Home / ಕವನ / ಅನುವಾದ / ಎಷ್ಟು ಕಾಲ?

ಎಷ್ಟು ಕಾಲ?

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ?
ಸಾವಿರ ದಿನವೋ ಒಂದು ದಿನವೋ?
ಒಂದು ವಾರವೋ ಒಂದಷ್ಟು ಶತಮಾನವೋ?
ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ?
‘ಅನಂತ ಕಾಲ’ ಅಂದರೆ ಎಷ್ಟುಕಾಲ?
ಈ ಯೋಚನೆಗಳಲ್ಲಿ ಮುಳುಗಿ
ಉತ್ತರ ಹುಡುಕಲು ಹೊರಟೆ.
ಹೋಗಿ ಮಹಾ ಗುರುಗಳನ್ನು ಕಂಡೆ.
ಅವರ ಪೂಜೆ ಆಚಾರಗಳೆಲ್ಲ ಮುಗಿಯಲೆಂದು ಕಾದೆ.
ಎಲ್ಲ ಮುಗಿಸಿ ದೇವರನ್ನೋ ದೆವ್ವವನ್ನೋ
ಕಾಣಲು ಹೊರಟರು ಅವರೆಲ್ಲ.
ನನ್ನ ಪ್ರಶ್ನೆ ಕೇಳಿ ಬೇಸತ್ತರು.
ಅವರಿಗೆ ತಿಳಿದದ್ದು ತೀರ ಸ್ವಲ್ಪ.
ಅವರು ಎಷ್ಟಂದರೂ ಮಠದ ಉಸ್ತುವಾರಿ ಅಧಿಕಾರಿಗಳು ತಾನೆ?
ಡಾಕ್ಟರುಗಳು ಕನ್ಸಲ್ಟೇಶನ್ನಿನ ನಡುವೆ ಬಿಡುವು ಮಾಡಿಕೊಂಡು
ನನ್ನ ಕೂರಿಸಿ ಮಾತಾಡಿದರು.
ಕೈಯಲ್ಲಿ ಕತ್ತರಿ, ಚೂರಿ;
ಮೈ ತುಂಬ ಔರೋಮೈಸಿನ್ ವಾಸನೆ.
ದಿನಕ್ಕಿಂತ ಮರುದಿನ ಹೆಚ್ಚು ಬ್ಯುಸಿ.
ಅವರ ಮಾತಿನಿಂದ ತಿಳಿದದ್ದು ಇಷ್ಟು;
ಮೈಕ್ರೋಬುಗಳ ಸಾವು ಮುಖ್ಯವಲ್ಲ…
ದಿನವೂ ಸಹಸ್ರಾರು ಸಾಯುತ್ತವೆ…
ಬದುಕಿ ಉಳಿದವು ವಿಕೃತಿಯ ಲಕ್ಷಣ ತೋರುತ್ತವಲ್ಲ ಅದೇ ಸಮಸ್ಯೆ.
ಭಯವಾಗಿ ಹೆಣ ಸುಡುವಲ್ಲಿಗೆ ಹೋದೆ.
ನದಿಯ ಪಕ್ಕದಲ್ಲಿ ಸುಡುತ್ತಾರೆ,
ಬಣ್ಣ ಬಳಿದ ಹೆಣಗಳು,
ಪುಟ್ಟ ಶರೀರಗಳು,
ಶಾಪದ ಪ್ರಭಾವಳಿ ಹೊತ್ತ
ಅರಸರ ಹೆಣಗಳು,
ವಾಂತಿ ಭೇಧಿ ಬಂದು ಸತ್ತ
ಸುಂದರಿಯರ ಶವಗಳು.
ಹೆಣಗಳ ಬೀಚು,
ನಡುವೆ ದಹನ ಪಾರಂಗತರು.
ಬಿಡುವು ಸಿಕ್ಕಾಗ ಅವರತ್ತ
ನನ್ನ ಪ್ರಶ್ನೆಗಳನ್ನು ಎಸೆದೆ.
‘ನಿನ್ನೊ ಸುಡುತ್ತೇವೆ ಬಾ’ ಅಂದರು.
ಅವರಿಗೆ ತಿಳಿದದ್ದು ಅದೊಂದೇ.
ನಮ್ಮೂರಿಗೆ ಬಂದರೆ ಸ್ಮಶಾನದವರು
ಹೆಂಡ ಹೀರುತ್ತಾ, ನಡುನಡುವೆ ಹೇಳಿದರು :
‘ಒಬ್ಬ ಒಳ್ಳೆ ಹುಡುಗಿಯನ್ನು ಹಿಡಿದುಕೋ
ಈ ಎಲ್ಲ ತರಲೆ ಮರೆತುಬಿಡು.’
ಇಷ್ಟು ಸಂತೋಷವಾಗಿದ್ದವರನ್ನು ನೋಡೇ ಇರಲಿಲ್ಲ.
ಬಾಟಲಿಯ ಮೇಲೆ ಬಾಟಲಿ
ಖಾಲಿ ಮಾಡುತ್ತಾ ಹಾಡಿದರು,
ಮತ್ತೇರಿದರು, ಮಹಾನ್ ಸಂಭೋಗ ಪರಿಣತರು.
ಮನೆಗೆ ಬಂದೆ. ಪ್ರಪಂಚವೆಲ್ಲ ಸುತ್ತಿ
ಮುದುಕನಾಗಿದ್ದೆ.
ಈಗ ಯಾರನ್ನೂ ಕೇಳುವುದಿಲ್ಲ.
ಆದರೆ ದಿನ ಕಳೆದಂತೆ ತಿಳಿಯುವುದು ಕಡಿಮೆಯಾಗುತ್ತಿದೆ.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...