ಹೋಗಿ ನೋಡುವ ಬಾರೆ

ಹೋಗಿ ನೋಡುವ ಬಾರೆ
ಸಾಗಿ ಸೊಗಸ ದೊರಿ
ಡಾಕ್ಟರ ಸಾಹೇಬನೀತಾ || ಪ ||

ಬೇಗ ವನಸ್ಪತಿ ಔಷದ ಮೂಲಕ
ತೂಗಿ ಕೊಡುವ ಘನ ಆಗಮ ವಂದಿತ
ರಾಗದಿಂದ ನಾ ಬಂದು ಉಸುರಿ ಮನ
ಯೋಗದಿ ನೋಡಿದೆ ಹೋಗಿ ಈ ಕ್ಷಣ || ೧ ||

ವೇದವೇದ್ಯನಾದರಶದಿ ಬಂದು
ಶೋಧನೆ ಸುಜನರ ಕಾಯ್ದುಕೊಂಡು ಕಮಲಾನ್ವಿತ
ಮೇದಿನಿವಾಸನೆ ಗಾದಿಯ ಮೇಲೆ ಗಮಕದಲಿ ಕುಳಿತು
ಬ್ರಹ್ಮಾಂಡಕನಂದದ ರೋಗದ ಮೇದಕ || ೨ ||

ಮನಸಿಜನಂದದಿ ಮಾತನಾಡುವ ಘನರೂಪನೆ
ಶಾಶ್ವತ ಅನುಸರಿಸೀತನ ಸನ್ಮುಖಕೆ ವಂದಿಸಲಾರೆನೆ ?
ಎನಿತು ವಿಸ್ತರಸಿ ಪೇಳುವೆ ತಕ್ಷಣ
ಚಿನುಮಯ ಶಿಶುನಾಳಧೀಶನ ದಯದಿಂ
ಮನಒಲಿದುಸುರಿದೆ ನಿನಗರಿಕಿರಲಿ
ಗುಣದಿ ನಿನ್ನೊಳು ತಿಳಿದು ನೋಡಿಕೋ || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಪನ ಶಾಂತಿಯ ತೋಟ
Next post ಊರ್ಮಿಳೆ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys