಿಕ್ಷದಲಿ ಸಂಚರಿಸುವುದ
ಅರಿತಿರುವುದಕೆ
ದೇವರಿಲ್ಲವೆಂಬುದು ತರವೇ?||

ಕೋಟ್ಯಾನು ಕೋಟಿ
ಜೀವ ಜಂಗುಳಿಯ ಸೃಷ್ಟಿಸಿ
ಅನ್ನಾದಿಗಳನಿತ್ತು ಸಲಹುವ
ಆ ದೈವವ ಅಪಮಾನಿಸುವುದು
ನ್ಯಾಯವೇ, ಧರ್ಮವೇ ? ||

ಬೇಡ, ಹೆತ್ತತಾಯಿಯನೇ
ಶಂಕಿಸಿಸುವುದು ದೂಷಿಸುವುದು|
ತಾಯಿ ಎದೆಹಾಲು ಕುಡಿದು
ಬೆಳೆದಾದ ಮೇಲೆ,
ಅದು ನಿನ್ನೆಯದೊ ಇಂದಿನದೊ
ಎಂಬ ರಾಜಕೀಯತೆ||

ನೀ ಚಲಿಸುತ್ತಿರುವುದು
ನಿನ್ನ ಶಕ್ತಿಯಿಂದ ಎನ್ನುವುದಾದರೆ!
ಈ ಭೂಮಿ, ಈ ಬ್ರಹ್ಮಾಂಡ
ಸಹಾಸ್ರಾರು ವರುಷ ನಿರಂತರ
ಹೀಗೆ ಸಾಗುತ್ತಿರುವುದು
ಆ ದೈವದಶಕ್ತಿ ಇರುವುದರಿಂದಲೇ|
ಅನ್ಯತಾ ಕಾಲಹರಣವ ಮಾಡದಲೆ
ಅನ್ಯರ ಮಾರ್ಗದಲಿ ತೊಡಕಾಗದೆ
ನೀ ಬಂದ ಕಾರ್ಯ ಮುಗಿಸುವುದೇ ಲೇಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ವಿದ್ಯುತ್ ಆವೇಷ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೭

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…