ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ

ಚತುಷ್ಪದಿ

ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; |
ವಿದ್ಯಾಪರೀಕ್ಷಕರಿಗಿಲ್ಲವೈ ದಯವು||

ಆರು ವರ್ಷಗಳಿಂದ ಪೋಗುವೆನು ನಾನು; |
ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. ||
ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು |
ನೀರೊಳಗೆ ಹೋಮ ಗೈದಂತದುದೇನು? ||೧||

ನೊಸಲ ಪೊರೆಯಾಯ್ತು ಪಾಠದ ಭಾರ ಚಿಂತೆ, |
ಹಸಿವು ನೀರಡಿಕೆಯಿರದಾ ವೊಂಟೆಯಂತೆ, ||
ಉಸುಬೆಂಬ ಜೀವಕಾಲದಿ ನಡೆದು ಮುಂತೆ, |
ಬಸವಳಿದು ಬರಿದೆ ಸೇರ್ದೆನು ಪರಿಕೆ (೧) ಸಂತೆ. ||೨||

ಆಟಗಳ ಬರಿದೆ ನಾನಾಡದೇ ಬಿಟ್ಟು, |
ಪಾಟದಲಿ ಬಯಲಾಗಿ ಪೂರ್ಣ ಮನವಿಟ್ಟು, ||
ಮೂಟೆ ಹೊರುವಾ ಎತ್ತಿನೊಲ್ ನಿದ್ದೆಗೆಟ್ಟು, |
ಓಟವೋಡಿದೆ. ನೋವ್ಲಿದ್ ಕಣ್ಣುಕಟ್ಟು! ||೩||

ಹಲವು ಪುಸ್ತಕಗಳನ್ನು ಪರರೊಡನೆ ಬೇಡಿ, |
ಕೆಲವನ್ನು ಕೊಂಡೆನೈ ಹಣವನು ಬಿಸಾಡಿ, ||
ಕಲಿತೆನಾನೆಲ್ಲವನು ಪೂರ್ಣ ಮನಮಾಡಿ, |
ಗೆಲಲಿಲ್ಲವಿದು ಪರೀಕ್ಷೆಯ ಮಂತ್ರಮೋಡಿ! ||೪||

ತಂದೆ ಮನೆಯನ್ನು ಬಿಟ್ಟು, ಪರರ ಕೂಳುಂಡು, |
ಚೆಂದದಾ ಸತಿಯ ನೋಡದೆ ಸಾಸಗೊಂಡು, ||
ಬಂದು ಕಲಿತುದುದೆಲ್ಲ ಇಂಗ್ಲೀಷು ಬಂಡು |
ಸಂದ ಸಂಬಳವು ಸರಕಾರಕ್ಕೆ ದಂಡು! (೨) ||೫||

ನೆನೆಯದಿರ್ದೆನು ಸ್ನಾನಜಪಯೋಗವೆಲ್ಲ; |
ಮನೆಯ ಹಬ್ಬವ ಬಿಟ್ಟರೂ ಸಾಗಲಿಲ್ಲ; ||
ಅನುಜನಿಗೆ ಮದುವೆಯಾಗಲು ಪೋಗಲಿಲ್ಲ; |
ವನಿತೆ ಬಳೆದಾಗ ಸುಖದನುರಾಗವಿಲ್ಲ. ||೬||

ಮರುಗುವನು ಗುರು ನಾನು ಬಹುಮೂರ್ಖನೆಂದು, |
ಹುರುಳಿಲ್ಲ (೩) ವೆನುತ ಹೀನಿಪರು ಜನರಿಂದು. ||
ಬರಿದೆ ಹಣ ತಿಂದೆನೆಂದಾ ತಂದೆ ನೊಂದು, |
ಜರೆಯುವನು, ಜಾರುವುದು ಸ್ತ್ರೀಪ್ರೇಮಬಿಂದು. ||೭||

೧ ಪರೀಕ್ಷೆ ಎಂಬ ಸಂತೆ
೨ ಜುರುಮಾನೆ
೩ ಸತ್ವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧವಳಪುರದ ಪವಾಡ
Next post ಎಷ್ಟು ಕಾಲ?

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…