ಪಂಪನ ಶಾಂತಿಯ ತೋಟ

ಪಂಪನ ಶಾಂತಿ ತೋಟದಲಿಂದು
ಬರೀ ಕೊಲೆ ಸುಲಿಗೆ
ಧರ್ಮ ಇಟ್ಟಿಗೆ ಗುಡಿಯೆಂದು
ಸಾಗಿದೆ ಹಿಂಸೆ ಎಲ್ಲಿಗೆ

ಛಲದಭಿಮಾನದಲಿ ಬಲೀ ಕುಲವು
ಭೂತ ಗಣದ ನರ್ತನ
ಕಮರಿ ತ್ಯಾಗ ವೈರಾಗ್ಯವೆಲ್ಲವು
ಸಗಿದೆ ಹಿಂಸಾ ಕೀರ್ತನ

ಕವಿಕಲಿ ಸವ್ಯಸಾಚಿಯಿಂದ
ನಾವು ಕಲಿತದ್ದೇನು
ಮನ ಮತಯುದ್ಧದಿಂದ
ನಾವು ಗಳಿಸಿದ್ದೇನು

ಯುದ್ಧ ಭೂಮಿಯ ಪಡೆ
ಕರ್ಣರ ನಿಂತು ಕೊಲಿಸಿ
ಗಡಿ ಗುಜರಾತುಗಳೆಲ್ಲೆಡೆ
ಮತಾಯುಧ ಪಡೆ ನಿಲ್ಲಿಸಿ

ಪಂಪನ ಶಾಂತಿ ತೋಟದಲ್ಲಿ
ಮತವೆಂದರೆ ಧರ್ಮ
ಗೋಳ ಮುಕ್ಕಾಲು ಅಶಾಂತಿಯಲ್ಲಿ
ತಿಳಿಯದು ಓಟಿನ ಮರ್ಮ

ಶಾಂತಿಯ ತೋಟ ತುಂಬೆಲ್ಲ
ಆಯುಧ ಫಲ ಪೈರು
ಚಿಗುರು ಬೆಳದಿಂಗಳೊಳಗೆ
ಖಡ್ಗ ಕಾರುಬಾರು

(ಒತ್ತಾಸೆ – ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು)
*****

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂತುರು ಸೋನೆಯಲ್ಲೊಂದು ಪ್ರೇಮಕಥೆ..
Next post ಹೋಗಿ ನೋಡುವ ಬಾರೆ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…